ಮೋದೀಜಿ ಅವರು ಗಲ್ವಾನ್ ವಿಚಾರದಲ್ಲಿ ಚೀನಾಗೆ ನೀಡಿದ ʼಕ್ಲೀನ್ ಚಿಟ್ʼನಿಂದಾಗಿ ಚೀನಾ ತನ್ನ ದುರುದ್ದೇಶಿತ ಕಾರ್ಯಗಳನ್ನು ಸಾಧಿಸುತ್ತಿದೆ. ಇದು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ದೊಡ್ಡ ಪೆಟ್ಟು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕೃತಜ್ಞ ರಾಷ್ಟ್ರವು ಗಲ್ವಾನ್ ಕಣಿವೆಯಲ್ಲಿ ಮೂರು ವರ್ಷಗಳಲ್ಲಿ ಪ್ರಾಣ ತೆತ್ತು ಹುತಾತ್ಮರಾದ 20 ಶೌರ್ಯವಂತರಿಗೆ ತನ್ನ ಶ್ರದ್ಧಾಂಜಲಿ ಸಲ್ಲಿಸುತ್ತದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಸಂಘರ್ಷ ಪೂರ್ವ ಯಥಾಸ್ಥಿತಿ ಕಾಪಾಡದೇ ಇರುವುದಕ್ಕೆ ಮೋದಿ ಸರ್ಕಾರ ಜವಾಬ್ದಾರಿ. ನಾವು ಇಲ್ಲಿ 65 ಪೆಟ್ರೋಲಿಂಗ್ ಕೇಂದ್ರಗಳಲ್ಲಿ 26 ಕೇಂದ್ರಗಳನ್ನು ಕಳೆದುಕೊಂಡಿದ್ದೇವೆ” ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ಮೋದಿ ಸರ್ಕಾರದ ಕೆಂಪು ಕಣ್ಣು ಮಂಜಾಗಿದೆ. ಅದರ ಮೇಲೆ ಅದು ಟಿಂಟೆಡ್ ಚೀನೀ ಗ್ಲಾಸ್ ಧರಿಸುತ್ತಿದೆ! ಜವಾಬ್ದಾರಿಯುತ ವಿಪಕ್ಷವಾಗಿ ಚೀನಾದ ವಿಸ್ತರಣಾ ನೀತಿಯ ವಿರುದ್ಧವಾಗಿ ದೇಶವನ್ನು ಒಗ್ಗಟ್ಟಾಗಿ ಇರಿಸುವುದು ಹಾಗೂ ಮೋದಿ ಸರ್ಕಾರಕ್ಕೆ ಸತ್ಯದ ಕನ್ನಡಿ ತೋರಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಖರ್ಗೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಠ್ಯಪುಸ್ತಕದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಎನ್ಸಿಇಆರ್ಟಿಗೆ ದೇಶದ ಪ್ರತಿಷ್ಠಿತ 33 ವಿವಿ ಪ್ರಾಧ್ಯಾಪಕರ ಪತ್ರ
2020 ರಲ್ಲಿ ಅರುಣಾಚಲ ಪ್ರದೇಶದ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗಿನ ಸಂಘರ್ಷದಲ್ಲಿ ಬಲಿಯಾದ 20 ಭಾರತೀಯ ಸೈನಿಕರಿಗೆ ಇಂದು (ಜೂನ್ 15) ಶ್ರದ್ಧಾಂಜಲಿ ಸಲ್ಲಿಸಿತು. ಅಲ್ಲದೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಈ ಸಂಘರ್ಷಕ್ಕಿಂತ ಮೊದಲು ಇದ್ದ ಯಥಾಸ್ಥಿತಿಯನ್ನು ಕಾಪಾಡಲು ವಿಫಲವಾದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.