ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ಸುಮಾರು 27ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮಂಗಳವಾರ ಭೋಲೆ ಬಾಬಾ ಎಂಬವರ ಧಾರ್ಮಿಕ ಪ್ರವಚನ(ಸತ್ಸಂಗ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಗಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರು ಗಾಯಗೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಈವರೆಗೆ 27 ಮೃತದೇಹಗಳು ಇಟಾಹ್ ಜಿಲ್ಲೆಯ ಆಸ್ಪತ್ರೆಗೆ ತಲುಪಿರುವುದಾಗಿ ವರದಿಯಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ.
UP के हाथरस के रतिभानपुर में सत्संग के समापन के दौरान भगदड़ मचने के बाद लगभग 2 दर्जन लोगों की मौत, दर्जनों लोग घायल.
सूचना पर पहुंची पुलिस व प्रशासन ने सैकड़ों गंभीर अवस्था में अस्पताल में कराया भर्ती, सिकंदराराऊ कोतवाली क्षेत्र के गांव फुलराई की घटना.#Hathras pic.twitter.com/3QzZ1cjVjn
— Shivam Pratap Singh (@journalistspsc) July 2, 2024
ಘಟನಾ ಸ್ಥಳವು ಇಟಾಹ್-ಸಿಕಂದರರಾವ್ ಗಡಿಯಲ್ಲಿದ್ದು, ಮೃತಪಟ್ಟವರಲ್ಲಿ ಹಲವಾರು ಮಹಿಳೆಯರು ಮತ್ತು ಒಂದು ಮಗು ಕೂಡ ಸೇರಿರುವುದಾಗಿ ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿರುವುದಾಗಿ ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ.
हाथरस में भगदड़ के बाद जो तस्वीरें आ रही वह भयानक हैं।
स्थानीय रिपोर्टर 60 से ज्यादा मौत की बात कह रहे हैं। #Hathras pic.twitter.com/q3pYX7LRkm
— Rajesh Sahu (@askrajeshsahu) July 2, 2024
ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹ!
ಕಾಲ್ತುಳಿತ ಸಂಭವಿಸಿದ ಬಳಿಕ ಹಲವರು ಸಾವನ್ನಪ್ಪಿದ್ದು, ಮಹಿಳೆಯರು ಹಾಗೂ ಮಕ್ಕಳ ಮೃತದೇಹಗಳು ಅಲ್ಲಲ್ಲಿ ಬಿದ್ದಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಮೃತದೇಹಗಳನ್ನು ಟೆಂಪೋಗಳಲ್ಲಿ ಸಾಗಿಸುತ್ತಿರುವ ವಿಡಿಯೋ ಕೂಡ ಹರಿದಾಡಿದೆ.
#Hathras: हाथरस के रतिभानपुर में भोले बाबा के सत्संग के समापन के दौरान में मची भगदड़
⚡भगदड़ में कई लोगों की मौत की सूचना, कई महिलाएं, बच्चे और पुरुष दब गए
⚡अबतक 15 महिलाओं और बच्चों को इलाज के लिए एटा मेडिकल कॉलेज भेजा गया है।@hathraspolice @Uppolice @112UttarPradesh #हाथरस pic.twitter.com/E85mbxN2vU
— Newslive 24×7 (@kanpurtak) July 2, 2024
