ಇಂಡಿಯಾ ಮೈತ್ರಿಕೂಟ ಸಭೆ ಸೇರಿ ಪ್ರಧಾನಿ ಅಭ್ಯರ್ಥಿ ನಿರ್ಧಿರಿಸಲಿದೆ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ (ಜೂನ್ 4) ಮುಕ್ತಾಯವಾಗಿದ್ದು ಬುಧವಾರ ಇಂಡಿಯಾ ಮೈತ್ರಿಕೂಟ ಸಭೆ ಸೇರಲಿದೆ. ಇದಕ್ಕೂ ಮುನ್ನ ಉದ್ಧವ್ ಠಾಕ್ರೆ ಈ ಹೇಳಿಕೆಯನ್ನು ನೀಡಿದ್ದಾರೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಬಿಜೆಪಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕೂಡಾ ಠಾಕ್ರೆ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಒಕ್ಕೂಟಕ್ಕೆ ಭರ್ಜರಿ ಗೆಲುವು
“ನಮ್ಮ ಇಂಡಿಯಾ ಮೈತ್ರಿಕೂಟ ರಚನೆಯಾದ ದಿನವೇ ನಾವು ದೇಶದಲ್ಲಿ ಸರ್ವಾಧಿಕಾರವನ್ನು ಕೊನೆಗಾಣಿಸಿ ಸಂವಿಧಾನವನ್ನು ಉಳಿಸಬೇಕೆಂದು ನಿರ್ಧರಿಸಿದ್ದೆವು. ನಾಳೆ (ಜೂನ್ 5) ನಾವು ಪ್ರಧಾನಿ ಅಭ್ಯರ್ಥಿಯನ್ನು ನಾವು ನಿರ್ಧರಿಸುತ್ತೇವೆ. ಎಲ್ಲಾ ದೇಶಭಕ್ತರು ಮತ್ತು ಅವರಿಂದ (ಬಿಜೆಪಿ) ಕಿರುಕುಳಕ್ಕೊಳಗಾದ ಎಲ್ಲಾ ಜನರು ಚಂದ್ರಬಾಬು ಕೂಡ ಬಿಜೆಪಿ ಸರ್ಕಾರದಿಂದ ಕಿರುಕುಳಕ್ಕೊಳಗಾಗಿದ್ದಾರೆ” ಎಂದು ಮಂಗಳವಾರ ಠಾಕ್ರೆ ಹೇಳಿದರು.
#WATCH | Mumbai: Former Maharashtra CM & Shiv Sena (UBT) chief Uddhav Thackeray says, “The day our INDIA alliance was formed, we had decided that we want to end the dictatorship in the country and save the Constitution. We will decide on the PM candidate tomorrow. All patriots… pic.twitter.com/Us31yNGSmb
— ANI (@ANI) June 4, 2024
ಹಾಗೆಯೇ “ಇಂಡಿಯಾ ಮೈತ್ರಿಕೂಟವು ತಮ್ಮಲ್ಲಿರುವ ಸಂಖ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಚನೆಗೆ ಹಕ್ಕು ಸಾಧಿಸುವ ಅಗತ್ಯವಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಹಾ ಸರ್ಕಾರ ಬೀಳಿಸಿದ್ದ ಬಿಜೆಪಿಗೆ ಮುಖಭಂಗ; ‘ಇಂಡಿಯಾ’ ಒಕ್ಕೂಟಕ್ಕೆ ಭಾರೀ ಮುನ್ನಡೆ
ಈ ನಡುವೆ ಇಂಡಿಯಾ ಒಕ್ಕೂಟವು ಮಹಾರಾಷ್ಟ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ದಕ್ಷಿಣದಲ್ಲಿ ಅರವಿಂದ್ ಸಾವಂತ್ ಸೇರಿದಂತೆ ಒಂಬತ್ತು ಶಿವಸೇನೆ (ಯುಬಿಟಿ) ಲೋಕಸಭಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಮುಂಬೈ ಉತ್ತರದಲ್ಲಿ ವರ್ಷಾ ಗಾಯಕ್ವಾಡ್ ಸೇರಿದಂತೆ ಒಟ್ಟು 13 ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಎನ್ಸಿಪಿಯ ಶರದ್ಚಂದ್ರ ಪವಾರ್ ಅವರು ಬಾರಾಮತಿಯಿಂದ ಸುಪ್ರಿಯಾ ಸುಳೆ ಸೇರಿದಂತೆ 8 ಸ್ಥಾನಗಳನ್ನು ಗೆದ್ದಿದ್ದಾರೆ. ಆದರೆ ನಿರೀಕ್ಷೆಗೆ ತಕ್ಕಂತೆ ಗೆಲುವು ಮಾಡುವಲ್ಲಿ ಎನ್ಡಿಎ ವಿಫಲವಾಗಿದೆ. ನಾಗ್ಪುರದಿಂದ ನಿತಿನ್ ಗಡ್ಕರಿ ಮತ್ತು ಮುಂಬೈ ಉತ್ತರದಲ್ಲಿ ಪಿಯೂಷ್ ಗೋಯಲ್ ಸೇರಿದಂತೆ ಬಿಜೆಪಿ 9 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ.