ಕಾಂಗ್ರೆಸ್ ಸರ್ಕಾರ ಮುಂದಿನ 16ನೇ ಹಣಕಾಸು ಆಯೋಗದ ಮುಂದೆ ಯಾವ ರೀತಿ ತನ್ನ ಬೇಡಿಕೆ ಮಂಡಿಸಲಿದೆ?

Date:

Advertisements
ರಾಜ್ಯಗಳಿಗೆ ಜನಸಂಖ್ಯೆ ಆಧಾರಿತ ತೆರಿಗೆ ಸಂಗ್ರಹವನ್ನು ಹಂಚಿಕೆ ಮಾಡುವುದರಿಂದಾಗಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಒಪ್ಪಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ. 3.64ರಷ್ಟು ಮಾತ್ರ ಹಂಚಿಕೆಯಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯನವರು 16ನೇ ಹಣಕಾಸು ಆಯೋಗದ ಮುಂದೆ ಈ ಬಾರಿ ಯಾವ ರೀತಿ ಬೇಡಿಕೆ ಮಂಡಿಸಲಿದ್ದಾರೆ?

16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ಅರವಿಂದ ಪನಗರಿಯಾ ಅವರನ್ನು ನೇಮಕ ಮಾಡಲಾಗಿದೆ.
ಆಯೋಗದ ಮುಂದೆ ತುಂಬಾ ನಿರೀಕ್ಷೆಗಳಿವೆ. ಆದರೆ ಫಲಿತಾಂಶದ ಕುರಿತು ಸಿನಿಕತನವಿದೆ. 2014ಕ್ಕೂ ಮುಂಚೆ  ಹಣಕಾಸು ಆಯೋಗವು ತನ್ನ ಮೇಲಿನ ಹೊಣೆಗಾರಿಕೆಯನ್ನು ಯೋಜನಾ ಆಯೋಗದ ಜೊತೆಗೆ ಹಂಚಿಕೊಳ್ಳುತ್ತಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ತನ್ನ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದಾಗಿ ಯೋಜನಾ ಆಯೋಗವನ್ನು ರದ್ದುಗೊಳಿಸಿತು.

ತನ್ನ ಎಲ್ಲಾ ಮಿತಿಗಳ ನಡುವೆ (ಅತೃಪ್ತ ಮುಖಂಡರ ಪುನರ್ವಸತಿ ಎಂದು ಸಹ ಟೀಕೆಗೆ ಗುರಿಯಾಗಿತ್ತು) ಸಾರ್ವಜನಿಕ ಸಂಸ್ಥೆ, ಉದ್ಯಮ, ಯೋಜನೆಗಳ ಕುರಿತು ಕಾರ್ಯ ನಿರ್ವಹಿಸುತ್ತಿದ್ದ ಯೋಜನಾ ಆಯೋಗ ರದ್ದಾಗಿ ಖಾಸಗಿ ಬಂಡವಾಳಶಾಹಿಗಳ ಪರವಾದ ‘ನಿತಿ ಆಯೋಗ’ ಅಡಿಯಿಟ್ಟಿತು. ಇದು ಇಂದಿಗೂ ಮೋದಾನಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ.

ಕಳೆದ ಒಂಬತ್ತು ವರ್ಷಗಳಿಂದ ಹಣಕಾಸು ಆಯೋಗವು ತನ್ನ ಮೇಲಿನ ಗುರುತರವಾದ ಹೊಣೆಗಾರಿಕೆಯನ್ನು ನಿಭಾಯಿಸಲು ಮತ್ತು ಕೇಂದ್ರದ ಒಕ್ಕೂಟ ವಿರೋಧಿ ಧೋರಣೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ತಿಣುಕುತ್ತಿದೆ. ಮೋದಿ ಸಾಹೇಬರ ಕೃಪೆಯಿಂದಾಗಿ ಇದರ ನೀತಿಗಳಲ್ಲಿ ಸ್ಪಷ್ಟತೆಯಿಲ್ಲ. ಅದನ್ನು ಜಾರಿಗೊಳಿಸುವ ಹತಾರಗಳಿಲ್ಲ ಮತ್ತು ಹಕ್ಕುಗಳಿಲ್ಲ.

Advertisements

14ನೇ ಹಣಕಾಸು ಆಯೋಗವು ತೆರಿಗೆ ಸಂಗ್ರಹದ ಶೇ.42ರಷ್ಟು ಪ್ರಮಾಣವನ್ನು ರಾಜ್ಯಗಳಿಗೆ ಹಂಚಬೇಕೆಂದು ನಿಗದಿಪಡಿಸಿತ್ತು (Vertical distribution). ಆದರೆ 2017ರಲ್ಲಿ ರಚನೆಯಾದ 15ನೇ ಹಣಕಾಸು ಆಯೋಗವು  ಅದನ್ನು ಶೇ.41ಕ್ಕೆ ಇಳಿಸಿತು (ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕಾಗಿ 1% ಕಡಿತ).

ಆದರೆ ರಂಗೋಲಿ ಕೆಳಗೆ ತೂರುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವು ಆದಾಯ ಹೆಚ್ಚಿಸಿಕೊಳ್ಳಲು ರಾಜ್ಯಗಳಿಗೂ ಪಾಲು ದೊರಕುವ ತೆರಿಗೆಯನ್ನು ಹೆಚ್ಚಿಸದೆ ತನ್ನ ಬೊಕ್ಕಸಕ್ಕೆ ನೇರವಾಗಿ ಬರುವ ಸರ್ ಚಾರ್ಜ್ ಮತ್ತು ಸೆಸ್ ಅನ್ನು ಮಾತ್ರ ಹೆಚ್ಚಿಸಿಕೊಳ್ಳುತ್ತಿದೆ.

2011-12ರಲ್ಲಿ ಶೇ.10.4ರಷ್ಟಿರುವ ಸೆಸ್ ಮತ್ತು ಸರ್ ಚಾರ್ಜ್ ಹತ್ತು ವರ್ಷಗಳ ನಂತರ 2019-20ರ ವೇಳೆಗೆ
ಶೇ.20.2ರಷ್ಟು ಹೆಚ್ಚಾಗಿದೆ (ದುಪ್ಪಟ್ಟು). ಇದರಿಂದಾಗಿ ರಾಜ್ಯಗಳು ತೆರಿಗೆ ವರಮಾನದ ನಷ್ಟ ಅನುಭವಿಸುತ್ತಿವೆ.
2016-17ರಲ್ಲಿ ಒಟ್ಟು ತೆರಿಗೆ ವರಮಾನದಲ್ಲಿ ರಾಜ್ಯಗಳ ಪಾಲು ಶೇ.35ರಷ್ಟಿದ್ದರೆ 2023-24ರ ವೇಳೆಗೆ ಶೇ.31ಕ್ಕೆ ಇಳಿದಿದೆ.

ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡುತ್ತಿರುವ ಈ ಬೆಳವಣಿಗೆಯನ್ನು ಮುಂಬರುವ 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ? ಮೋದಿಯವರ ಸರ್ವಾಧಿಕಾರಿ ಆಡಳಿತದಲ್ಲಿ ಈ ಪ್ರಶ್ನೆಗೆ ಬೆಲೆಯಿಲ್ಲ ಎಂದು ಗೊತ್ತಿದ್ದೂ ನಾವು ಪ್ರಜೆಗಳು ಕೇಳುತ್ತಿರಬೇಕು.

ಇದನ್ನು ಓದಿದ್ದೀರಾ?: ತಮಿಳುನಾಡಿನ ಬಿಜೆಪಿ ನಾಯಕನ ವಿರುದ್ಧ ಹೋರಾಡುತ್ತಿರುವ ದಲಿತ ರೈತರಿಗೆ ಇ.ಡಿ. ಸಮನ್ಸ್

ರಾಜ್ಯಗಳಿಗೆ ಜನಸಂಖ್ಯೆ ಆಧಾರಿತ ತೆರಿಗೆ ಸಂಗ್ರಹವನ್ನು ಹಂಚಿಕೆ ಮಾಡುವುದರಿಂದಾಗಿ (horizontal distribution) ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಒಪ್ಪಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ. 3.64, ತಮಿಳುನಾಡಿಗೆ ಶೇ. 4.07, ತೆಲಂಗಾಣಕ್ಕೆ ಶೇ. 2.1, ಮಹಾರಾಷ್ಟ್ರಗೆ ಶೇ. 6.3ರಷ್ಟು ಮಾತ್ರ ಹಂಚಿಕೆಯಾಗುತ್ತಿದೆ. ಅತಿ ಕಡಿಮೆ ತೆರಿಗೆ ಸಂಗ್ರಹ ಮಾಡುತ್ತಿರುವ ಉತ್ತರ ಪ್ರದೇಶ ರಾಜ್ಯಕ್ಕೆ ಶೇ. 17.93, ರಾಜಸ್ಥಾನಕ್ಕೆ ಶೇ. 6.03, ಮಧ್ಯಪ್ರದೇಶಕ್ಕೆ ಶೇ. 7.85, ಬಿಹಾರ್ ಗೆ ಶೇ. 10ರಷ್ಟು ಹಂಚಿಕೆಯಾಗುತ್ತಿದೆ.

2022ರಲ್ಲಿ ಕರ್ನಾಟಕದ ಪ್ರತಿ ವ್ಯಕ್ತಿಯಿಂದ ಸರಾಸರಿ 13,428, ತಮಿಳುನಾಡಿನಿಂದ 10,120, ತೆಲಂಗಾಣದಿಂದ 9,988, ಆಂಧ್ರದಿಂದ 5,600, ಕೇರಳದಿಂದ 5,647, ಮಹಾರಾಷ್ಟ್ರದಿಂದ 16,000 ತೆರಿಗೆ ಸಂಗ್ರಹವಾದರೆ;
ಉ. ಪ್ರದೇಶದಿಂದ 2,790, ಬಿಹಾರದಿಂದ 949, ಮಧ್ಯ ಪ್ರದೇಶದಿಂದ 3,000, ರಾಜಸ್ಥಾನದಿಂದ 4,000 ಮೊತ್ತ ತೆರಿಗೆ ಸಂಗ್ರಹವಾಗುತ್ತದೆ. ಅಂದರೆ ಉತ್ತರ ಭಾರತದ ರಾಜ್ಯಗಳಿಗೆ ದಕ್ಷಿಣ ಭಾರತದ ರಾಜ್ಯಗಳಿಗಿಂತ ಮೂರು ಪಟ್ಟು ಅಧಿಕ ಅನುದಾನ ಹಂಚಿಕೆಯಾಗುತ್ತದೆ.

ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಇಂತಹ ಅಸಮಾನತೆ ಮತ್ತು ತಾರತಮ್ಯವನ್ನು 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ? ಯಾರಿಗೂ ಖಾತರಿಯಿಲ್ಲ ಮತ್ತು ನಂಬಿಕೆಯಿಲ್ಲ.

ಏಕೆಂದರೆ ಮೋದಿ ಸರಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲಾ ಸಾರ್ವಜನಿಕ ಸಂಸ್ಥೆ, ಆಯೋಗಗಳ ವಿಶ್ವಾಸಾರ್ಹತೆಯನ್ನು ನಾಶಪಡಿಸಿದೆ. ಇದಕ್ಕೆ ಹಣಕಾಸು ಆಯೋಗವು ಸಹ ಬಲಿಪಶು.

ಕಡೆಗೂ ಮಿಕ್ಕ ವಿರೋಧ ಪಕ್ಷಗಳಿಗೂ ನವ ಉದಾರೀಕರಣದ ಕುರಿತು ಅಂತಹ ತಕರಾರು ಇಲ್ಲದ ಕಾರಣಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕಾಳಜಿಯೂ ಇಲ್ಲದ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಿರಾಶೆ ಮಾತ್ರ ನಿರೀಕ್ಷಿಸಬಹುದು. (ಇಲ್ಲಿ ಡಿಎಂಕೆ ಹೊರತುಪಡಿಸಿ ಮಿಕ್ಕ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಪರವಾದ ನಿಲುವುಗಳ ಬದ್ಧತೆ ಸದಾ ಸಂಶಯಾಸ್ಪದವಾಗಿರುತ್ತದೆ. ಅವು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಈ ವಿಷಯದಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡುವುದೇನಿಲ್ಲ.)

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X