ಈ ದಿನ ಕವಿತೆ | ಸ್ವ/ಪರ

Date:

Advertisements

ನಾವೇನಾಗಿದ್ದೇವಿಂದು
ಪ್ರಾಯಶಃ
ಸದಾ ಹೀಗೆ ಇದ್ದೇವೆ..

ವಿಜಯದುನ್ಮದಾದಲಿ
ದೇಹಗಳ ಮೇಲೆ
ಪ್ರಭುತ್ವದ
ಹಚ್ಚೆ ಹಚ್ಚುತ್ತಾ…

ಮಾನವತೆ ತೊಗಲು ಸವರಿದ್ದಷ್ಟೇ
ಆಳಕ್ಕಿಳಿಯಲಿಲ್ಲ…

Advertisements

ಅತ್ಯಾಚಾರ,
ಕೊಲೆ,
ಚಿತ್ರಹಿಂಸೆ,
ಸುಟ್ಟು ಅಳಿಸಿಯೇ ಬಿಡುವ
ಹಪಹಪಿಕೆಯ
ಅಗ್ಗಿಷ್ಟಿಕೆ ನಮ್ಮೊಳಗೆ
ಸಹಸ್ರಮಾನದುದ್ದಕ್ಕೂ
ಜೀವಂತ ಇರಿಸಿದವರು ಉರಿಸಿದವರು

ಅರ್ಚಕರಲ್ಲ, ಪಠಾಣರಲ್ಲ
ತಿದಿಮಾಡಿ ಪೋಷಿಸಿದವರು
ನಮ್ಮೊಳಗಿನ ನಾವು

ಬಿಟ್ಟುಬಿಡಿ ನಮ್ಮನು
ಹುಡುಕಿ ಪರರ

ನೆಲದುದ್ದಗಲಕ್ಕೂ
ಒಂದೇ ನಾವು
ನಮ್ಮನ್ನು ಬಿಟ್ಟು ಉಳಿದವರಾರು

ಬಿಟ್ಟುಬಿಡಿ ನಮ್ಮ
ಹುಡುಕಿ ಪರರ

ಮೂಲ :ಇಂಗ್ಲಿಷ್- ಪ್ರೊ.ಜಿ.ಜೆ.ವಿ.ಪ್ರಸಾದ್ (ಕವಿ, ಜೆಎನ್‌ಯುವಿನ ನಿವೃತ್ತ ಇಂಗ್ಲಿಷ್ ಪ್ರೊಫೆಸರ್)
ಅನುವಾದ: ಡಾ. ರಾಜಲಕ್ಷ್ಮೀ ಎನ್ ಕೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X