ಆಪರೇಷನ್ ಸಿಂಧೂರ | ಸುಳ್ಳು, ವದಂತಿಗೆ ಮುಗಿಬಿದ್ದ ಭಾರತೀಯ ಮಾಧ್ಯಮಗಳು; ಸತ್ಯ ಬಿಚ್ಚಿಡುತ್ತಿರುವ ಝುಬೇರ್

Date:

Advertisements

ಬುಧವಾರ ಮುಂಜಾನೆ, ಪಾಕಿಸ್ತಾನದ 9 ಪ್ರದೇಶಗಳ ಮೇಲೆ ಭಾರತ ದಾಳಿ ಮಾಡಿದೆ. ಈ ದಾಳಿ ಬೆನ್ನಲ್ಲೇ ನಾನಾ ರೀತಿಯ ಸುದ್ದಿಗಳು, ವದಂತಿಗಳು ಹರಿದಾಡುತ್ತಿವೆ. ಇಸ್ರೇಲ್‌, ಹಮಾಸ್‌, ಇರಾನ್‌ನಲ್ಲಿ ಇತ್ತೀಚೆಗೆ ನಡೆದಿದ್ದ ದಾಳಿಗಳ ವಿಡಿಯೋಗಳು, ಫೋಟೋಗಳನ್ನು ಭಾರತ ನಡೆಸಿದ ದಾಳಿ ಸಮಯದ ದೃಶ್ಯಾವಳಿಗಳು ಎಂದು ಭಾರತೀಯ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಅಲ್ಲದೆ, ಪಾಕಿಸ್ತಾನವೂ ಕೆಲವು ಸುಳ್ಳುಗಳನ್ನು ಹೇಳುತ್ತಿದೆ. ಇಂತಹ ಹಲವಾರು ಸುಳ್ಳು ಸುದ್ದಿಗಳನ್ನು ಬಯಲಿಗೆಳೆದು, ಸತ್ಯವನ್ನು ತಿಳಿಸುವಲ್ಲಿ ‘ಆಲ್ಟ್‌ ನ್ಯೂಸ್‌’ ಸಹ ಸಂಸ್ಥಾಪಕ, ಫ್ಯಾಕ್ಟ್‌ಚೆಕರ್ ಮೊಹಮ್ಮದ್ ಝುಬೇರ್ ತೊಡಗಿದ್ದಾರೆ. ಮುಂಜಾನೆಯಿಂದ ಈವರೆಗೆ ಹತ್ತಾರು ಸುಳ್ಳು ಸುದ್ದಿಗಳನ್ನು ಬೆಳಕಿಗೆ ತಂದಿದ್ದಾರೆ.

ಭಾರತದ ದಾಳಿ ವೇಳೆ, ಭಾರತೀಯ ಸೇನೆ ಸೇರಿದ ಎರಡು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಪಾಕ್‌ ಹೊಡೆದಿರುವುದು ಡ್ರೋನ್‌ಗಳನ್ನಷ್ಟೇ ಎಂಬ ಮಾಹಿತಿಯನ್ನು ಝುಬೇರ್ ಕಲೆ ಹಾಕಿದ್ದಾರೆ.

ಗಾಜಾ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯ ವೇಳೆ ಸಂಭವಿಸಿದ್ದ ಸ್ಪೋಟಗಳ ವಿಡಿಯೋಗಳನ್ನು ಹಲವಾರು ನೆಟ್ಟಿಗರು ಭಾರತದ ಮೇಲೆ ನಡೆಸಿದ ದಾಳಿಯ ದೃಶ್ಯಾವಳಿಗಳೆಂದು ಹಂಚಿಕೊಂಡಿದ್ದಾರೆ. ಆ ವಿಡಿಯೋಗಳ ಹಿನ್ನೆಲೆಯನ್ನು ಹುಡುಕಿ ಹೊರತೆಗೆದು ಜನರಿಗೆ ಸತ್ಯಗಳನ್ನು ಝುಬೇರ್ ತಿಳಿಸಿದ್ದಾರೆ.

Advertisements

ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯು ಹಳೆಯ ಮತ್ತು ಎಡಿಟ್ ಮಾಡಿದ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದು, ಅದು ಪಾಕ್ ಮೇಲೆ ಭಾರತ ನಡೆಸಿದ ದಾಳಿಯ ವಿಡಿಯೋವೆಂದು ವರದಿ ಬಿತ್ತರಿಸಿದೆ. ಆ ವಿಡಿಯೋ ನೈಜ ವಿಡಿಯೋ ಅಲ್ಲ. ಅದೊಂದು ಎಡಿಟ್ ಮಾಡಲಾದ ವಿಡಿಯೋ ಎಂಬುದನ್ನು ಝುಬೇರ್ ಕಂಡುಹಿಡಿದಿದ್ದಾರೆ.

ಇನ್ನು, ವಿಡಿಯೋ ಗೇಮ್‌ನ ವಿಡಿಯೋಗಳನ್ನು ಪಾಕ್ ಮೇಲಿನ ದಾಳಿಯ ವಿಡಿಯೋಗಳೆಂದು ಹಲವಾರು ಹಂಚಿಕೊಂಡಿದ್ದಾರೆ. ಅಂತಹ ನಕಲಿ ವಿಡಿಯೋಗಳು, ಸುಳ್ಳು ವದಂತಿಗಳನ್ನು ಝುಬೇರ್ ಬಹಿರಂಗಗೊಳಿಸಿದ್ದಾರೆ.

ಸತ್ಯಶೋಧನೆ ಮತ್ತು ನೈಜ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಝುಬೇರ್ ಅವರನ್ನು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಝುಬೇರ್ ಅವರ ಆಲ್ಟ್‌ನ್ಯೂಸ್‌ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಇದೇ ಕೆಲಸವನ್ನು ಸರ್ಕಾರ ಮಾಡುವುದಿದ್ದರೆ, 100 ಕೋಟಿ ರೂ. ಬಜೆಟ್‌ ಮೀಸಲಿಡುತ್ತಿತ್ತು ಎಂದು ಕೆಲವರು ಸರ್ಕಾರವನ್ನು ಟ್ರೋಲ್ ಮಾಡಿದ್ದಾರೆ.

ಸತ್ಯವನ್ನು ಜನರ ಮುಂದಿಡುತ್ತಿರುವ ಝುಬೇರ್ ಅವರು ಭಾರತ ರತ್ನ ಪ್ರಶಸ್ತಿ ಪಡೆಯಲು ಅರ್ಹರು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಭಾರತೀಯರು, ನಾವು ಝುಬೇರ್ ಅವರ ಕೆಲಸವನ್ನು ಮೆಚ್ಚಲೇಬೇಕು ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X