- ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮೇಲೆ ಅಂಕಿತಾ ಆರೋಪ
- ಅಂಕಿತಾ ವಿರುದ್ಧ ನೋಟಿಸ್ ಜಾರಿ ಮಾಡಿದ ಬಿ ವಿ ಶ್ರೀನಿವಾಸ್
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಅಸ್ಸಾಂನ ಭಾರತೀಯ ಯುವ ಕಾಂಗ್ರೆಸ್ನ ಅಧ್ಯಕ್ಷೆ ಸ್ಥಾನದಿಂದ ಅಂಕಿತಾ ದತ್ತ ಅವರನ್ನು ಉಚ್ಚಾಟಿಸಲಾಗಿದೆ.
ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಅವರ ಮೇಲೆ ಅಂಕಿತಾ ಅವರು ಕಿರುಕುಳದ ಆರೋಪ ಮಾಡಿದ ಕೆಲವು ದಿನಗಳ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಶನಿವಾರ (ಏಪ್ರಿಲ್ 22) ಪ್ರಕಟಣೆ ಹೊರಡಿಸಿದೆ.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಅಂಕಿತಾ ದತ್ತ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ಆರು ವರ್ಷದ ಅವಧಿವರೆಗೂ ಈ ಆದೇಶ ಇರಲಿದೆ ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ಹೇಳಿದೆ.
ಅಂಕಿತಾ ಅವರು ಶ್ರೀನಿವಾಸ್ ವಿರುದ್ಧ ಟ್ವೀಟ್ನಲ್ಲಿ ಆರೋಪಿಸಿದ್ದರು. ಶ್ರೀನಿವಾಸ್ ಒಬ್ಬ ಕಾಮದೃಷ್ಟಿ ಹೊಂದಿದ, ಮಹಿಳೆಯರ ಬಗ್ಗೆ ಪೂರ್ವಾಗ್ರಹಪೀಡಿತ ವ್ಯಕ್ತಿ ಎಂದು ಅವರು ಧೂಷಿಸಿದ್ದರು.
“ನಾನೊಬ್ಬ ಮಹಿಳಾ ನಾಯಕಿ, ನಾನೇ ಕಿರುಕುಳಕ್ಕೆ ಒಳಗಾದರೆ ಪಕ್ಷಕ್ಕೆ ಸೇರುವಂತೆ ಇತರ ಮಹಿಳೆಯರನ್ನು ಹೇಗೆ ಬೆಂಬಲಿಸಲಿ” ಎಂದು ಟ್ವೀಟ್ನಲ್ಲಿ ಅಂಕಿತಾ ಅವರು ಹೇಳಿದ್ದರು.
ಈ ಕುರಿತು ಅಂಕಿತಾ ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಶ್ರೀನಿವಾಸ್ ತಮ್ಮ ಮೇಲೆ ಲಿಂಗ ತಾರತಮ್ಯದ ಮೂಲಕ ಆರು ತಿಂಗಳ ಕಾಲ ನಿರಂತರ ಕಿರುಕುಳ ನೀಡಿದ್ದಾರೆ ಎಂದು ಟ್ವೀಟ್ನಲ್ಲಿ ಆರೋಪಿಸಿದ್ದರು.
ಅಲ್ಲದೆ ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಅವರು ಕ್ರಮ ಕೈಗೊಂಡಿಲ್ಲ ಎಂದು ಅಂಕಿತಾ ದತ್ತ ದೂರಿದರು.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿಯಿಂದ ಇಂದು ಅಧಿಕೃತ ಬಂಗಲೆ ತೆರವು
“ನಾನು ಶ್ರೀನಿವಾಸ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾಯುತ್ತಿದ್ದೆ” ಎಂದು ಅಂಕಿತಾ ಹೇಳಿದ್ದರು.
ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಶ್ರೀನಿವಾಸ್, ಅಂಕಿತಾ ಅವರಿಗೆ ನೋಟಿಸ್ ನೀಡಿದ್ದರು. ಅಂಕಿತಾ ಅವರು ತಮ್ಮ ಹೇಳಿಕೆಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.
ಅಂಕಿತಾ ಅವರು ಅಮ್ಗುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.