ಚುನಾವಣೆ | 155 ರ್‍ಯಾಲಿಗಳು: 2942 ಬಾರಿ ಕಾಂಗ್ರೆಸ್‌ ಜಪಿಸಿದ ಮೋದಿ; ಕಾಣೆಯಾದ ಉದ್ಯೋಗ/ಅಮೃತಕಾಲ

Date:

Advertisements

2024ರ ಲೋಕಸಭಾ ಚುನಾವಣೆ ಬಗಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಕೊನೆಯ ಹಂತದ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಅದಕ್ಕಾಗಿ, ದೇಶಾದ್ಯಂತ ಪ್ರಧಾನಿ ಮೋದಿ 155 ರ್‍ಯಾಲಿಗಳನ್ನು ನಡೆಸಿದ್ದಾರೆ. ಅಷ್ಟೇ ಭಾಷಣಗಳನ್ನು ಮಾಡಿದ್ದಾರೆ. ತಮ್ಮ ಭಾಷಣಗಳಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ವಿಪಕ್ಷಗಳನ್ನು ದೂರಿದ್ದಾರೆ. ಅವರು ತಮ್ಮ 155 ಭಾಷಣಗಳಲ್ಲಿ ಬರೋಬ್ಬರಿ 2,942 ಬಾರಿ ಕಾಂಗ್ರೆಸ್‌ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ, ಜನರ ಸಮಸ್ಯೆ, ಬಡತನ, ಉದ್ಯೋಗದ ಬಗ್ಗೆ ಅವರು ಉಲ್ಲೇಖಿಸಿರುವುದು ತೀರಾ ಕಡಿಮೆ. ಅದರಲ್ಲೂ ಅವರೇ ಹೇಳುವ ‘ಅಮೃತಕಾಲ’ವಂತೂ ಅವರ ಭಾಷಣದಲ್ಲಿ ಕಾಣೆಯಾಗಿದೆ.

ಇಂಗ್ಲಿಷ್‌ ಸುದ್ದಿ ತಾಣ ‘ದಿ ಕ್ವಿಂಟ್’ ಮೋದಿ ಅವರು ತಮ್ಮ ಭಾಷಣದಲ್ಲಿ ಹೆಚ್ಚಾಗಿ ಉಲ್ಲೇಖಿಸಿದ ಅಂಶಗಳು ಅಥವಾ ಪದಗಳ ಬಗ್ಗೆ ವಿಶ್ಲೇಷಣೆ ನಡೆಸಿದೆ. ಅವರು ಯಾವ ಪದಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಯಾವ ಅಂಶಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿದ್ದಾರೆ ಎಂಬುದನ್ನು ಅಂಕಿಗಳಲ್ಲಿ ನೀಡಿದೆ.

ಉದಾಹರಣೆಗೆ, ಮೋದಿ ಅವರು ಮೊದಲ ಮತ್ತು ಎರಡನೇ ಹಂತದ ಮತದಾನದ ಪ್ರಚಾರಗಳಲ್ಲಿ ‘ಮುಸ್ಲಿಮರು’ ಎಂಬ ಪದವನ್ನು ಪ್ರತಿ ಭಾಷಣದಲ್ಲಿ ಸರಾಸರಿ ಒಂದಕ್ಕಿಂತ ಕಡಿಮೆ ಬಾರಿ ಬಳಸಿದ್ದಾರೆ. ಆದರೆ, 3ನೇ ಮತ್ತು ನಂತರದ ಮತದಾನಗಳ ಪ್ರಚಾರದಲ್ಲಿ ಮುಸ್ಲಿಮರು ಪದದ ಬಳಕೆ ದುಪ್ಪಟ್ಟುಗೊಂಡಿದೆ.

Advertisements

ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪದವನ್ನು ಮೋದಿ ಅವರು ಅತ್ಯಂತ ಹೆಚ್ಚು ಬಾರಿ ಬಳಸಿದ್ದಾರೆ. ಆದರೆ, ಯುವಜನರಿಗೆ ಸಂಬಂಧಿಸಿದ ಉದ್ಯೋಗದ ಬಗ್ಗೆ ಕೇವಲ 53 ಬಾರಿ ಮಾತ್ರವೇ ಮಾತನಾಡಿದ್ದಾರೆ. ಹಿಂದೆ, ಮಹಿಳೆಯರ ರಕ್ಷಣೆಯ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದ ಮೋದಿ ಅವರು ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ, ಮಣಿಪುರ ಹಿಂಸಾಚಾರ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ನಡೆದಿರುವ ಇಂತಹ ಸಮಯದಲ್ಲಿ ಮಹಿಳೆಯರ ಬಗೆಗಿನ ಉಲ್ಲೇಖಗಳೂ ತೀರಾ ಕಡಿಮೆ ಇವೆ. ಅವರು ಮಹಿಳೆ ಪದವನ್ನು 244 ಬಾರಿ ಮಾತ್ರವೇ ಉಲ್ಲೇಖಿಸಿದ್ದಾರೆ.

ಭಾರತದ ರಾಜಕಾರಣದಲ್ಲಿ ಪ್ರಮುಖವಾಗಿರುವ ಪದಗಳನ್ನು ಮೋದಿ ಎಷ್ಟು ಬಾರಿ ಬಳಸಿದ್ದಾರೆ ಎಂಬುದರ ಸಂಖ್ಯೆಗಳು ಇಲ್ಲಿವೆ;

ಕಾಂಗ್ರೆಸ್: 2942
ಮೋದಿ*: 2862
ಬಡವರು: 949
SC/ST/OBC: 780
ಅಭಿವೃದ್ಧಿ: 633
ಇಂಡಿಯಾ ಮೈತ್ರಿಕೂಟ: 518
ಮೋದಿ ಕಿ ಗ್ಯಾರಂಟಿ: 342
ಭ್ರಷ್ಟಾಚಾರ: 341
ಮುಸ್ಲಿಮರು: 286
ಮಹಿಳೆಯರು: 244
ರಾಮಮಂದಿರ: 244
ವಿಕ್ಷಿತ್ ಭಾರತ್: 119
ಪಾಕಿಸ್ತಾನ: 104
ಪರಿವಾರವಾದ: 91
ಉದ್ಯೋಗ: 53
ವಿರೋಧ ಪಕ್ಷಗಳು: 35
ಆತ್ಮನಿರ್ಭರ ಭಾರತ: 23
ಅಮೃತಕಾಲ: 4

ವಿಶೇಷವೆಂದರೆ, ಮೋದಿ ಅವರು ತಮ್ಮ ಹೆಸರನ್ನೇ 2862 ಬಾರಿ ಬಳಸಿದ್ದಾರೆ. ಈ ಸಂಖ್ಯೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ (342) ಪದಗುಚ್ಛದ ಅಂಕಿಅಂಶವೂ ಒಳಗೊಂಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X