ಸಾವಿತ್ರಿಬಾಯಿ ಫುಲೆ ಬಗ್ಗೆ ಆಕ್ಷೇಪಾರ್ಹ ಲೇಖನ ಪ್ರಕಟ : 2 ವೆಬ್‌ಸೈಟ್‌ಗಳ ವಿರುದ್ಧ ಎಫ್‌ಐಆರ್‌ ದಾಖಲು

Date:

Advertisements

ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಆಕ್ಷೇಪಾರ್ಹ ಲೇಖನಗಳನ್ನು ಪ್ರಕಟಿಸಿದ್ದ ವೆಬ್‌ಸೈಟ್‌ಗಳು ಮತ್ತು ಟ್ವಿಟರ್‌ ಬಳಕೆದಾರನ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ʼಇಂಡಿಕ್‌ ಟೇಲ್ಸ್‌ʼ ಮತ್ತು ʼಹಿಂದೂ ಪೋಸ್ಟ್‌ʼ ಎಂಬ ಎರಡು ವೆಬ್‌ಸೈಟ್‌ಗಳು ಮತ್ತು ಓರ್ವ ಟ್ವಿಟರ್‌ ಬಳಕೆದಾರ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ವಿವಾದಾತ್ಮಕ ಲೇಖನವನ್ನು ಪ್ರಕಟಿಸಿದ್ದನ್ನು ಪ್ರಶ್ನಿಸಿ ಮತ್ತು ಕ್ರಮಕ್ಕೆ ಆಗ್ರಹಿಸಿ ಅಜಿತ್‌ ಪವಾರ್‌ ನೇತೃತ್ವದಲ್ಲಿ ಎನ್‌ಸಿಪಿ ಕಾರ್ಯಕರ್ತರು ಮುಂಬೈ ನಗರ ಪೊಲೀಸ್‌ ಆಯುಕ್ತ ವಿವೇಕ್‌ ಫನ್ಸಾಲ್ಕರ್‌ ಅವರ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದರು. ಹಲವು ಸಂಘಟನೆಗಳು ಕೂಡ ಲೇಖನಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು.

ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಎರಡೂ ವೆಬ್‌ಸೈಟ್‌ಗಳ ಮೇಲೆ ಕ್ರಮಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆ ಆಜಾದ್‌ ಮೈದಾನ್‌ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 500, 500 (2)ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

Advertisements

ಸಾವಿತ್ರಿಬಾಯಿ ಫುಲೆ ಕುರಿತು ಪ್ರಕಟವಾದ ವಿವಾದಾತ್ಮಕ ಲೇಖನಗಳ ತುಣುಕು

ʼಇಂಡಿಕ್‌ ಟೇಲ್ಸ್‌ʼ ವೆಬ್‌ಸೈಟ್‌, “ಸಾವಿತ್ರಿ ಬಯಿ ಫುಲೆಗಿಂತ ಮೊದಲಿಗಿದ್ದ ಹಿಂದೂ ಶಿಕ್ಷಕಿಯರು ಏಕೆ ಜನಪ್ರಿಯತೆಗೆ ಬರಲಿರಲ್ಲ?” ಎಂಬ ಶೀರ್ಷಿಕೆಯಡಿ ಕಳೆದ ಜನವರಿ 4ರಂದು ಲೇಖನ ಪ್ರಕಟಿಸಿತ್ತು. “ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣಕ್ಕೆ ಬ್ರಿಟಿಷ್‌ ಮಿಷನರಿಗಳು ಹಣಕಾಸಿನ ನೆರವು ನೀಡಿದ್ದರು” ಆರೋಪಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಕುಸ್ತಿ ಪಟುಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಬಿಜೆಪಿ ಸಂಸದೆ

ಇನ್ನು ʼಹಿಂದು ಪೋಸ್ಟ್‌ʼ ತನ್ನ ವೆಬ್‌ಸೈಟ್‌ನಲ್ಲಿ, “ಸಾವಿತ್ರಿಬಾಯಿ ಫುಲೆ ನಿಜಕ್ಕೂ ಭಾರತದ ಮೊದಲ ಮಹಿಳಾ ಶಿಕ್ಷಕಿಯೇ?” ಎಂಬ ಶೀರ್ಷಿಕೆಯಡಿ ವಿವಾದಾತ್ಮಕ ಲೇಖನವನ್ನು ಪ್ರಕಟಿಸಿತ್ತು. “ಸಾವಿತ್ರಿಬಾಯಿ ಫುಲೆ ಹುಟ್ಟುವುದಕ್ಕೆ 21 ವರ್ಷಗಳ ಮೊದಲೇ ಸಂಸ್ಕೃತ, ಗಣಿತ ಮತ್ತು ಆಯುರ್ವೇದಲ್ಲಿ ಪಾಂಡಿತ್ಯ ಹೊಂದಿದ್ದ ಹೋಟಿ ವಿದ್ಯಾಲಂಕಾರ್‌ ಎಂಬ ಬಂಗಾಳಿ ಹಿಂದೂ ಮಹಿಳೆ ವಾರಣಾಸಿಯಲ್ಲಿ ಶಾಲೆಯನ್ನು ಆರಂಭಿಸಿದ್ದರು” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟು ಮಾತ್ರವಲ್ಲ, “ಸಾವಿತ್ರಿಬಾಯಿ ಫುಲೆ ಬ್ರಿಟಿಷರನ್ನು ಮತ್ತು ಕ್ರೈಸ್ತವನ್ನು ವಿಜೃಂಭಿಸಿ ಕವಿತೆಗಳನ್ನು ರಚಿಸುತ್ತಿದ್ದರು” ಎಂದೂ ಉಲ್ಲೇಖಿಸಲಾಗಿತ್ತು.

ಎಫ್‌ಐಆರ್‌ ದಾಖಲಾಗುತ್ತಲೇ ʼಇಂಡಿಕ್‌ ಟೇಲ್ಸ್‌ʼ ವೆಬ್‌ಸೈಟ್‌ನ ಮುಖಪುಟದಲ್ಲಿ ಕ್ಷಮೆಯಾಚನೆಯ ಬಹಿರಂಗ ಪತ್ರ ಪ್ರತ್ಯಕ್ಷವಾಗಿದೆ. “ವಿವಾದಿತ ಲೇಖನ ನಮ್ಮದಲ್ಲ, ʼಭಾರದ್ವಾಜ್‌ ಸ್ಪೀಕ್ಸ್‌ʼ ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದ ಲೇಖನವನ್ನು ನಾವು ಮರು ಪ್ರಕಟಿಸಿದ್ದೇವೆ. ಸದ್ಯ ವಿವಾದಿತ ಲೇಖನವನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕಿದ್ದೇವೆ. ನಮ್ಮಿಂದ ಯಾರಿಗಾದರೂ ನೋವಾಗಿದ್ದೆ ಕ್ಷಮೆ ಇರಲಿ” ಎಂದು ಬರೆಯಲಾಗಿದೆ.

indic tales

ಇನ್ನು ʼಇಂಡಿಕ್‌ ಟೇಲ್ಸ್‌ʼ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ʼಭಾರದ್ವಾಜ್‌ ಸ್ಪೀಕ್ಸ್‌ʼ ಹೆಸರಿನ ಟ್ವಿಟರ್‌ ಖಾತೆ ಅದಾಗಲೇ ನಿಷ್ಕ್ರೀಯಗೊಂಡಿದೆ.

bhardwaj speaks
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X