ದೆಹಲಿ | 4000ಕ್ಕೂ ಅಧಿಕ ಬಾದಾಮಿ ಗೋದಾಮು ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

Date:

Advertisements

ದೆಹಲಿಯ ಕರವಲ್ ನಗರದ ಬಾದಾಮಿ ಗೋದಾಮಿನಲ್ಲಿ ಕೆಲಸ ಮಾಡುವ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡುತ್ತಿದ್ದಾರೆ. ಮಾರ್ಚ್ ಒಂದರಿಂದ ಈ ಮುಷ್ಕರ ಆರಂಭವಾಗಿದ್ದು, ಕಾರ್ಮಿಕರು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಕಾರ್ಮಿಕರ ಒಟ್ಟು ಹನ್ನೊಂದು ಬೇಡಿಕೆಗಳ ಪೈಕಿ ವೇತನ ಹೆಚ್ಚಳ ಮತ್ತು ನಿಗದಿತ ಅವಧಿಯ ಕೆಲಸ ಪ್ರಮುಖ ಬೇಡಿಕೆಯಾಗಿದೆ. ಈ ಕಾರ್ಮಿಕರು ಸುಲಿಯುವ ಪ್ರತಿ ಕೆಜಿ ಬಾದಾಮಿಗೆ (almond) ಎರಡು ರೂಪಾಯಿ ಕೂಲಿಯನ್ನು ಪಡೆಯುತ್ತಾರೆ. ಹಾಗೆಯೇ ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಕಾರ್ಮಿಕರಾದ ಲಲಿತಾ, “ವೇತನ ಹೆಚ್ಚಳಕ್ಕಾಗಿ ನಾವು 2012ರಲ್ಲಿ ಪ್ರತಿಭಟನೆ ಮಾಡಿದ್ದು, ಆಗ ನಮ್ಮ ಕೂಲಿಯನ್ನು ಪ್ರತಿ ಕೆಜಿ ಬಾದಾಮಿಗೆ ಎರಡು ರೂಪಾಯಿಯಂತೆ ಏರಿಸಲಾಗಿದೆ. ಪ್ರತಿ ವರ್ಷವೂ ಕೂಲಿ ಹೆಚ್ಚಿಸುವ ಭರವಸೆ ಗೋದಾಮಿನ ಮಾಲೀಕರು ನೀಡಿದ್ದಾರೆ. ಆದರೆ 12 ವರ್ಷಗಳಿಂದ ಕೂಲಿ ಹೆಚ್ಚಳ ಮಾಡಲಾಗಿಲ್ಲ. ಈಗ ನಾವು ಪ್ರತಿ ಕೆಜಿಗೆ 12 ರೂಪಾಯಿ ನೀಡುವ ಬೇಡಿಕೆ ಇರಿಸಿದ್ದೇವೆ” ಎಂದು ತಿಳಿಸಿದರು.

Advertisements

ಎನ್‌ಡಿಟಿವಿಗೆ ಪ್ರತಿಕ್ರಿಯಿಸಿದ ಮಹಿಳಾ ಕಾರ್ಮಿಕರಾದ ರಂಜು “ನಾವು ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ವೇತನ ಹೆಚ್ಚಳ ಪಡೆಯಲು ನಾವು ಅರ್ಹರು. ನಮ್ಮ ಗೋದಾಮಿನ ಮಾಲೀಕರು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಮತ್ತು ಅಧಿಕ ಅವಧಿ ಕೆಲಸ ಮಾಡಿಸುತ್ತಾರೆ. ನಾವು ಹಲವಾರು ವರ್ಷಗಳಿಂದ ಕೂಲಿ ಏರಿಕೆಗೆ ಆಗ್ರಹಿಸುತ್ತಿದ್ದೇವೆ. ಆದರೆ ಏರಿಕೆ ಮಾಡಿಲ್ಲ. ನಮ್ಮ ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದಲ್ಲಿ ನಮ್ಮ ಮುಷ್ಕರ ನಿಲ್ಲದು” ಎಂದು ಎಚ್ಚರಿಕೆ ನೀಡಿದರು.

“ಮಾರ್ಚ್ 11ರಂದು ನಮ್ಮ ರ್‍ಯಾಲಿ ಮೇಲೆ ದಾಳಿ ನಡೆಸಲಾಗಿದ್ದು ಹತ್ತು ಮಂದಿ ಆಸ್ಪತ್ರೆ ಸೇರಿದ್ದಾರೆ. ನಾವು ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸರು ನಮಗೆ ಸಹಾಯ ಮಾಡಿಲ್ಲ. ಮಾರ್ಚ್ 13ರಂದು ಕೆಲವು ಗೂಂಡಾಗಳು ಪ್ರತಿಭಟನಾಕಾರರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ” ಎಂದು ಕಾರ್ಮಿಕರು ಹೇಳಿದ್ದಾರೆ.

ಇನ್ನು ಈ ಕಾರ್ಮಿಕರು ಮುಂಜಾನೆ 4 ಗಂಟೆಗೆ ಗೋದಾಮಿಗೆ ಬಂದು ಸಂಜೆ 6 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಆದರೆ 150-200 ರೂಪಾಯಿ ಮಾತ್ರ ದುಡಿಯಲು ಸಾಧ್ಯವಾಗುತ್ತದೆ. ಆದ್ದರಿಂದಾಗಿ ಈಗ ಕಾರ್ಮಿಕರು ದಿನಕ್ಕೆ ಎಂಟು ಗಂಟೆ ಕೆಲಸದ ಬೇಡಿಕೆ ಇರಿಸಿದ್ದಾರೆ. ಪ್ರತಿ ಕೆಜಿ ಬಾದಾಮಿಗೆ 12 ರೂಪಾಯಿ ನೀಡಬೇಕು, ಈ ವೇತನವನ್ನು ಪ್ರತಿ ತಿಂಗಳ ಐದು ದಿನದ ಒಳಗಾಗಿ ನೀಡಬೇಕೆಂದು ಆಗ್ರಹಿಸಿದ್ದಾರೆ.

4000ಕ್ಕೂ ಅಧಿಕ ಬಾದಾಮಿ ಗೋದಾಮು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದರಿಂದಾಗಿ ದೆಹಲಿಯ ಕರವಲ್ ನಗರದ ಬಹುತೇಕ ಎಲ್ಲ ಗೋದಾಮುಗಳು ಮುಚ್ಚಿವೆ. ಕೆಲವು ಗೋದಾಮು ಮಾಲೀಕರು ತಮಗೆ ನಷ್ಟವಾಗುತ್ತಿದೆ ಎಂದರೆ ಇನ್ನು ಕೆಲವು ನಮಗೆ ಇತರೆ ಉದ್ಯಮಗಳು ಕೂಡಾ ಇದೆ ಎನ್ನುತ್ತಿದ್ದಾರೆ. ಕಾರ್ಮಿಕರ ಗೋಳು ಕೇಳಬೇಕಾದ ಸರ್ಕಾರ, ಕಿವುಡಾಗಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X