ನುಡಿ ನಮನ | ತುಳುವರ ಸಾಕ್ಷಿ ಪ್ರಜ್ಞೆ ಅಮೃತ ಸೋಮೇಶ್ವರರು

Date:

ತುಳುನಾಡಿನ, ತುಳು ಮಣ್ಣಿನ ಸೌಹಾರ್ದ ಪರಂಪರೆಯನ್ನು ಪಾಲಿಸುವುದು ಬದುಕಿನ ಕರ್ತವ್ಯ ಎಂಬಷ್ಟರ ಮಟ್ಟಿಗೆ ಪ್ರಜ್ಞಾಪೂರ್ವಕವಾಗಿ ಜಾಗರೂಕತೆಯ ನಡೆಯೊಂದಿಗೆ ಬಾಳಿ ಬದುಕಿದವರು ಹಿರಿಯ ವಿದ್ವಾಂಸರಾದ ಪ್ರೊ.ಅಮೃತ ಸೋಮೇಶ್ವರರು.

- Advertisement -

1935ರಲ್ಲಿ ಜನಿಸಿದ ಅಮೃತರು 89 ವರ್ಷಗಳ ತುಂಬು ಜೀವನವನ್ನು ಕಪಟವಿಲ್ಲದೆ ಬದುಕಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತುಳು ಕನ್ನಡದ ಕೊಂಡಿಯಾಗಿದ್ದುಕೊಂಡು, ತುಳುವಿನ ಆಸ್ಮಿತೆಯನ್ನು ಎತ್ತಿ ತೋರಿದವರು. ಅಮೃತರ ಮನೆಮಾತು ಮಲಯಾಳಂ, ಶಿಕ್ಷಕರಾಗಿ ಕಲಿಸಿದ್ದು ಕನ್ನಡ, ಸಂಶೋಧನೆಯನ್ನೆಲ್ಲಾ ತುಳು ಭಾಷೆಗೆ ಧಾರೆ ಎರೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

amruta someshwar 2

ಹೈಸ್ಕೂಲಿನಲ್ಲಿ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡರ ಶಿಷ್ಯ, ಕಾಲೇಜಿನಲ್ಲಿ ಪಂಡಿತ ಸೇಡಿಯಾಪು ಕೃಷ್ಣ ಭಟ್ಟರು ಗುರುಗಳು , ಮುಂದುವರಿದ ಪರಂಪರೆಯಲ್ಲಿ ಅಮೃತರೆ ಗುರುಗಳಾದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮೂರು ದಶಕಗಳ ಕನ್ನಡ ಅಧ್ಯಾಪನ. ಅಮೃತರ ಶಿಷ್ಯತ್ವ ನೂರಾರು, ಸಾವಿರಾರು ಸಾಹಿತ್ಯಾಸಕ್ತರಿಗೆ ಒದಗಿತು. ಅಗಣಿತ ಮಂದಿಗೆ ಅವರು ಪಾಠ ಮಾಡದೆಯೇ ಗುರುಗಳಾದರು. ನೆಚ್ಚಿನ ಮಾರ್ಗದರ್ಶಕರಾದರು.

ಅಮೃತರೆಂದರೆ ತುಳು ಜಾನಪದ, ಭೂತಾರಾಧನೆ, ಯಕ್ಷಗಾನದ ಬಗ್ಗೆ ಅಪಾರವಾದ, ಆಳವಾದ ಜ್ಞಾನ ಭಂಡಾರ. ಅವರು ಪಾಡ್ದನಗಳ ಸಂಗ್ರಹಕಾರ, ಯಕ್ಷಗಾನ ಕವಿ, ಯಕ್ಷಗಾನ ವಿಮರ್ಶಕ, ಭಾವಗೀತೆಯ ಕವಿ, ತುಳು ನಾಟಕಕಾರ, ಕನ್ನಡ ನಾಟಕಕಾರ, ಭಾಷಾ ಕೋಶ ರಚನೆಕಾರ, ಹೊಸ ಗಾದೆಗಳ ಜನಕ, ಕಾದಂಬರಿಕಾರ ಜೊತೆಗೆ ಮಾನವೀಯ ಅಂತಕರಣದ ಸರಳ ಸಜ್ಜನ ಚಿಂತಕ.

amruta someshwara 3

‘ಭಗವತಿ ಆರಾಧನೆ, ‘ಯಕ್ಷಾಂದೋಳ’ ‘ಕರೆಗಾಳಿ, ‘ತುಳು ಬದುಕು , ‘ಭ್ರಮಣ, ‘ತೀರದ ತೆರೆ, ‘ಹೃದಯ ವಚನಗಳು, ‘ಅವಿಲು, ‘ಯಕ್ಷಗಾನ ಕೃತಿ ಸಂಪುಟ, ‘ಮೋಯ ಮಲಯಾಳ -ಕನ್ನಡ ಕೋಶ, ‘ಅಪಾರ್ಥಿನೀ, ‘ಮೋಕೆದ ಬೀರೆ ಲೆಮಿಂಕಾಯೆ, ‘ತುಳು ಜೋಕುಮಾರಸ್ವಾಮಿ, ‘ತೆರಿನಾಯ ವಚನೊಲು, ‘ಯಕ್ಷಗಾನ ಛಾಯಾವತರಣ, ‘ಗೋಂದೊಲು ,ಇವೆಲ್ಲವೂ ಅಮೃತರು ಮಥಿಸಿದ ಎಂದೂ ತೀರದ ಅಮೃತಗಳು .

ಫಿನ್‌ಲ್ಯಾಂಡ್ ದೇಶದ ಜನಪದ ಮಹಾಕಾವ್ಯ ‘ಕಲೇವಾಲ’ದ ಒಂದು ಭಾಗವನ್ನು ‘ಮೋಕೆದ ಬೀರೆ ಲೆಮಿಂಕಾಯೆ’ ಎಂಬುದಾಗಿ ತುಳು ಭಾಷೆಗೆ ಅಮೃತರು ಅನುವಾದಿಸಿದ್ದರು.

ಡಾ.ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕವನ್ನು ತುಳುವಿಗೆ ಅನುವಾದಿಸಿದಾಗ ಇದರ ಪ್ರಥಮ ಪ್ರದರ್ಶನ ಉಡುಪಿ ರಂಗಭೂಮಿ ತಂಡವರು ಪ್ರಸ್ತುತ ಪಡಿಸಿದ್ದರು. ‘ಗೋಂದೊಲು’ ತುಳುನಾಡಿನಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದ ನಾಟಕ. ಹೆಣ್ಣಿನ ಸ್ವಾಭಿಮಾನ, ಆತ್ಮಸ್ಥೈರ್ಯದ ಪ್ರತೀಕವಾಗಿ ಇವತ್ತಿಗೂ ಬಲು ಶಕ್ತಿಶಾಲಿ ನಾಟಕ.

amruta someshwar pic

ಅಮೃತರಿಗೆ 60 ತುಂಬಿದಾಗ ‘ಯಕ್ಷಾಂದೋಳ’ ಅಮೃತರ ಯಕ್ಷಗಾನ ವಿಮರ್ಶಾ ಲೇಖನಗಳ ಕೃತಿಯನ್ನು ಉಚ್ಚಿಲ ಕಲಾಗಂಗೋತ್ರಿ ಅಮೃತ ಸೋಮೇಶ್ವರ ಅಭಿನಂದನಾ ಸಮಿತಿ ಪ್ರಕಟಿಸಿ ಗೌರವ ಸಮರ್ಪಣೆ ಸಲ್ಲಿಸಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಕೇಂದ್ರ ಭಾಷಾ ಸಮ್ಮಾನ್ ಪುರಸ್ಕಾರದಿಂದ ಗೌರವಿಸಲ್ಪಟ್ಟವರು ಅಮೃತರು.

ನುಡಿದಂತೆ ನಡೆದ, ಬರೆದಂತೆ ಬದುಕಿದ, ಸತ್ಯವನ್ನು ಸತ್ಯವೆಂದೇ ಪ್ರತಿಪಾದಿಸಿದ, ಆಸೆ, ಆಮಿಷಗಳಿಗೆ ಬೆನ್ನು ಹತ್ತದ ಬರಹಗಾರರು ಅಮೃತರು. ಅವರದೆಂದೂ ಗಟ್ಟಿ ಏರು ಧ್ವನಿಯಾಗಿರಲಿಲ್ಲ, ಆದರೆ ಸ್ಪಷ್ಟವಾದ ನಿಖರ ಧ್ವನಿಯಾಗಿತ್ತು. ತನ್ನ ಹೆಸರಿನಿಂದಲೆ ಸೋಮೇಶ್ವರ ಎಂಬ ಊರಿಗೆ ಕೀರ್ತಿ ಕಲಶರಾದವರು ಅಮೃತರು.

1600x960 1174498 taranath
ತಾರಾನಾಥ್‌ ಗಟ್ಟಿ ಕಾಪಿಕಾಡ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ? ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ? ಮಾಡ ಬನ್ನಿ...

ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?

ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?...

ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

 ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ...

ಸಂಕಲನವೆಂಬ ಮಾಯೆ: ಘನೀಭವಿಸಿದ ಕಾಲ ಮತ್ತು ಚಲಿಸುವ ಬಿಂಬ

ಸಂಕಲನವೆಂದರೆ ಕೇವಲ ಕಾಲವನ್ನು ಕತ್ತರಿಸಿ ಜೋಡಿಸುವುದಲ್ಲ, ಅದು ದೃಶ್ಯಗಳಿಗೆ ಜೀವ ತುಂಬುವ...