- 2016ರಲ್ಲಿಯೂ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿರ್ಬಂಧಿಸಿದ್ದ ಟಿಡಿಬಿ
- ಸಂಘ ದೇವಸ್ಥಾನಗಳನ್ನು ಶಸ್ತ್ರಾಸ್ತ್ರ ಉಗ್ರಾಣಗಳಾಗಿಸುತ್ತಿದೆ ಎಂದು ಕಡಕಂಪಲ್ಲಿ ಆರೋಪ
ಕೇರಳ ರಾಜ್ಯದಲ್ಲಿ ತನ್ನ ಆಡಳಿತಕ್ಕೆ ಒಳಪಡುವ ದೇವಸ್ಥಾನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಚಟುವಟಿಕೆ ನಿಷೇಧಿಸುವಂತೆ ತಿರುವಾಂಕೂರು ದೇವಸ್ಥಾನ ಮಂಡಳಿ (ಟಿಡಿಬಿ) ಅಧಿಕಾರಿಗಳಿಗೆ ಭಾನುವಾರ (ಮೇ 20) ಹೇಳಿದೆ.
ದೇವಸ್ಥಾನಗಳಲ್ಲಿ ಆರ್ಎಸ್ಎಸ್ ತನ್ನ ಯಾವುದೇ ಚಟುವಟಿಕೆ ಅಥವಾ ತರಬೇತಿಗಳನ್ನು ನಡೆಸಲು ಅನುಮತಿಸಬಾರದರು ಎಂದು ಈ ಹಿಂದೆ ಆದೇಶ ಹೊರಡಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಟಿಡಿಬಿ ಹೊಸ ಸುತ್ತೋಲೆ ಹೊರಡಿಸಿದೆ.
“ಸಂಘವು ತನ್ನ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ದೇವಸ್ಥಾನದ ಜಾಗ ಬಳಸಿಕೊಳ್ಳುವುದರ ಮೇಲೆ ನಿರ್ಬಂಧ ಹೇರುವಂತೆ 2021ರಲ್ಲಿ ಆದೇಶಿಸಲಾಗಿದೆ. ಆದರೆ, ಅದು ಕಟ್ಟುನಿಟ್ಟಾಗಿ ಜಾರಿ ಬಂದಿಲ್ಲ. ಆದ್ದರಿಂದ ಆದೇಶ ಪಾಲನೆಯತ್ತ ಗಮನಹರಿಸಬೇಕು” ಎಂದು ಸುತ್ತೋಲೆ ತಿಳಿಸಿದೆ.
ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ಜಪಾನ್ಗೆ ಹೋದಾಗಲೆಲ್ಲ ಭಾರತದಲ್ಲಿ ನೋಟು ನಿಷೇಧ: ಖರ್ಗೆ ಆರೋಪ
ದೇವಸ್ಥಾನದ ಆವರಣದಲ್ಲಿ ಆರ್ಎಸ್ಎಸ್ ನಡೆಸುವ ಶಸ್ತ್ರಾಸ್ತ್ರ ತರಬೇತಿ, ಇತರ ಚಟುವಟಿಕೆಗಳನ್ನು ನಿರ್ಬಂಧಿಸಿ ಟಿಡಿಬಿ 2016ರಲ್ಲಿಯೂ ಸುತ್ತೋಲೆ ಹೊರಡಿಸಿತ್ತು.