ಮೋದಿ-ಶಾ ಜೋಡಿಗೆ ತಲೆನೋವು; ‘ಎನ್‌ಡಿಎ’ಯಲ್ಲಿ ಖಾತೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

Date:

Advertisements

2024ರ ಚುನಾವಣೆಯೂ ಸೇರಿದಂತೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವಂತವಾಗಿ ಲೋಕಸಭೆಯಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಸರ್ಕಾರ ರಚಿಸುವ ಕನಿಷ್ಠ 272 ಸ್ಥಾನಗಳು ಬೇಕಿರುವ ಲೋಕಸಭೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಮಾತ್ರವೇ ಗಳಿಸಿದೆ. ಹೀಗಾಗಿ, ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು, ಬಿಜೆಪಿ ಮತ್ತೆ ಸರ್ಕಾರ ರಚಿಸಲು ಎನ್‌ಡಿಎ ಪಾಲುದಾರರ ಸಹಕಾರ ಅತ್ಯಗತ್ಯವಾಗಿದೆ.

ಕಳೆದ ಎರಡು ಅವಧಿಯ ಸರ್ಕಾರದಲ್ಲಿ ತಮ್ಮನ್ನು ಮೌನವಾಗಿರಿಸಿದ್ದ ಬಿಜೆಪಿಗೆ ಈಗ ಎನ್‌ಡಿಎ ಮಿತ್ರಪಕ್ಷಗಳು ತಲೆನೋವು ಕೊಡಲು ಆರಂಭಿಸಿವೆ. ಸರ್ಕಾರ ರಚನೆಗೆ ಬೆಂಬಲ ನೀಡಬೇಕೆಂದರೆ ಸರ್ಕಾರದಲ್ಲಿ ತಮಗೆ ಪಾಲುದಾರಿಗೆ ಬೇಕೆಂದು ತಮ್ಮ ಬೇಡಿಕೆಗಳನ್ನು ಬಿಜೆಪಿಯ ಮುಂದಿಡುತ್ತಿವೆ. ಹೀಗಾಗಿ, ಎನ್‌ಡಿಎ ಕೂಟದೊಳಗೆ ಕೇಂದ್ರ ಸಚಿವ ಸಂಪುಟದಲ್ಲಿ ಖಾತೆಗಳಿಗೆ ಭಾರೀ ಡಿಮ್ಯಾಂಡ್‌ ಶುರುವಾಗಿದೆ.

ಈ ನಡುವೆ, ಎನ್‌ಡಿಎ ಭಾಗವಾಗಿರುವ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರ ಬಾಬು ನಾಯ್ಡು ಅವರ ಟಿಡಿಪಿಯನ್ನು ತಮ್ಮನ್ನ ಸೆಳೆಯಲು ‘ಇಂಡಿಯಾ’ ಕೂಟದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ಪ್ರತಿಯೊಬ್ಬರನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದು ಮೋದಿ-ಶಾ ಜೋಡಿಗೆ ತಲೆನೋವಾಗಿ ಪರಿಣಮಿಸಿದೆ.

Advertisements

ಟಿಡಿಪಿ ಮೋದಿ ನೇತೃತ್ವದ ಎನ್‌ಡಿಎ ಜೊತೆಗೆ ಇರುತ್ತದೆ ಎಂದು ನಾಯ್ಡು ಹೇಳಿದ್ದರೂ, ಮೋದಿ-ಶಾ ಎದುರು ನಾನಾ ಬೇಡಿಕೆಗಳನ್ನು ಇಟ್ಟಿದ್ದಾರೆ. ಆ ಬೇಡಿಕೆಗಳಿಗೆ ಮೋ-ಶಾ ಜೋಡಿ ಒಪ್ಪದಿದ್ದರೆ, ಅವರೂ ‘ಇಂಡಿಯಾ’ದತ್ತ ವಾಲಬಹುದು. ಇನ್ನು, ಜೆಡಿಯು ನಡೆ ನಿಗೂಡವಾಗಿದೆ.

ಎನ್‌ಡಿಎ ಸರ್ಕಾರದಲ್ಲಿ ಸ್ಪೀಕರ್ ಹುದ್ದೆ ಸೇರಿದಂತೆ 10 ಸಚಿವ ಸ್ಥಾನಗಳಿಗೆ ಟಿಡಿಪಿ ಬೇಡಿಕೆ ಇಟ್ಟಿದೆ. ಅದೇ ರೀತಿ, ಮೂರು ಕೇಂದ್ರ ಸಚಿವ ಮತ್ತು ಎರಡು ಕೇಂದ್ರ ರಾಜ್ಯ ಸಚಿವ ಖಾತೆಗಳಿಗೆ ಜೆಡಿಯು ಬೇಡಿಕೆ ಇಟ್ಟಿದೆ.

ಇನ್ನು, ಮಹಾರಾಷ್ಟ್ರ ಶಿವಸೇನೆಯ ಶಿಂಧೆ ಬಣ, ಒಂದು ಸಚಿವ, ಎರಡು ಕೇಂದ್ರ ರಾಜ್ಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಬಿಹಾರದ ಎಲ್‌ಜೆಪಿ ಒಂದು ಸಚಿವ, ಎರಡು ಕೇಂಧ್ರ ರಾಜ್ಯ ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಎಚ್‌ಎಎಂ ಪಕ್ಷವೂ ಒಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ.

ಈ ಎಲ್ಲರೂ ಈಗ ಎನ್‌ಡಿಎ ಒಳಗೆ ಕಿಂಗ್‌ಮೇಕರ್‌ಗಳಾಗಿದ್ದಾರೆ. ತಮ್ಮ ಬೇಡಿಕೆ ಈಡೇರದಿದ್ದರೆ, ಈ ಪಕ್ಷಗಳು ಎನ್‌ಡಿಎ ತೊರೆಯುವುದು ಖಚಿತವಾಗಿದೆ. ಈವರೆಗೆ, ಮೈತ್ರಿ ಸರ್ಕಾರವನ್ನು ನಿಭಾಯಿಸಿ ಅನುಭವವೇ ಇಲ್ಲದ ಮೋದಿ-ಶಾ ಜೋಡಿಗೆ ಇದು ಅಕ್ಷರಶಃ ತಲೆನೋವಾಗಿದೆ. ಯಾವ ರೀತಿಯಲ್ಲಿ ಎಲ್ಲ ಮಿತ್ರ ಪಕ್ಷಗಳನ್ನು ನಿಭಾಯಿಸಬೇಕು ಎಂಬುದು ತೋಚದಂತಾಗಿದೆ. ಎಲ್ಲ ಮಿತ್ರರಿಗೂ ಸಚಿವ ಸ್ಥಾನ ಕೊಟ್ಟರೆ, ಸರ್ಕಾರದಲ್ಲಿ ತಮ್ಮದೇನೂ ಹಿಡಿತ ಇರುವುದಿಲ್ಲ. ತಮ್ಮ ಆಟ ನಡೆಯುವುದಿಲ್ಲ ಎಂಬ ಸತ್ಯದ ಅರಿವೂ ಕೂಡ ಮೋ-ಶಾ ಜೋಡಿಗೆ ಸ್ಪಷ್ಟವಾಗಿ ಗೊತ್ತಾಗಿದೆ.

 

ಬುಧವಾರ ಸಂಜೆ ನಾಲ್ಕು ಗಂಟೆಗೆ ಎನ್‌ಡಿಎ ಸಭೆ ನಡೆಯಲಿದ್ದು, ಯಾರು ಸರ್ಕಾರ ರಚಿಸಲು ಬಿಜೆಪಿ ಜೊತೆ ಇರುತ್ತಾರೆ. ಯಾರು ಬಂಡಾಯ ಎದ್ದು ಹೊರ ನಡೆಯುತ್ತಾರೆ ಎಂದು ಸಂಜೆಯೊಳಗೆ ಗೊತ್ತಾಗಲಿದೆ.

ಇದೆಲ್ಲವನ್ನೂ, ಇಂಡಿಯಾ ಮೈತ್ರಿಕೂಟ ಗಮನಿಸುತ್ತಿದ್ದಾರೆ. ಎನ್‌ಡಿಎ ಸಭೆಯಲ್ಲಾಗುವ ವಿದ್ಯಮಾನಗಳನ್ನು ಗಮನಿಸಿ, ತಮ್ಮ ನಿರ್ಧಾರಗಳನ್ನು ಮಾರ್ಪಡಿಸಲು ‘ಇಂಡಿಯಾ’ ನಾಯಕರು ಕಾಯುತ್ತಿದ್ದಾರೆ. ಈ ನಡುವೆ, ಬಿಹಾರದಿಂದ ದೆಹಲಿಗೆ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆಯಾಗಿ ಪ್ರಯಾಣಿಸಿದ್ದಾರೆ. ಹೀಗಾಗಿ, ನಿತೀಶ್ ‘ಇಂಡಿಯಾ’ ಎಡೆಗೆ ಬರಬಹುದು ಎನ್ನಲಾಗುತ್ತಿದೆ.

ಇನ್ನು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆಯನ್ನೂ ಟಿಡಿಪಿಗೆ ಇಂಡಿಯಾ ನಾಯಕರು ನೀಡಿದ್ದಾರೆ. ಹೀಗಾಗಿ, ಎನ್‌ಡಿಎ ಸಭೆಯಲ್ಲಿ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದರೆ, ನಾಯ್ಡು ಕೂಡ ಇಂಡಿಯಾ ಜೊತೆಗೂಡುವ ಸಾಧ್ಯತೆಗಳಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನಿತೇಶ್ ಹೋಮ್ ಮಿನಿಸ್ಟರ್, ನಾಯ್ಡು ಫೈನಾನ್ಸ್ ಮಿನಿಸ್ಟರ್ ಕೇಳಲಿ. 😊😊

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

Download Eedina App Android / iOS

X