ಚುನಾವಣೆಯಲ್ಲಿ ಗೆಲ್ಲಲು ಮೋದಿ ನೇತೃತ್ವದ ಬಿಜೆಪಿ ಬಂಗಾಳದಲ್ಲಿ ಜಾತಿ ಆಧಾರಿತ ರಾಜಕೀಯವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಧರ್ಮ ಆಧಾರಿತ ವಿಭಜನೆಯಾಗಿದೆ. ಬಿಜೆಪಿ ಈಗ ಸಮಾಜವನ್ನು ಮತ್ತಷ್ಟು ವಿಭಜಿಸಲು ಪ್ರಚೋದಿಸುತ್ತಿದೆ.
ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ತಮ್ಮ ಎರಡನೇ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್, ಎಡಪಕ್ಷಗಳು ಮತ್ತು ಟಿಎಂಸಿಯ ದುರಾಡಳಿತದಿಂದಾಗಿ ಬಂಗಾಳದ ಕೈಗಾರಿಕಾ ಕುಸಿತ ಎತ್ತಿ ತೋರಿಸುತ್ತಿದೆ. ಟಿಎಂಸಿ ಅಡಿಯಲ್ಲಿ ತೊಂದರೆ ಅನುಭವಿಸಿದವರಿಗೆ ನ್ಯಾಯ ಒದಗಿಸಲಾಗುವುದು” ಎಂದು ಕೃಷ್ಣನಗರ, ರಣಘಾಟ್ ಮತ್ತು ಬಹರಾಂಪುರದ ಜನಸಮೂಹದ ಎದುರು ಭರವಸೆ ನೀಡಿದರು.
“ಮತುವಾ ಸಮುದಾಯದ ನೋವುಗಳನ್ನು ಅಲ್ಲಗಳೆಯಲಾಗದು. ಅಂತಹ ಪ್ರತಿಯೊಬ್ಬ ವ್ಯಕ್ತಿಯ ದುಃಖವನ್ನು ತೆಗೆದುಹಾಕಲು ಮಾತ್ರ ನಮ್ಮ ಸರ್ಕಾರಕ್ಕೆ ಸಿಎಎ ತರಲು ಧೈರ್ಯವಿತ್ತು. ಆದರೂ, ಜನರ ಹೃತ್ಪೂರ್ವಕ ಬೆಂಬಲದ ಹೊರತಾಗಿಯೂ ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಟಿಎಂಸಿ ಸಿಎಎಯನ್ನು ವಿರೋಧಿಸುತ್ತದೆ. ಬಂಗಾಳದ ಪ್ರಗತಿ ಮತ್ತು ಅಭಿವೃದ್ಧಿಗಾಗಿ, ಸಾಧ್ಯವಾದಷ್ಟು ಬಿಜೆಪಿ ಸಂಸದರನ್ನು ಆಯ್ಕೆ ಮಾಡುವುದು ಬಹಳ ಮುಖ್ಯ” ಎಂದು ಮೋದಿಯವರು ಮತಕ್ಕಾಗಿ ಒತ್ತಾಯಿಸಿದರು.
ಪಶ್ಚಿಮ ಬಂಗಾಳದಲ್ಲಿರುವ ಮತುವಾ ಸಮುದಾಯವು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಕೇಂದ್ರಬಿಂದುವಾಗಿದೆ. ಮತುವಾ – ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ನಾಡಿಯಾದಂತಹ ಜಿಲ್ಲೆಗಳಲ್ಲಿ ಸುಮಾರು 3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಎಸ್ಸಿ ಸಮುದಾಯವಾಗಿದೆ. ಸುಮಾರು 50ರಿದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ನಿರ್ಧರಿಸುವಲ್ಲಿ ಈ ಸಮುದಾಯವು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬಿಜೆಪಿ ಸಹಜವಾಗಿಯೇ ಕಣ್ಣಿಟ್ಟಿದ್ದು, ಮತಬ್ಯಾಂಕಿಗಾಗಿ ಅವರನ್ನು ತಮ್ಮತ್ತ ಸೆಳೆಯುತ್ತಿದೆ. ದುರದೃಷ್ಟವಶಾತ್ ಬಿಜೆಪಿಯ ಆಜ್ಞೆ ಮೇರೆಗೆ ಹೊಸ ಜಾತಿ ಆಧಾರಿತ ರಾಜಕೀಯ ಬೆಳೆಯುತ್ತಿದೆ. ಬಂಗಾಳದಲ್ಲಿ ಯುಪಿ-ಬಿಹಾರ ಮಾದರಿಯ ರಾಜಕೀಯವನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಂಗಾಳದಲ್ಲಿ ಜಾತಿ ಆಧಾರಿತ ರಾಜಕೀಯವು ಮೊದಲು ಹೆಚ್ಚು ಪ್ರಾಮುಖ್ಯತೆ ಪಡೆದಿರಲಿಲ್ಲ. ಇದು ಬಂಗಾಳದಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ಕಾರಣವಾಗಬಹುದು.
ಚುನಾವಣೆಯಲ್ಲಿ ಗೆಲ್ಲಲು ಮೋದಿ ನೇತೃತ್ವದ ಬಿಜೆಪಿ ಬಂಗಾಳದಲ್ಲಿ ಜಾತಿ ಆಧಾರಿತ ರಾಜಕೀಯವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಧರ್ಮ ಆಧಾರಿತ ವಿಭಜನೆಯಾಗಿದೆ. ಬಿಜೆಪಿ ಈಗ ಸಮಾಜವನ್ನು ಮತ್ತಷ್ಟು ವಿಭಜಿಸಲು ಪ್ರಚೋದಿಸುತ್ತಿದೆ. ಬಂಗಾಳದ ರಾಜಕೀಯದಲ್ಲಿ ಹೊಸ ಆಯಾಮವನ್ನು ಸೇರಿಸುವ ಮೊದಲು ಬಂಗಾಳದ ಜನರು ಅಂತಹ ಪ್ರಯತ್ನದಿಂದ ಜಾಗರೂಕರಾಗಿರಬೇಕು. ಬಂಗಾಳವು ಅಸಂಖ್ಯಾತ ಸಮಸ್ಯೆಗಳನ್ನು ಹೊಂದಿದೆ. ಬಿಜೆಪಿ ಬಂಗಾಳವನ್ನು ಅಭಿವೃದ್ಧಿಪಡಿಸಲು ಬಯಸಿದರೆ, ಅದು ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಜಾತಿ ಅಥವಾ ಪಂಗಡದ ನಿರ್ದಿಷ್ಟತೆ ಏಕೆ?
ಬೋಲ್ಪುರದಲ್ಲಿ ನಡೆದ ಸತತ ಮೂರನೇ ರ್ಯಾಲಿಯಲ್ಲಿ, ಪಿಎಂ ಮೋದಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿ, “ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸಿ ಗುಣಮಟ್ಟವನ್ನು ಕಾಪಾಡಲಾಗುವುದು. ಉನ್ನತ ಶಿಕ್ಷಣದ ಪ್ರವೇಶಕ್ಕೆ ವಿದ್ಯಾರ್ಥಿಗಳು ಸೀಟುಗಳಿಗಾಗಿ ಹೆಣಗಾಡುವುದನ್ನು ತಡೆಯುವ ಉದ್ದೇಶದಿಂದ ದೇಶಾದ್ಯಂತ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದಾಗಿ” ಅಪ್ಪಟ ಸುಳ್ಳುಗಳನ್ನು ಎತ್ತಿ ಹಿಡಿದಿದ್ದಾರೆ.
“ಟಿಎಂಸಿ ನಾಯಕರು ಪೊಂಜಿ ಯೋಜನೆಗಳು, ಪಡಿತರ ಮತ್ತು ನೇಮಕಾತಿ ಹಗರಣಗಳಿಂದ ಹಿಡಿದು ಕಲ್ಲಿದ್ದಲು ಮತ್ತು ಪ್ರಾಣಿಗಳ ಕಳ್ಳಸಾಗಣೆ ಹಗರಣಗಳವರೆಗೆ ವಿವಿಧ ರೀತಿಯ ಊಹಿಸಲಾಗದ ಹಗರಣಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಪ್ರತಿಯೊಂದು ಹಗರಣವೂ ನೂರಾರು ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ, ಈ ಜನರು ಸಾರ್ವಜನಿಕರನ್ನು ಎಲ್ಲಾ ರೀತಿಯಲ್ಲಿ ಹೇಗೆ ಲೂಟಿ ಮಾಡಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು. ಸುಮಾರು 80 ಕೋಟಿ ಭಾರತೀಯರಿಗೆ ಕೋವಿಶಿಲ್ಡ್ ಲಸಿಕೆ ನೀಡಲಾಗಿದೆ. ಪ್ರತಿಯೊಬ್ಬರಿಗೆ 2 ಡೋಸ್ ನೀಡಲಾಗಿದೆ. ಲಸಿಕೆಯಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ತಯಾರಕ ಕಂಪನಿ ಹೇಳಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಹಾಗೂ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಭಯ ವ್ಯಕ್ತಪಡಿಸಿದವರ ಅನುಮಾನಗಳು ಮತ್ತು ಭಯಗಳು ಈಗ ನಿಜವಾಗಿರುವುದು ಸಾಬೀತಾಗಿದೆ. ಲಸಿಕಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ದೇಣಿಗೆ ಪಡೆದ ಮೋದಿ ಜನರ ಜೀವದ ಜತೆ ಚೆಲ್ಲಾಟವಾಡಿದ್ದಾರೆ.
ಪಿಎಂ ಕೇರ್ಸ್ ಫಂಡ್ ಅತಿದೊಡ್ಡ ಹಗರಣ: ಪಿಎಂ ಕೇರ್ಸ್ ಫಂಡ್ನಲ್ಲಿ, ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳಲಾಗುತ್ತದೆ, ಸರ್ಕಾರದ ಅಡಿಯಲ್ಲಿ ಬರುವುದಿಲ್ಲ ಎನ್ನುತ್ತಾರೆ. ಆದರೆರ ಎಲ್ಲ ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ದೇಣಿಗೆ ನೀಡುವಂತೆ ಮಾಡಲಾಯಿತು, ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಹಣ ನೀಡುವಂತೆ ಕೇಳಲಾಯಿತು. ಈಗ ಸರ್ಕಾರವು ಎಲ್ಲಿಂದ ಹಣ ಪಡೆಯುತ್ತಿದೆ, ಎಷ್ಟು ಸಂಗ್ರಹಿಸಲಾಗಿದೆ, ಸರ್ಕಾರ ಎಷ್ಟು ಖರ್ಚು ಮಾಡುತ್ತದೆ ಮತ್ತು ಎಷ್ಟು ಎಂದು ಹೇಳುತ್ತಿಲ್ಲ. ಸಾರ್ವಜನಿಕರಿಗೆ ಏನೂ ಗೊತ್ತಾಗುತ್ತಿಲ್ಲ, ಇದು ಬಹುಶಃ ಇನ್ನೂ ದೊಡ್ಡ ಹಗರಣವಾಗಲಿದೆ.
“ಈ ಹಗರಣಗಳಿಗೆ ಬಲಿಯಾದ ಯುವಕರಿಗೆ ಸಹಾಯ ಮಾಡಲು ಕಾನೂನು ಕೋಶ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸುವಂತೆ ನಾನು ಬಂಗಾಳ ಬಿಜೆಪಿಯನ್ನು ಕೇಳಿದ್ದೇನೆ. ಇಂದು, ನಾನು ಬಂಗಾಳದ ಯುವಕರಿಗೆ ಭರವಸೆ ನೀಡುತ್ತೇನೆ: ನಿಮ್ಮನ್ನು ಕಷ್ಟ ಅನುಭವಿಸುವಂತೆ ಮಾಡಿದವರನ್ನು ಶಾಂತಿಯಿಂದ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ. ನಾನು ಭ್ರಷ್ಟರನ್ನು ಬಿಡುವುದಿಲ್ಲ, ಇದು ಮೋದಿ ಕಿ ಗ್ಯಾರಂಟಿ” ಬಂಗಾಳದ ಯುವಕರಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಈ ಎಲ್ಲ ಕ್ರಮಗಳು ಮತ್ತು ಪ್ರಯತ್ನಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಮತ್ತಷ್ಟು ಹಸಿ ಸುಳ್ಳುಗಳನ್ನು ಹೇಳಿದರು.
ಬಿಜೆಪಿಯ ‘ವಾಷಿಂಗ್ ಮೆಷಿನ್’ ಸುದ್ದಿ ಈಗ ಹೆಚ್ಚಾಗಿ ಕಾಣಿಸುತ್ತಿದ್ದು, ಈ ಹಿಂದೆ ಭ್ರಷ್ಟಾಚಾರ ಆರೋಪವನ್ನು ಹೊತ್ತಿದ್ದವರೆಲ್ಲ ಈಗ ಬಿಜೆಪಿಯ ಮಡಿಲು ಸೇರಿದ್ದಾರೆ. ಅಂತಹ ನಾಯಕರುಗಳಲ್ಲಿ ತಪಸ್ ರಾಯ್ ಕೂಡಾ ಒಬ್ಬರು.
ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ʼವಿಕಸಿತ್ ಭಾರತ್ʼ ಘೋಷಣೆಯಂತೆ ಬಡತನ ನಿರ್ಮೂಲನೆ ಮಾಡಿದ್ದಾರೆಯೇ ಮೋದಿ?
ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ತಪಸ್ ರಾಯ್ ಅವರ ಮೇಲೆ ಈ ವರ್ಷದ ಜನವರಿಯಲ್ಲಿ ಇಡಿ ದಾಳಿ ನಡೆಸಿತ್ತು. ಇದೀಗ ಸ್ವತಃ ವಾಷಿಂಗ್ ಮೆಷಿನ್ ಯೋಜನೆಯ ಫಲಾನುಭವಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಭ್ರಷ್ಟ ರಾಜಕಾರಣಿಗಳಿಗೆ ಟಿಕೆಟ್ ನೀಡುವಲ್ಲಿ ನಿರತವಾಗಿದ್ದರೂ ಪ್ರಧಾನಿಯವರು ‘ಭ್ರಷ್ಟಾಚಾರ್ ಹಟಾವೋ’ ಘೋಷಣೆಯನ್ನು ನಾಚಿಕೆಯಿಲ್ಲದೆ ದೇಶಾದ್ಯಂತ ಹರಡುತ್ತಿದ್ದಾರೆ. ಯುವಜನರ ದಿಕ್ಕು ತಪ್ಪಿಸುತ್ತಿದ್ದಾರೆ.