ತಮಿಳುನಾಡು| ಮಿತಿಗಿಂತ 10 ರೂ ಹೆಚ್ಚು; ಮಹಿಳೆಯಿಂದ 50,010 ರೂ ವಶಪಡಿಸಿಕೊಂಡ ಎಲೆಕ್ಷನ್ ಸ್ಕ್ವಾಡ್!

Date:

Advertisements

ಮಿತಿಗಿಂತ 10 ರೂಪಾಯಿ ಹೆಚ್ಚಳವಿದ್ದ ಕಾರಣ ಕೊಯಮತ್ತೂರಿನ ಮಹಿಳೆಯೊಬ್ಬರಿಂದ ಎಲೆಕ್ಷನ್ ಸ್ಕ್ವಾಡ್ 50,010 ರೂಪಾಯಿ ನಗದು ವಶಕ್ಕೆ ಪಡೆದ ಘಟನೆ ನಡೆದಿದೆ. ಮಾದರಿ ನೀತಿ ಸಂಹಿತೆ ಪ್ರಕಾರ 50,000 ರೂಪಾಯಿ ನಗದು ಹೊಂದಿರಬಹುದು. ಆದರೆ ಮಹಿಳೆ ಅದಕ್ಕಿಂತ ಹತ್ತು ರೂಪಾಯಿ ಹೆಚ್ಚು ಹೊಂದಿದ್ದು ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯೆಂದು ಹೇಳಿ ಹಣ ನಗದು ವಶಪಡಿಸಿಕೊಳ್ಳಲಾಗಿದೆ.

ಅದು ಕೂಡಾ ಮಹಿಳೆಯು ತನ್ನ ಮೊಬೈಲ್ ಫೋನ್ ಕವರ್‌ನಲ್ಲಿ ಹೊಂದಿದ್ದ ಹತ್ತು ರೂಪಾಯಿಯನ್ನು ಸೇರಿಸಿ ಈ ಎಲೆಕ್ಷನ್ ಸ್ಕ್ವಾಡ್ ಮಹಿಳೆಯ ಬಳಿ 50,010 ರೂಪಾಯಿ ಇದೆ ಎಂದು ಲೆಕ್ಕ ಹಾಕಿದೆ. ಅದಾದ ಬಳಿಕ ನಗದು ವಶಕ್ಕೆ ಪಡೆದಿದೆ!

ಇದನ್ನು ಓದಿದ್ದೀರಾ?  ಮದ್ದೂರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ನಗದು ಪತ್ತೆ, ಈವರೆಗೂ ರಾಜ್ಯದಲ್ಲಿ ₹15 ಕೋಟಿ ಜಪ್ತಿ

Advertisements

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮಹಿಳೆಯ ಪತಿ ಸುರೇಶ್ ಬಾಬು ಮಾಲೀಕತ್ವದ ಮೈಕ್ರೋ ಇಂಡಸ್ಟ್ರಿ ಘಟಕದ ಖಾತೆಗಳನ್ನು ನಿರ್ವಹಿಸುತ್ತಿದ್ದ ಸೂರ್ಯ ಪ್ರಿಯಾ ಅವರು ಎಸ್‌ಐಎಚ್‌ಎಸ್ ಕಾಲೋನಿಯಲ್ಲಿರುವ ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಘಟಕಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಿಂಗಾನಲ್ಲೂರು ಬಳಿಯ ಇಂದಿರಾ ಗಾರ್ಡನ್‌ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡ ಮಹಿಳೆಯನ್ನು ತಡೆದಿದೆ ಎಂದು ವರದಿಯಾಗಿದೆ.

“‘ನಮ್ಮ ಸಿಬ್ಬಂದಿಗೆ ವಾರದ ಸಂಬಳ ನೀಡಲು ನಾನು 500 ರೂಪಾಯಿ ಮುಖಬೆಲೆಯ ಒಟ್ಟು 50,000 ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಚುನಾವಣಾ ನಿಯಮಗಳ ಪ್ರಕಾರ ನಿರ್ಬಂಧಗಳ ಬಗ್ಗೆ ನನಗೆ ತಿಳಿದಿದ್ದರಿಂದ, ನಾನು ಮಿತಿಗೆ ಅನುಗುಣವಾಗಿ 50,000 ರೂಪಾಯಿಯನ್ನು ಮಾರ್ಚ್ 16 ರಂದು ಬ್ಯಾಂಕಿನಿಂದ ವಿತ್‌ಡ್ರಾ ಮಾಡಿದ್ದೆ. ಇದರ ಬಗ್ಗೆ ನನ್ನಲ್ಲಿ ದಾಖಲೆಗಳಿದೆ” ಎಂದು ಮಹಿಳೆ ಹೇಳಿದ್ದಾರೆ.

ಇದನ್ನು ಓದಿದ್ದೀರಾ?   ಐಟಿ ದಾಳಿ | ಕ್ರಷರ್ ಮಾಲೀಕನ ಮನೆಯಲ್ಲಿ ₹1 ಕೋಟಿ ನಗದು, 800 ಗ್ರಾಂ ಚಿನ್ನ ಪತ್ತೆ

“ವೇತನದ ದಿನದಂದು ಅದನ್ನು ಉದ್ಯೋಗಿಗಳಿಗೆ ನೀಡಲು ನಾನು ಹಣವನ್ನು ಮನೆಯಲ್ಲಿ ಇರಿಸಿದ್ದೆ. ನಾನು ಎಲ್ಲಾ ವಿವರಣೆಗಳನ್ನು ನೀಡಿ ಪುರಾವೆಯನ್ನು ತೋರಿಸಿದಾಗ, ಎಫ್‌ಎಸ್‌ಟಿ ತಂಡದ ಸದಸ್ಯರೊಬ್ಬರು ನನ್ನ ಬಳಿ 20 ರೂಪಾಯಿ ಕೇಳಿದರು. ನಾನು ನನ್ನ ಮೊಬೈಲ್ ಫೋನ್ ಕವರ್‌ನಲ್ಲಿ ತುರ್ತು ಬಳಕೆಗೆ ಇಟ್ಟಿದ್ದ ಕೇವಲ 10 ರೂಪಾಯಿ ನೋಟನ್ನು ನೀಡಿದೆ. ಒಟ್ಟು ಮೌಲ್ಯ 50,000 ರೂಪಾಯಿ ದಾಟಿದ್ದರಿಂದ 50,010 ರೂಪಾಯಿಯನ್ನು ವಶಪಡಿಸಿಕೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ನನಗೆ ಹೇಳಿದರು” ಎಂದು ಸೂರ್ಯ ಪ್ರಿಯಾ ಹೇಳಿಕೊಂಡಿದ್ದಾರೆ.

3 ಗಂಟೆಗಳ ಕಾಲ ಕಿರುಕುಳ

ಇನ್ನು ಹೆಚ್ಚಿನ ವಿಚಾರಣೆಗಾಗಿ ದಕ್ಷಿಣ ತಾಲೂಕು ಕಚೇರಿಗೆ ಬರುವಂತೆ ಅಸಭ್ಯವಾಗಿ ಹೇಳಿದ ತಂಡ, ಆಕೆಗೆ ಮತ್ತಷ್ಟು ಕಿರುಕುಳ ನೀಡಿದೆ ಎಂದು ಆರೋಪಿಸಿದ್ದಾರೆ. ಸುಮಾರು ಮೂರು ಗಂಟೆಗಳ ನಂತರ, ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳು ಹಣವನ್ನು ಹಿಂದಿರುಗಿಸಿ ಮಹಿಳೆಯನ್ನು ಬಿಟ್ಟಿದ್ದಾರೆ. ಸೂರ್ಯ ಪ್ರಿಯಾ ಅವರು ನಂತರ ಜಿಲ್ಲಾಧಿಕಾರಿ ಕ್ರಾಂತಿ ಕುಮಾರ್ ಪತಿ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕಳ್ಳರಿಗೆ ಬಿಟ್ಟು ಅಮಾಯಕರಿಗೆ ತೊಂದರೆ ಕೊಡುತಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X