ಗಿಫ್ಟ್‌ ಪಾಲಿಟಿಕ್ಸ್‌ | ಬೆಳ್ಳಿ ಎಂದು ನಕಲಿ ಬೆಳ್ಳಿ ಲಕ್ಷ್ಮಿ ಫೋಟೋ ಕೊಟ್ಟ ಬಿಜೆಪಿ ಶಾಸಕ

Date:

Advertisements
  • ಬೆಳ್ಳಿ ಲಕ್ಷ್ಮಿ ಫೋಟೋ ಹರಿದ ಮಹಿಳೆ
  • ಬಿಜೆಪಿ ಉಡುಗೊರೆಗೆ ಮಹಿಳೆ ಆಕ್ರೋಶ

ರಾಜ್ಯ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ನಡುವೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಬೆಳ್ಳಿ ಫೋಟೋ ಎಂದು ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಆದರೆ, ಬಿಜೆಪಿ ಶಾಸಕ ನೀಡಿರುವ ಬೆಳ್ಳಿಯ ಅಸಲಿಯತ್ತನ್ನು ಮಹಿಳೆಯೊಬ್ಬರು ಬಯಲು ಮಾಡಿದ್ದಾರೆ.

ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಸದಾ ಹೇಳಿಕೊಳ್ಳುವ ಪ್ರೀತಂ ಗೌಡ ಅವರು ಮಹಿಳೆಯರಿಗೆ ಬೆಳ್ಳಿಯ ಲಕ್ಷ್ಮಿ ಫೋಟೋ ನೀಡಿದ್ದಾರೆ. ಆದರೆ, ಅದು ಬೆಳ್ಳಿಯದ್ದಲ್ಲ ನಕಲಿ ಎಂಬುದು ವಿಡಿಯೋ ಮೂಲಕ ಬಹಿರಂಗವಾಗಿದೆ.

ಕಳೆದ ಹದಿನೈದು ದಿನದಿಂದ ಹಾಸನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮತದಾರರ ಸೆಳೆಯಲು ಯತ್ನ ನಡೆಯುತ್ತಿದೆ. ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ವಾರ್ಡ್‌ವಾರು ಹಾಗು ಗ್ರಾ.ಪಂಚಾಯಿತಿವಾರು ಕಾರ್ಯಕ್ರಮ ನಡೆಯುತ್ತಿವೆ.

Advertisements

ಈ ಸುದ್ದಿ ಓದಿದ್ದೀರಾ? ಮುಸ್ಲಿಮರ ಮೀಸಲಾತಿ ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ; ವಿಚಾರಣೆ ಮುಂದೂಡಿಕೆ

ಬಿಜೆಪಿ ಶಾಸಕ ನೀಡಿದ ಬೆಳ್ಳಿ ಲಕ್ಷ್ಮಿ ಫೋಟೋದ ಅಸಲಿಯತ್ತು ಬಯಲು ಮಾಡಿದ ಮಹಿಳೆಯೊಬ್ಬರು ವಿಡಿಯೋದಲ್ಲಿ, “ಇದು ಬೆಳ್ಳಿ ಫೋಟೋ ಅಂತ ಕೊಟ್ಟವ್ರೆ, ಬೆಳ್ಳಿದೋ ಬಂಗಾರದ್ದೋ ನೋಡೋಣ, ಬೆಳ್ಳಿನ ನೀರಿಗೆ ಬಿಡ್ತಿವಿ ನೋಡಿ” ಎಂದು ಫೋಟೋವನ್ನು ಬಿಚ್ಚಿದ್ದಾರೆ.

ಬೆಳ್ಳಿ ಬಣ್ಣದ ಪೇಪರ್ ಮೂಲಕ ಲಕ್ಷ್ಮಿ ಫೋಟೋ ಮಾಡಲಾಗಿದ್ದು, “ನೋಡಿ, ಇದು ಬೆಳ್ಳಿ ಲಕ್ಷ್ಮಿ, ಇದು ಮಾರಿದ್ರೆ ಮೂವತ್ತು ಸಾವ್ರ ಸಿಗುತ್ತೆ ನೋಡಿ” ಎಂದು ಹರಿದು ಬಿಸಾಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X