ಮಹಿಳೆಯ ಅರೆನಗ್ನ ದೇಹ ಪ್ರದರ್ಶನ ಅಶ್ಲೀಲವಲ್ಲ; ಕೇರಳ ಹೈಕೋರ್ಟ್‌

Date:

Advertisements

ʻಸಂಪೂರ್ಣ ನಗ್ನ ಅಥವಾ ಅರೆ ನಗ್ನತೆಯ ವಿಚಾರದಲ್ಲಿ ಪುರುಷ ಮತ್ತು ಹೆಣ್ಣಿನ ದೇಹಗಳನ್ನು ಸಮಾಜವು ನೋಡುವ ಮತ್ತು ನಡೆಸಿಕೊಳ್ಳುವ ವಿಭಿನ್ನ ದೃಷ್ಟಿಕೋನವು ಬದಲಾಗಬೇಕಿದೆʼ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಟ್ಟಿದೆ.

33 ವರ್ಷದ ಮಹಿಳೆಯೊಬ್ಬರ ಅರೆ ನಗ್ನ ದೇಹದ ಮೇಲೆ ಅವರ ಮಕ್ಕಳು ಚಿತ್ರ ಬಿಡಿಸುವ ವಿಡಿಯೋ ಕುರಿತು ದಾಖಲಾಗಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ..

ʻಚಿತ್ರಕಲೆ’ಗಾಗಿ ‘ಕ್ಯಾನ್ವಾಸ್’ ರೂಪದಲ್ಲಿ ಬಳಸಲು ಮಹಿಳೆಯು ತನ್ನ ದೇಹವನ್ನು ಅನುಮತಿಸಿದ್ದಲ್ಲಿ ಯಾವುದೇ ಅಶ್ಲೀಲತೆ, ಲೈಂಗಿಕತೆ ಕಾಣುತ್ತಿಲ್ಲ. ತಾಯಿಯ ದೇಹದ ಮೇಲೆ ಮಕ್ಕಳು ಚಿತ್ರಿಸಿದರೆ, ಲೈಂಗಿಕ ಕ್ರಿಯೆಯ ಭಾಗ ಎಂದು ನಿರೂಪಿಸಲಾಗುವುದಿಲ್ಲ ಅಥವಾ ಲೈಂಗಿಕ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಹೇಳಲಾಗುವುದಿಲ್ಲʼ ಎಂದು ಕೋರ್ಟ್ ಹೇಳಿದೆ.

Advertisements

ʻಪಿತೃಪ್ರಧಾನ ಸಮಾಜದ ಕಲ್ಪನೆಗಳನ್ನು ಪ್ರಶ್ನಿಸಲು ಮತ್ತು ಸ್ತ್ರೀ ದೇಹದ ಅತಿಯಾದ ಲೈಂಗಿಕತೆಯ ವಿರುದ್ಧ ಸಂದೇಶವನ್ನು ಹರಡಲು ತಾನು ಈ ವಿಡಿಯೋ ಚಿತ್ರೀಕರಿಸಿದ್ದೇನೆʼ ಎಂದು ಕೋರ್ಟ್​ನಲ್ಲಿ ಮಹಿಳೆ ವಾದಿಸಿದ್ದರು.

ʻಮಹಿಳೆಯ ನಗ್ನ ದೇಹವನ್ನು ಲೈಂಗಿಕ ಅಥವಾ ಅಶ್ಲೀಲ ಎಂದು ಪರಿಗಣಿಸಬಾರದು. ಪುರುಷರ ದೇಹದ ಸ್ವಾತಂತ್ರ್ಯವನ್ನು ವಿರಳವಾಗಿ ಪ್ರಶ್ನಿಸಲಾಗುತ್ತದೆ. ಆದರೆ, ಮಹಿಳೆಯರು ನಗ್ನವಾಗಿ ಕಂಡಲ್ಲಿ ಪಿತೃಪ್ರಧಾನ ಸಮಾಜದ ನಿರಂತರ ಬೆದರಿಕೆಗೆ ಒಳಗಾಗುತ್ತಾರೆ. ಮಹಿಳೆಯರೂ ಕೂಡ ತಮ್ಮ ದೇಹ ಮತ್ತು ಜೀವನದ ಆಯ್ಕೆಗಳನ್ನು ಹೊಂದಿದ್ದಾರೆʼ ಎಂದು ಕೋರ್ಟ್​ ಅಭಿಪ್ರಾಯಟ್ಟಿದೆ.

ʻಈ ಪ್ರಕರಣದಲ್ಲಿ ಮಕ್ಕಳನ್ನು ಅಶ್ಲೀಲವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ದೃಶ್ಯಗಳಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ಅರ್ಜಿದಾರರು ಮಹಿಳೆಯ ಅರೆನಗ್ನ ದೇಹವನ್ನು ರಾಜಕೀಯ ರೂಪದಲ್ಲಿ ಪ್ರಶ್ನಿಸಲಾಗಿದೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎಡಪ್ಪಗತ್, ಅರ್ಜಿದಾರ ಮಹಿಳೆಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.  .

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X