ದೇವರ ಹುಂಡಿಯಲ್ಲಿ 5 ಸಾವಿರ ರೂ. ಕದ್ದ ಕಳ್ಳ; ಕಾಣಿಕೆಯಾಗಿ ದೇವರ ಪಾದಕ್ಕೆ ಎಷ್ಟು ಹಣವಿಟ್ಟ ಗೊತ್ತಾ?

Date:

Advertisements

ಕಳ್ಳರು ಯಾವುದೇ ಜಾಗಕ್ಕೆ ಕಳ್ಳತನಕ್ಕೆ ಹೋದರೂ ಜಾಗರೂಕರಾಗಿರುತ್ತಾರೆ. ಆದರೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಕದಿಯುವುದಕ್ಕೆ ಹೋದಾಗ ಭಯಭಕ್ತಿ ಹೆಚ್ಚಾಗಿ ಕಾಡುತ್ತದೆ. ದೇವಸ್ಥಾನದ ವಸ್ತು ಕಳವು ಮಾಡಿದರೂ ಕೆಲವೊಮ್ಮೆ ಕ್ಷಮಾಪಣೆ, ತಪ್ಪೊಪ್ಪಿಗೆ ಸಲ್ಲಿಸುವುದುಂಟು. ಅಲ್ಲದೆ ದೇವರು ಶಿಕ್ಷೆ ಕೊಡುತ್ತಾನೆ ಎಂಬ ಭಯದಿಂದ ಕಳ್ಳತನವನ್ನು ನಿರಾಕರಿಸುವ ಸಾಧ್ಯತೆಯು ಇರುತ್ತದೆ. ಈಗ ಅದೇ ರೀತಿಯ ಒಂದು ಘಟನೆ ಹರಿಯಾಣ ರಾಜ್ಯದ ದೇವಸ್ಥಾನವೊಂದರಲ್ಲಿ ನಡೆದಿದೆ.

ಹರಿಯಾಣದ ರೇವಾರಿ ಜಿಲ್ಲೆಯ ಹನುಮಾನ್ ದೇವಸ್ಥಾನದೊಳಗೆ ಕಳ್ಳನೊಬ್ಬ ಹಗಲಿನ ವೇಳೆಯೆ ನುಗ್ಗಿದ್ದಾನೆ. ಹಲವು ಭಕ್ತರ ನಡುವೆಯೆ ದೇವರ ಮುಂದೆ ಕುಳಿತ ಕಳ್ಳ ಸುಮಾರು 10 ನಿಮಿಷ ಭಕ್ತಿಯಿಂದ ಹನುಮಾನ್ ಚಾಲೀಸಾವನ್ನು ಪಠಿಸಿದ್ದಾನೆ. ಅರ್ಚಕರ ಸಮ್ಮುಖದಲ್ಲಿಯೇ ದೇವರ ಪಾದಗಳಿಗೆ 10 ರೂಪಾಯಿಗಳನ್ನು ಅರ್ಪಿಸುತ್ತಾನೆ.

ಈ ಸುದ್ದಿ ಓದಿದ್ದೀರಾ? ಪುರುಷತ್ವ ಪರೀಕ್ಷೆಗೆ ರಕ್ತದ ಮಾದರಿ ಬಳಸಿ, ಎರಡು ಬೆರಳು ಪರೀಕ್ಷೆ ನಿಲ್ಲಿಸಿ: ಮದ್ರಾಸ್‌ ಹೈಕೋರ್ಟ್

Advertisements

ದೇವಾಸ್ಥಾನದಲ್ಲಿದ್ದ ಹತ್ತಾರು ಭಕ್ತರು ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಕಾಣಿಕೆ ಡಬ್ಬಿ ಬಳಿ ಹೋದ ಕಳ್ಳ ಯಾರ ಗಮನಕ್ಕೂ ಬಾರದಂತೆ ದೇವರ ಹುಂಡಿಯನ್ನು ಹೊಡೆದು 5 ಸಾವಿರ ರೂ ದೋಚಿ ಪರಾರಿಯಾಗಿದ್ದಾನೆ. ಕಳ್ಳತನ ನಡೆದಿರುವುದು ತಿಳಿಯದ ಅರ್ಚಕರು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಹಿಂತಿರುಗಿ ನೋಡಿದಾಗ ಕಾಣಿಕೆ ಡಬ್ಬಿಯ ಬೀಗ ಮುರಿದಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೇಗುಲಕ್ಕೆ ಆಗಮಿಸಿ ವಿಚಾರಣೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ದೃಶ್ಯಗಳಲ್ಲಿ ಕಳ್ಳನ ಎಲ್ಲ ಚಲನವಲನಗಳು ದಾಖಲಾಗಿದೆ. ಕಳ್ಳತನಕ್ಕೆ ಮೊದಲು ಮೊದಲು ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ದೇವರ ಪಾದಗಳಿಗೆ ದುಡ್ಡನ್ನು ಅರ್ಪಿಸುತ್ತಿರುವುದು ದಾಖಲಾಗಿದೆ.

ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X