ಅಕ್ಕಿ ಪೂರೈಕೆ ನಿರಾಕರಣೆ: ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಕಲ್ಲು ಹಾಕಿದ ಕೇಂದ್ರ ಸರಕಾರ

Date:

Advertisements
ಕೇಂದ್ರ ಸರಕಾರ ರಾಜ್ಯಗಳಿಗೆ ಅಕ್ಕಿ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರ ಸಮರ್ಥನೆಗಿಳಿದಿದೆ...

ಭಾರತೀಯ ಆಹಾರ ನಿಗಮದ ಹೇಳಿಕೆ ಪ್ರಕಾರ ಎಪ್ರಿಲ್ 1, 2023ಕ್ಕೆ 113 ಲಕ್ಷ ಟನ್ ಗೋಧಿ ಮತ್ತು 236 ಲಕ್ಷ ಟನ್ ಅಕ್ಕಿ ಸಂಗ್ರಹವಿದೆ. ಇದು ಸರಕಾರದ ವಿವಿಧ ಯೋಜನೆಗಳಿಗೆ ಪೂರೈಸಿಯೂ ಮಿಗತೆ ಪ್ರಮಾಣದಲ್ಲಿದೆ ಎಂದು FCI ಹೇಳಿದೆ. ಹಾಗೆಯೇ ಸರಕಾರದ ಅಂದಾಜು ಪ್ರಕಾರ ಈ ವರ್ಷ 325 ಮಿಲಿಯನ್ ಟನ್ ನಷ್ಟು ಆಹಾರ ಉತ್ಪಾದನೆಯ ಗುರಿ ಹೊಂದಿದ್ದು ಇದು ಕಳೆದ ವರ್ಷಕ್ಕಿಂತ 3% ಜಾಸ್ತಿ.

2022-23ನೇ ಸಾಲಿನಲ್ಲಿ ಅಂದರೆ 2023ರ ಮೇ ವರೆಗೆ ಅಕ್ಕಿಯ ಉತ್ಪಾದನೆ 1308 ಲಕ್ಷ ಟನ್ ಆಗಿದ್ದು, ಇದರಲ್ಲಿ ಸರಕಾರವೇ 626 ಲಕ್ಷ ಟನ್ ಕೊಂಡುಕೊಂಡು ದಾಸ್ತಾನು ಮಾಡುವ ಗುರಿ ಹೊಂದಿದೆ. ಈ ಬಾಬ್ತು ಸರಕಾರ 1,59,659 ಕೋಟಿ ರೂ. ರೈತರಿಗೆ ಪಾವತಿಸಿದೆ.

ಅಂದರೆ ಭಾರತೀಯ ಆಹಾರ ನಿಗಮದಲ್ಲಿ ರಾಜ್ಯಗಳ ಬೇಡಿಕೆ ಪೂರೈಸುವಷ್ಟು ಅಕ್ಕಿಯ ಸಂಗ್ರಹ ಇದೆ.

Advertisements

ರಾಜ್ಯ ಸರಕಾರಗಳು ಹೆಚ್ಚುವರಿಯಾಗಿ ಕೊಳ್ಳುವುದಾದರೆ ನಿಗಮವು ತನಗಾದ ನೈಜ ವೆಚ್ಚವನ್ನೇ ಭರಿಸುವಷ್ಟು ದರ ನಿಗದಿ ಮಾಡುತ್ತದೆ. ಇದೇ ಲೆಕ್ಕಾಚಾರದಲ್ಲೇ ರೂ. 36 ಎಂದು ಕರ್ನಾಟಕ ಸರಕಾರಕ್ಕೆ ನಿಗದಿ ಮಾಡಿದ್ದು, ಸರಕಾರಗಳಿಗೆ ಪೂರೈಸುವುದೆಂದರೆ ಬೆಲೆ ಏರಿಕೆ ಆಘಾತದಿಂದ ಬಡವರನ್ನು ರಕ್ಷಿಸಿ ಆಹಾರದ ಹಾಹಾಕಾರವನ್ನು ತಡೆಯುವುದು ಎಂದರ್ಥ.

ಆದರೆ ಕೇಂದ್ರ ಸರಕಾರ ರಾಜ್ಯಗಳಿಗೆ ಪೂರೈಸಲು ನಿರಾಕರಿಸಿ, ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಮಾರಾಟ ಮಾಡಲು ಹೊರಟಿದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಏರಿಕೆ ತಡೆಯಲು ಈ ಪೂರೈಕೆ ಅವಶ್ಯ ಎಂದು ಸರಕಾರದ ಸಮರ್ಥನೆ.

ಹೀಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾದ ಅಕ್ಕಿ ಗ್ರಾಹಕರಿಗೆ ಕಡಿಮೆ ದರಕ್ಕೆ ದೊರಕಿದ ಉದಾಹರಣೆ ಇಲ್ಲ!

ಇದರರ್ಥ ಇಷ್ಟೇ: ಕೇಂದ್ರ ಸರಕಾರ ದ್ವೇಷದ ರಾಜಕಾರಣ ಮಾಡುತ್ತಾ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗೆ ಕಲ್ಲು ಹಾಕಲು ಯತ್ನಿಸುತ್ತಿದೆ.

ರಾಜ್ಯಗಳು ಸಾಕಷ್ಟು ಪ್ರಮಾಣದಲ್ಲಿ ಆಹಾರವನ್ನು ಕಾಪು ದಾಸ್ತಾನು ಮಾಡುವ ವ್ಯವಸ್ಥೆ ನಮ್ಮಲ್ಲಿ ಕಡಿಮೆ. ಕರ್ನಾಟಕ ಈ ಕೆಲಸ ಮಾಡಬೇಕಿತ್ತು. ಆದರೆ ಭಾಜಪ ಸರಕಾರ ಈ ಕಾಪು ದಾಸ್ತಾನು ಇಟ್ಟಿಲ್ಲ. ಅಷ್ಟೇ ಏಕೆ, ಪಡಿತರದಲ್ಲಿ ನೀಡುವ ಅಕ್ಕಿಯ ಪ್ರಮಾಣವನ್ನೂ ಕಡಿತಗೊಳಿಸಿದೆ.

ಈಗ ಬಿಜೆಪಿಯ ಸಂಸದರು ಅನ್ನಕ್ಕೆ ಕಲ್ಲು ಹಾಕುವ ಈ ವಿಕೃತಿಯನ್ನು ಸಮರ್ಥಿಸಿ ಕೇಕೆ ಹಾಕಿ ಕುಣಿಯುತ್ತಿದ್ದಾರೆ. ಜನಾಗ್ರಹದ ಸುನಾಮಿ ಎರಗುವ ಕಿಂಚಿತ್ತು ಪರಿವೆಯೂ ಇಲ್ಲದ ಈ ಪಕ್ಷದ ಆತ್ಮಹತ್ಯಾಕಾರಿ ನಿಲುವು
ಮಾತ್ರ ಅಚ್ಚರಿ ತರುತ್ತಿದೆ.

WhatsApp Image 2023 06 15 at 12.25.34
ಕೆ.ಪಿ. ಸುರೇಶ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X