ಸಂದೇಶಖಾಲಿ ಪ್ರಕರಣದ ಹಿಂದೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ: ಟಿಎಂಸಿ ಆರೋಪ

Date:

Advertisements

ಸಂದೇಶಖಾಲಿ ವಿವಾದಕ್ಕೊಂದು ಹೊಸ ತಿರುವು ಸಿಕ್ಕಿದೆ. ಟಿಎಂಸಿ ನಾಯಕರು ಸಂದೇಶಖಾಲಿ ಮಹಿಳೆಯರ ಮೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪಗಳು ಇತ್ತೀಚೆಗೆ ಭಾರೀ ಕೋಲಾಹಲ ಸೃಷ್ಟಿಸಿದೆ.

ಟಿಎಂಸಿಯ ಶಾಹ್‌ಜಹಾನ್‌ ಶೇಖ್‌ ಬಂಧನಕ್ಕೆ ಕಾರಣವಾದ ಬೆಳವಣಿಗೆಗಳ ನಡುವೆ, ಬಿಜೆಪಿಯ ಸಂದೇಶಖಾಲಿ ಮಂಡಲ ಅಧ್ಯಕ್ಷ ಎಂದು ತಿಳಿಯಲಾದ ಓರ್ವ ವ್ಯಕ್ತಿಯ ವಿಡಿಯೋ ಸಾಕಷ್ಟು ಸದ್ದು ಮಾಡಿದೆ. ಈ ವಿಡಿಯೋದಲ್ಲಿ ಆ ವ್ಯಕ್ತಿ ಸಂದೇಶಖಾಲಿ ಘಟನೆಯ ಹಿಂದೆ ಬಿಜೆಪಿಯ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಇದ್ದಾರೆಂದು ಹೇಳುವುದು ಕೇಳಿಸುತ್ತದೆ.

ಶಾಹ್‌ಜಹಾನ್‌ ಶೇಖ್‌ ಸೇರಿದಂತೆ ಮೂವರು ಟಿಎಂಸಿ ನಾಯಕರ ವಿರುದ್ಧ ಅತ್ಯಾಚಾರ ಆರೋಪ ಹೊರಿಸುವಂತೆ ಮೂವರು ಸ್ಥಳೀಯ ಮಹಿಳೆಯರನ್ನು ಪ್ರಚೋದಿಸಲು ಸುವೇಂದು ಅಧಿಕಾರಿ ತಮ್ಮನ್ನು ಹಾಗೂ ಪ್ರದೇಶದ ಇತರ ಬಿಜೆಪಿ ನಾಯಕರಲ್ಲಿ ಹೇಳಿದ್ದರು ಎಂದು ವಿಡಿಯೋದಲ್ಲಿ ಆತ ಹೇಳುವುದು ಕೇಳಿಸುತ್ತದೆ.

Advertisements

ನಂದಿಗ್ರಾಮ ಶಾಸಕರಾಗಿರುವ ಅಧಿಕಾರಿ ಅವರೇ ಸಂದೇಶಖಾಲಿಯ ಮನೆಯೊಂದರಲ್ಲಿ ಬಂದೂಕುಗಳನ್ನು ಇರಿಸಿದ್ದರು, ಇವುಗಳನ್ನು ನಂತರ ಕೇಂದ್ರ ಸಂಸ್ಥೆಗಳು ವಶಪಡಿಸಿಕೊಂಡಿದ್ದವು ಎಂದು ಆ ವ್ಯಕ್ತಿ ಹೇಳುವುದು ಕೇಳಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಟಿಎಂಸಿ, “ಬಂಗಾಳ ಮತ್ತು ಸಂದೇಶಖಾಲಿಗೆ ಕೆಟ್ಟ ಹೆಸರು ತರಲು ಸಾಮೂಹಿಕ ಅತ್ಯಾಚಾರಗಳು ನಡೆದಿವೆ ಎಂಬ ಅಭಿಪ್ರಾಯ ಮೂಡಿಸಲು ಅಧಿಕಾರಿ ಈ ಸುವೇಂದು ಅಧಿಕಾರಿ ಈ ಸುಳ್ಳು ಸೃಷ್ಟಿಸಿದ್ದಾರೆ,” ಎಂದು ಆರೋಪಿಸಿದೆ.

“ಸಾಮೂಹಿಕ ಅತ್ಯಾಚಾರದಿಂದ ಹಿಡಿದು ಶಸ್ತ್ರಾಸ್ತ್ರ ವಶಪಡಿಸಿಕೊಳ್ಳುವಿಕೆ” ತನಕ ಪ್ರತಿಯೊಂದು ಆರೋಪ ಸುವೇಂದು ಅವರ ಸಂಚಿನಿಂದ ಆಗಿದೆ,” ಎಂದು ಟಿಎಂಸಿ ಹೇಳಿದೆ.

ಈ ಕುರಿತಂತೆ ಸುವೇಂದು ಅಧಿಕಾರಿ ಇನ್ನೂ ಪ್ರತಿಕ್ರಿಯಿಸಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, “ಬಿಜೆಪಿಯೊಳಗೆ ಆಳವಾಗಿ ಬೇರೂರಿರುವ ಕೊಳಕನ್ನು ಬಹಿರಂಗಪಡಿಸಿದೆ ನಮ್ಮ ರಾಜ್ಯವನ್ನು ಎಲ್ಲ ಹಂತಗಳಲ್ಲಿ ಅವಮಾನಿಸುವುದು ಅವರ ಸಂಚಾಗಿದೆ,” ಎಂದು ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X