ಭಾರತ-ಪಾಕ್ ಸಂಘ‍ರ್ಷ | ‘ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌’ ಕಂಪನಿ ತೆರೆಯುತ್ತಿದೆ ಮೋದಿ ಸರ್ಕಾರ: ಸಂಜಯ್ ರಾವತ್

Date:

Advertisements

ಪಾಕಿಸ್ತಾನ ವಿರುದ್ದ ನಡೆದ ಆಪರೇಷನ್‌ ಸಿಂಧೂರ ಮತ್ತು ಭಯೋತ್ಪಾದನೆ ವಿರೋಧಿ ನಿಲುವಿನ ಹೆಸರಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ‘ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌’ ಕಂಪನಿ ತೆರೆಯಲು ಮುಂದಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ರಾವತ್, “ಭಯೋತ್ಪಾದನೆ ವಿರುದ್ದವಾಗಿ ಭಾರತದ ನಿಲುವನ್ನು ಮಿತ್ರ ರಾಷ್ಟ್ರಗಳಿಗೆ ತಿಳಿಸಲು ಕೇಂದ್ರ ಸರ್ಕಾರವು ನಿಯೋಗಗಳನ್ನು ಕಳಿಸುತ್ತಿದೆ. ಆ ಮೂಲಕ, ಸರ್ಕಾರವು ಸರ್ವಪಕ್ಷಗಳ ಸದಸ್ಯರನ್ನು ಪ್ರವಾಸಕ್ಕೆ ಕಳಿಸಿದೆ” ಎಂದು ಟೀಕಿಸಿದ್ದಾರೆ.

“ಕಾಶ್ಮೀರ ಸಮಸ್ಯೆಯ ಕುರಿತು ಸರ್ಕಾರವು ವಿಶೇಷ ಅಧಿವೇಶನ ಕರೆದು, ಗಂಭೀರವಾಗಿ ಚರ್ಚೆ ನಡಸಬೇಕಿತ್ತು. ಆದರೆ, ವಿಶೇಷ ಅಧಿವೇಶನ ಕರೆಯದೆ, ವಿದೇಶಗಳಿಗೆ ನಿಯೋಗಗಳನ್ನು ಕಳಿಸುವ ಮೂಲಕ ಸಮಸ್ಯೆಯನ್ನು ಅಂತಾರಾಷ್ರೀಯಗೊಳಿಸಲು ಬಿಜೆಪಿ ಮುಂದಾಗಿದೆ. ಮೊದಲು ವಿಶೇಷ ಅಧಿವೇಶನ ನಡೆಸಿ, ಬಳಿಕ ಅಗತ್ಯವಿದ್ದರೆ ನಿಯೋಗಗಳನ್ನು ಕಳಿಸಬಹುದಿತ್ತು” ಎಂದು ರಾವತ್ ಹೇಳಿದ್ದಾರೆ.

Advertisements

“ಸಂಘರ್ಷದಲ್ಲಿರುವ ಇಸ್ರೇಲ್, ಉಕ್ರೇನ್‌ನ ಪ್ರಧಾನಿಗಳು ವಿದೇಶಗಳಿಗೆ ನಿಯೋಗ ಕಳಿಸಿದ್ದಾರೆಯೇ. ಭಾರತದ ಸಂಸದರು ವಿದೇಶಗಳಿಗೆ ಹೋಗಿ ಏನು ಮಾಡುತ್ತಾರೆ. ಮೋದಿ ಅವರು 11 ವರ್ಷಗಳಲ್ಲಿ ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಆದರೆ, ಅವರ ಪ್ರವಾಸಗಳು ಯಾವುದೇ ಫಲಿತಾಂಶ ನೀಡಿಲ್ಲ” ಎಂದಿದ್ದಾರೆ.

“ಲೋಕಸಭೆಯಲ್ಲಿ ಶಿವಸೇನೆ (ಯುಟಿಬಿ)ಯ 9 ಸಂಸದರಿದ್ದಾರೆ. ಆದರೂ, ಸರ್ವಪಕ್ಷ ನಿಯೋಗದ ವಿಚಾರವಾಗಿ ನಮ್ಮ ಪಕ್ಷವನ್ನು ಸಂಪರ್ಕಿಸಿಲ್ಲ. ಟಿಎಂಸಿ, ಸಮಾಜವಾದಿ ಪಕ್ಷ ಹಾಗೂ ಆರ್‌ಜೆಡಿ ಪಕ್ಷದ ಯಾವುದೇ ಸಂಸದರನ್ನು ನಿಯೋಗದಲ್ಲಿ ಸೇರಿಸಿಕೊಂಡಿಲ್ಲ. ನಿಯೋಗದ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ವಿಪಕ್ಷಗಳೊಳಗೆ ಒಡಕು ಮೂಡಿಸಲು ಯತ್ನಿಸುತ್ತಿದೆ” ಎಂದು ರಾವತ್ ಆರೋಪಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X