ಸಂಸತ್‌ನಲ್ಲಿ ‘ಮಾಧ್ಯಮ ಮಸೂದೆ’ ಅಂಗೀಕಾರ; ಆತಂಕಕಾರಿ ಎಂದ ಎನ್‌ಎಜಿ-ಡಿಯುಜೆ

Date:

Advertisements

ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2023 ಅನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿವೆ. ಈ ಮಸೂದೆಯಲ್ಲಿ ಪತ್ರಿಕೋದ್ಯಮದ ಮೇಲೆ ಹಲವಾರು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಮಸೂದೆಯನ್ನು ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಎನ್‌ಎಜೆ) ಮತ್ತು ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ (ಡಿಯುಜೆ) ವಿರೋಧಿಸಿವೆ. ಅಲ್ಲದೆ, ಮಸೂದೆಯ ಷರತ್ತುಗಳು ‘ಆತಂಕಕಾರಿ’ಯಾಗಿವೆ ಎಂದು ಅವು ಹೇಳಿವೆ.

ಎರಡೂ ಸಂಘಗಳು ಮಾಧ್ಯಮ ಆಯೋಗಕ್ಕೆ ಜಂಟಿ ಪತ್ರ ಬರೆದಿವೆ. “ಹೊಸ ಮಸೂದೆಯು ಮಾಧ್ಯಮ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ. ಪತ್ರಕರ್ತರು ಮತ್ತು ಅವರ ಗೌಪ್ಯ ಸುದ್ದಿ ಮೂಲಗಳು ಸೇರಿದಂತೆ ನಾಗರಿಕರ ಮೇಲೆ ವ್ಯಾಪಕ ಕಣ್ಗಾವಲು ಇಡುತ್ತವೆ. ಇದು ಸರ್ಕಾರವು ಮಾಧ್ಯಮಗಳ ಮೇಲೆ ಸೆನ್ಸಾರ್‌ಶಿಪ್‌ ಅಧಿಕಾರ ಸಾಧಿಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ಪತ್ರಿಕಾ ಸ್ವಾತಂತ್ರ್ಯದ ಹರಣವಾಗುವ ಸಾಧ್ಯತೆ ಇದೆ” ಎಂದು ಹೇಳಿವೆ.

“ಈ ವಿವಾದಾತ್ಮಕ ಸಂಸತ್ತಿನ ಬೆಳವಣಿಗೆಗಳು 2021ರಲ್ಲಿ ಐಟಿ ನಿಯಮಗಳಿಗೆ ಮಾಡಿದ ತಿದ್ದುಪಡಿಗಳನ್ನು ಅನುಸರಿಸುತ್ತವೆ. ಆ ತಿದ್ದುಪಡಿಗಳು ಸರ್ಕಾರಿ ಇಲಾಖೆಗಳಿಗೆ ಆಕ್ಷೇಪಾರ್ಹವೆಂದು ಕಂಡುಬಂದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಲು ಅಧಿಕಾರ ನೀಡಿದ್ದವು. ಸರ್ಕಾರ ಈಗ ಆ ಅಧಿಕಾರವನ್ನು ಮಾಧ್ಯಮಗಳಿಗೂ ವಿಸ್ತರಿಸಿಕೊಳ್ಳುತ್ತಿದೆ” ಎಂದು ಎನ್‌ಎಜಿ ಮತ್ತು ಡಿಯುಜಿ ಹೇಳಿವೆ.

Advertisements

ಈ ಸುದ್ದಿ ಓದಿದ್ದೀರಾ?: ಸಂಸತ್ ಅಧಿವೇಶನ ಒಂದೂವರೆ ಗಂಟೆ ಭಾಷಣ ಮಾಡಿದರೂ ಮಣಿಪುರದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿ

“ಅಲ್ಲದೆ, ಮಾಹಿತಿ ಹಕ್ಕು ಕಾಯ್ದೆಗೆ (ಆರ್‌ಟಿಐ) ಇತ್ತೀಚಿನ ತಿದ್ದುಪಡಿಗಳು ಸರ್ಕಾರಿ ಮಾಹಿತಿ ಪಡೆಯುವ ನಾಗರಿಕರ ಹಕ್ಕುಗಳನ್ನು ಗಮನಾರ್ಹವಾಗಿ ಮೊಟಕುಗೊಳಿಸಿವೆ. ಈ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯಿದೆಯ ‘ಅವನತಿ’ಯನ್ನು ತೋರಿಸಿವೆ” ಎಂದು ಅವು ಆತಂಕ ವ್ಯಕ್ತಪಡಿಸಿವೆ.

ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು ಮತ್ತು ಪತ್ರಕರ್ತರ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳ ಸವೆತವನ್ನು ಎರಡೂ ಸಂಘಟನೆಗಳು ಒತ್ತಿ ಹೇಳಿವೆ. ಅಲ್ಲದೆ, ಮಾಧ್ಯಮ ಮಂಡಳಿಯ ರಚನೆಗೆ ಆಗ್ರಹಿಸಿವೆ. “ಪ್ರಸ್ತಾವಿತ ಮಂಡಳಿಯು ನೈತಿಕ ವರದಿಗಾರಿಕೆ, ಕೋಮುವಾದದ ವಿರುದ್ಧ ಹೋರಾಟ, ಸುದ್ದಿ ಸುದ್ದಿಗಳು ಹಾಗೂ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುತ್ತದೆ. ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನಗತ್ಯ ಸೆನ್ಸಾರ್ಶಿಪ್‌ಅನ್ನು ತಡೆಯುತ್ತದೆ” ಎಂದು ಹೇಳಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X