ಜಿಲ್ಲೆಗಳ ರಾಜಧಾನಿ ಹೆಸರೇಳಿ: ವ್ಯಾಪಕ ಟ್ರೋಲ್‌ಗೆ ಗುರಿಯಾದ ಪ್ರಧಾನಿ ಮೋದಿಯ ಚುನಾವಣಾ ಭಾಷಣ!

Date:

Advertisements

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಪ್ರಚಾರ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ, ಈವರೆಗೆ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದು ಸುದ್ದಿಯಾಗುತ್ತಿದ್ದರು. ಆದರೆ ಇಂದು ಒಡಿಶಾದಲ್ಲಿ ಮಾಡಿದ ಭಾಷಣದ ವೇಳೆ, ಜಿಲ್ಲೆಗಳ ರಾಜಧಾನಿಯ ಹೆಸರೇಳಿ? ಎಂದು ಸಿಎಂಗೆ ಸವಾಲೆಸೆದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್‌ಗೆ ಕಾರಣವಾಗಿದೆ.

ಒಡಿಶಾದ ಕಂಧಮಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡ ಪ್ರಧಾನಿ ನರೇಂದ್ರ ಮೋದಿ, ಒಡಿಶಾದ ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿರುವ ನವೀನ್ ಪಟ್ನಾಯಕ್ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ, “ನವೀನ್ ಬಾಬು ಅವರು ಇಷ್ಟು ದಿನ ಸಿಎಂ ಆಗಿರುವುದರಿಂದ ನಾನು ಅವರಿಗೆ ಒಂದು ಸವಾಲು ಹಾಕಲು ಬಯಸುತ್ತೇನೆ. ಯಾವುದೇ ಕಾಗದದ ನೆರವಿಲ್ಲದೇ ಒಡಿಶಾದಲ್ಲಿರುವ ಎಲ್ಲ ಜಿಲ್ಲೆಗಳ ಹೇಸರೇಳಲಿ. ಜಿಲ್ಲೆಗಳ ಜೊತೆಗೆ ಆ ಜಿಲ್ಲೆಗಳ ರಾಜಧಾನಿಯ ಹೆಸರು ಹೇಳಲಿ. ಓರ್ವ ಮುಖ್ಯಮಂತ್ರಿ ತನ್ನ ರಾಜ್ಯದ ಜಿಲ್ಲೆಗಳ ಹೆಸರನ್ನು ಹೇಳಲು ಸಾಧ್ಯವಾಗದಿದ್ದರೆ ಜನರ ನೋವು ಅವರಿಗೆ ತಿಳಿಯುತ್ತದೆಯೇ?” ಎಂದು ಪ್ರಶ್ನಿಸಿದ್ದರು.

Advertisements

ಸದ್ಯ ಪ್ರಧಾನಿಯವರ ಈ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆಯಲ್ಲದೇ, “ನಮ್ಮ ದೇಶದಲ್ಲಿ ಜಿಲ್ಲೆಗಳಿಗೆ ಯಾವಾಗಿನಿಂದ ರಾಜಧಾನಿ ಪ್ರಾರಂಭವಾಗಿದೆ?” ಎಂದು ಪ್ರಶ್ನಿಸುತ್ತಿದ್ದಾರೆ.

“ಇವರು ನರೇಂದ್ರ ಮೋದಿ. ಭಾರತದ ಪ್ರಧಾನಿ. ಒಡಿಶಾದ ಎಲ್ಲ ಜಿಲ್ಲೆಗಳ ರಾಜಧಾನಿಯನ್ನು ಹೇಳುವಂತೆ ಅಲ್ಲಿನ ಸಿಎಂಗೆ ಇವರು ಸವಾಲು ಹಾಕಿದ್ದಾರೆ. ನಮಗೆ ದೇಶ ಮತ್ತು ರಾಜ್ಯಗಳ ರಾಜಧಾನಿ ಇದೆ ಎಂಬುದು ಈವರೆಗೆ ತಿಳಿದಿತ್ತು. ಆದರೆ ಜಿಲ್ಲೆಗಳಿಗೆ ಯಾವಾಗಿನಿಂದ ರಾಜಧಾನಿ ಇದೆ ಎಂಬುದು ಗೊತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಗೆ ಮೂಲಭೂತ ಸಂಗತಿಗಳೇ ತಿಳಿದಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಅದಕ್ಕಾಗಿಯೇ ನಮಗೆ ಅನಕ್ಷರಸ್ಥ ಪ್ರಧಾನಿಯ ಅಗತ್ಯವಿಲ್ಲ. ಇದು ಭಾರತದ ಎಲ್ಲ ನಾಗರಿಕರಿಗೆ ಮುಜುಗರದ ಸಂಗತಿಯಾಗಿದದೆ” ಎಂದು Dr Nimo Yadav Commentary ಎಂಬ ಟ್ರೋಲಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X