ಆಘಾತಕಾರಿ ಘಟನೆ | CNG ತುಂಬಿಸಲು ಕಾರಿನಿಂದ ಹೊರ ಬನ್ನಿ ಎಂದಿದ್ದಕ್ಕೆ ಎದೆಗೆ ಗನ್‌ ಇಟ್ಟ ಮಹಿಳೆ; ವಿಡಿಯೋ ವೈರಲ್

Date:

Advertisements

ಪೆಟ್ರೋಲ್‌ ಬಂಕ್‌ನಲ್ಲಿ ಕಾರಿಗೆ ಸಿಎನ್‌ಜಿ ತುಂಬಿಸುವಾಗ ಕಾರಿನೊಳಗೆ ಕೂರಬಾರದು, ಹೊರಗೆ ಬನ್ನಿ ಎಂದಿದ್ದಕ್ಕೆ ಉದ್ರಿಕ್ತಗೊಂಡ ಮಹಿಳೆಯೊಬ್ಬರು ಪೆಂಟ್ರೋಲ್ ಪಂಪ್‌ ಉದ್ಯೋಗಿಯ ಎದೆಗೆ ಗನ್‌ ಇಟ್ಟು ದಾಂಧಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯ ನಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಹಾರ್ದೋಯ್ ಜಿಲ್ಲೆಯಲ ಬಿಲ್ಗ್ರಾಮ್ ಪಟ್ಟಣದ ಬಳಿಯ ‘ಎಚ್‌ಪಿ’ ಪೆಟ್ರೋಲ್‌ ಬಂಕ್‌ನಲ್ಲಿ ಘಟನೆ ನಡೆದಿದೆ. ವರದಿ ಪ್ರಕಾರ, ಕಾರಿನಲ್ಲಿ ತಂದೆ, ತಾಯಿ ಮತ್ತು ಮಗಳು ತಮ್ಮ ಕಾರಿಗೆ ಸಿಎನ್‌ಜಿ ತುಂಬಿಸಲು ಪೆಟ್ರೋಲ್‌ ಬಂಕ್‌ಗೆ ಬಂದಿದ್ದರು. ಸಿಎನ್‌ಜಿ ತುಂಬಿಸುವಾಗ ಕಾರಿನಿಂದ ಹೊರಬರುವಂತೆ ಪೆಟ್ರೋಲ್ ಪಂಪ್‌ ಉದ್ಯೋಗಿ ಹೇಳಿದ್ದಾರೆ. ಆ ಕಾರಣಕ್ಕೆ, ಉದ್ಯೋಗಿಯೊಂದಿಗೆ ಮಹಿಳೆಯ ತಂದೆ ಜಗಳಕ್ಕಿಳಿದಿದ್ದಾರೆ. ಈ ವೇಳೆ, ರಿವಲ್ವಾರ್ ಹಿಡಿದು ಕಾರಿನಿಂದ ಇಳಿದುಬಂದ ಮಹಿಳೆ ಏಕಾಏಕಿ ಪೆಟ್ರೋಲ್ ಪಂಪ್ ಉದ್ಯೋಗಿಯ ಎದೆಗೆ ಗುರಿಯಿಟ್ಟಿದ್ದಾರೆ.

ವಿಡಿಯೋದಲ್ಲಿ; ಮಹಿಳೆಯು ಕಾರಿನಿಂದ ರಿವಲ್ವಾರ್ ತಂದು ಉದ್ಯೋಗಿಯ ಎದೆಗೆ ಗುರಿಯಿಡುತ್ತಾರೆ. ಒಂದು ಕ್ಷಣ ಪೆಟ್ರೋಲ್ ಪಂಪ್ ಉದ್ಯೋಗಿಗಳು ಭಯಗೊಳ್ಳುತ್ತಾರೆ. ಬಳಿಕ, ಮತ್ತೊಬ್ಬ ಉದ್ಯೋಗಿ ಮಹಿಳೆಯನ್ನು ತಡೆಯುತ್ತಾರೆ. ಅದೃಷ್ಟಕ್ಕೆ, ಮಹಿಳೆ ಗುಂಡನ್ನು ಹಾರಿಸುವುದಿಲ್ಲ.

Advertisements

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಪೆಟ್ರೋಲ್‌ ಪಂಪ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ವೀಡಿಯೊ ರೆಕಾರ್ಡಿಂಗ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X