ವಿದೇಶಿ ವೈದ್ಯ ಎಂದು ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ 22 ಮಹಿಳೆಯರಿಗೆ 4.5 ಕೋಟಿ ರೂ. ವಂಚನೆ

Date:

Advertisements

ತಾನು ಇಂಗ್ಲೆಂಡ್‌ ಮೂಲದ ಹೃದಯ ತಜ್ಞನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ 22 ಮಹಿಳೆಯರಿಗೆ 4.5 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿದ ಪ್ರಕರಣ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ.

ವಂಚಕನಿಂದ ಅಹಮದಾಬಾದ್‌ನ ಚರ್ಮರೋಗ ತಜ್ಞ ಮಹಿಳೆಯೊಬ್ಬರು 18 ಲಕ್ಷ ರೂ. ಕಳೆದುಕೊಂಡು ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿದ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಭೇಟಿಯಾದ ನಂತರ ತನ್ನ ಹೆಸರು ಡಾ. ದಿಲೀಪ್ ಕುಮಾರ್, ಬ್ರಿಟನ್‌ನಲ್ಲಿ ಹೃದಯ ತಜ್ಞನಾಗಿದ್ದೇನೆ ಎಂದು ಮಹಿಳೆಗೆ ವಂಚಕ ಹೇಳಿಕೊಂಡಿದ್ದ.

ಮಹಿಳೆಯ ದೂರಿನ ನಂತರ ಪೊಲೀಸರು ತನಿಖೆಯ ಜಾಡು ಹಿಡಿದಾಗ ಹಲವು ಮಹಿಳೆಯರನ್ನು ಇದೇ ರೀತಿ ನಂಬಿಸಿ ವಂಚಿಸಿದ್ದ. ಮೋಸಕ್ಕೊಳಗಾದ ಚರ್ಮರೋಗ ತಜ್ಞರು ಆರಂಭದಲ್ಲಿ ವಂಚನೆಯ ಬಲೆಗೆ ಬಿದ್ದಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಪೊಲೀಸರು ಹಲವು ಪ್ರಕರಣಗಳ ಬಗ್ಗೆ ಹೇಳಿದಾಗ ಸತ್ಯವನ್ನು ತಿಳಿದುಕೊಂಡರು.

Advertisements

ಆರೋಪಿಯು ಸಾಮಾಜಿಕ ಮಾಧ್ಯಮಗಳು ಮತ್ತು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ತನ್ನ ಪ್ರೊಫೈಲ್‌ಗಳನ್ನು ರಚಿಸುವ ಮೂಲಕ ಸಾಮಾನ್ಯವಾಗಿ 30 ರಿಂದ 40 ವರ್ಷದೊಳಗಿನ ಮಹಿಳೆಯರಿಗೆ ವಿವಾಹವಾಗುವುದಕ್ಕೆ ವಧುವನ್ನು ಹುಡುಕ್ಕುತ್ತಿರುವುದಾಗಿ ಹೇಳಿಕೊಂಡು ನಂಬಿಸುತ್ತಿದ್ದ.

ಈ ಸುದ್ದಿ ಓದಿದ್ದೀರಾ? ಭಾರತದ ವಿಷಪೂರಿತ ಕೆಮ್ಮಿನ ಸಿರಪ್‌ ಮಾರುಕಟ್ಟೆಗೆ ಬರಲು ಲಂಚ ನೀಡಿಕೆ: ಉಜ್ಬೇಕಿಸ್ತಾನ್

ಮಹಿಳೆಯರ ನಂಬಿಕೆ ಗಳಿಸಿದ ನಂತರ ಅವರಿಂದ ಹಣವನ್ನು ಕೇಳುತ್ತಿದ್ದ. ವಂಚಕ ವೈದ್ಯನು ವೈದ್ಯಕೀಯವಾಗಿ ತಾನು ಸಂಕಷ್ಟದಲ್ಲಿದ್ದೇನೆ, ದುಬಾರಿ ಉಡುಗೊರೆ, ವೈದ್ಯಕೀಯ ಸಲಕರಣೆಗಳ ಖರೀದಿ ಮುಂತಾದ ಕಾರಣಗಳನ್ನು ನೀಡಿ ಮಹಿಳೆಯರಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಮೋಸ ಹೋಗಿದ್ದ ಹಲವು ಮಹಿಳೆಯರು ಆರಂಭದಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದರು. ಸಾಕಷ್ಟು ಮನವೊಲಿಕೆಯ ನಂತರ, ಅವರು ವಂಚನೆಗೊಳಗಾಗಿರುವ ಬಗ್ಗೆ ತಿಳಿಸಿದರು.

ನಕಲಿ ಹೃದಯತಜ್ಞನ ಬಲೆಗೆ ಇನ್ನು ಹಲವು ಮಹಿಳೆಯರು ಬಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇವರೆಲ್ಲ ಪೊಲೀಸರನ್ನು ಸಂಪರ್ಕಿಸಲು ಭಯಪಡುತ್ತಿದ್ದಾರೆ. ಈ ಘಟನೆಯ ನಂತರ ಆನ್‌ಲೈನ್‌ನಲ್ಲಿ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವಾಗ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ. ವಂಚಕನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X