ಲೋಕಸಭಾ ಚುನಾವಣೆ | ಕರ್ನಾಟಕ ಸೇರಿ 9 ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Date:

Advertisements

ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸಿರುವ ಕಾಂಗ್ರೆಸ್, ಇಂದು (ಮಾ.8) ಕರ್ನಾಟಕ ಸೇರಿದಂತೆ ಒಟ್ಟು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್ ಹಾಗೂ ಪವನ್ ಖೇರಾ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಹೈವೋಲ್ಟೇಜ್​ ಮೀಟಿಂಗ್​ನಲ್ಲಿ ಛತ್ತೀಸ್‌ಗಢ, ಕೇರಳ ಸೇರಿದಂತೆ ಒಟ್ಟು 9 ರಾಜ್ಯಗಳ ಸುಮಾರು 39 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿ, ಬಿಡುಗಡೆಗೊಳಿಸಿದೆ.

Advertisements

39 ಜನರ ಪೈಕಿ ಪಟ್ಟಿಯಲ್ಲಿ 15 ಜನರಲ್, 24 ಎಸ್‌ಸಿ ಎಸ್‌ಟಿ ಹಾಗೂ ಅಲ್ಪಸಂಖ್ಯಾತರು ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಅವರು ಈ ಬಾರಿ ಕೂಡ ಕೇರಳದ ವಯನಾಡ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ.

ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ರಾಜನಂದಗಾಂವ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ತಾಮ್ರಧ್ವಜ್ ಸಾಹು ಮಹಾಸಮುಂಡ್‌ ಅಭ್ಯರ್ಥಿಯಾಗಿದ್ದಾರೆ. ದೆಹಲಿ, ಛತ್ತೀಸ್‌ಗಢ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪರಿಗಣಿಸಲಾಗಿದೆ.

ಕರ್ನಾಟಕದಿಂದ ಸ್ಪರ್ಧಿಸಲಿರುವವರ ಪಟ್ಟಿ ಹೀಗಿದೆ:

ಲೋಕಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳು: 7 ಕ್ಷೇತ್ರಗಳು

  1. ವಿಜಯಪುರ: ಹೆಚ್ ಆರ್ ಅಲಗೂರು
  2. ಶಿವಮೊಗ್ಗ: ಗೀತಾ ಶಿವರಾಜ್‌ ಕುಮಾರ್
  3. ಹಾಸನ: ಶ್ರೇಯಸ್ ಪಟೇಲ್
  4. ಮಂಡ್ಯ: ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
  5. ತುಮಕೂರು: ಎಸ್‌ಪಿ ಮುದ್ದಹನುಮೇಗೌಡ
  6. ಬೆಂಗಳೂರು ಗ್ರಾಮಾಂತರ: ಡಿ ಕೆ ಸುರೇಶ್
  7. ಹಾವೇರಿ: ಆನಂದಸ್ವಾಮಿ ಗಡ್ಡದೇವ್ರು ಮಠ

ತೆಲಂಗಾಣ: 4 ಕ್ಷೇತ್ರ

  1. ಝಾಹಿರಾ ಬಾದ್: ಸುರೇಶ್ ಕುಮಾರ್ ಶೆಟ್ಕಾರ್
  2. ನಳಗುಂದಾ: ರಘುವೀರ್ ಕುಂದುರು
  3. ಮೆಹಬೂಬ್‌ ನಗರ: ಚಲ್ಲವಂಶಿ ಚಾಂದ್ ರೆಡ್ಡಿ
  4. ಮೆಹಬೂಬಾ ಬಾದ್: ಬಾಲರಾಮ್ ನಾಯ್ಕ್ ಪೊರಿಕಾ

ಕೇರಳ: ಲೋಕಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳು; 16 ಕ್ಷೇತ್ರ

  1. ಕಾಸರಗೋಡು: ರಾಜ್‌ಮೋಹನ್ ಉನ್ನಿತ್ತಾನ್
  2. ಕಣ್ಣೂರು: ಕೆ ಸುರೇಂದ್ರನ್
  3. ವಡಗರ: ಶಫಿ ಪರಂಬಿಲ್
  4. ವಯನಾಡ್: ರಾಹುಲ್ ಗಾಂಧಿ
  5. ಕೋಝಿಕ್ಕೋಡ್: ಎಂ ಕೆ ರಾಘವನ್
  6. ಪಾಲಕ್ಕಾಡ್ : ವಿ ಕೆ  ಶ್ರೀಕಂಠನ್
  7. ಅಲತ್ತೂರು: ರಮ್ಯಾ ಹರಿದಾಸ್
  8. ತ್ರಿಶ್ಶೂರ್: ಕೆ ಮುರಳೀಧರನ್
  9. ಚಾಲಕ್ಕುಡಿ: ಬೆನ್ನಿ ಬೆಹಾನನ್
  10. ಎರ್ನಾಕುಲಂ: ಹಿಬಿ ಇಡೆನ್
  11. ಇಡುಕ್ಕಿ: ಡೀನ್ ಕುರಿಯಾಕೋಸ್
  12. ಆಲಪ್ಪುಝ: ಕೆ ಸಿ ವೇಣುಗೋಪಾಲ್
  13. ಮಾವೇಲಿಕ್ಕರ: ಕೋಡಿಕುನ್ನಿಲ್ ಸುರೇಶ್
  14. ಪಟ್ಟಣಂತಿಟ್ಟ: ಆ್ಯಂಟೋ ಆ್ಯಂಟನಿ
  15. ಅಟ್ಟಿಂಗಲ್: ಅಡೂರ್ ಪ್ರಕಾಶ್
  16. ತಿರುವನಂತಪುರಂ: ಶಶಿ ತರೂರ್

ಛತ್ತೀಸ್‌ಗಢ: 6 ಕ್ಷೇತ್ರ

  1. ಜಂಗೀರ್-ಚಂಪಾ: ಡಾ. ಶಿವಕುಮಾರ್ ದಹಾರಿಯಾ
  2. ಕೋರ್ಬಾ: ಜೋತ್ಸಾನ ಮಹಂತ್
  3. ರಾಜ್‌ನಂದಗಾವ್: ಭೂಪೇಶ್ ಭಘೇಲ್
  4. ದುರ್ಗ್: ರಾಜೇಂದ್ರ ಸಾಹು
  5. ರಾಯ್‌ಪುರ: ವಿಕಾಸ್ ಉಪಾಧ್ಯಾಯ್
  6. ಮಹಾಸಮುಂದ್: ತಾಮರಾಧ್ವಜ್ ಸಾಹು

ಲಕ್ಷದ್ವೀಪ: 1 ಕ್ಷೇತ್ರ

  1. ಮೊಹಮ್ಮದ್ ಹಮ್ದುಲ್ಲಾ ಸಯೀದ್

ಮೇಘಾಲಯ: 2 ಕ್ಷೇತ್ರ

  1. ಶಿಲ್ಲಾಂಗ್: ವಿನ್ಸೆಂಟ್ ಹೆಚ್ ಪಾಲ
  2. ತುರಾ: ಸಾಲೆಂಗ್ ಎ ಸಂಗ್ಮಾ

ತ್ರಿಪುರಾ: 1 ಕ್ಷೇತ್ರ

ತ್ರಿಪುರಾ ವೆಸ್ಟ್: ಅಶೀಶ್ ಕುಮಾರ್ ಸಾಹಾ

ನಾಗಾಲ್ಯಾಂಡ್ : 1 ಕ್ಷೇತ್ರ

ನಾಗಾಲ್ಯಾಂಡ್: ಸುಪೊಂಗ್ ಮಿರೆನ್ ಜಮೀರ್

 

 

 

 

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X