ಆರ್‌ಎಸ್‌ಎಸ್‌ನಷ್ಟು ‘ಭ್ರಷ್ಟರು’ ಯಾರೂ ಇಲ್ಲ – ಅಡ್ವಾಣಿಯನ್ನೇ ಹೊಡೆದ್ರು: ಬಿಜೆಪಿ ಶಾಸಕ ಸುರೇಶ್‌ ಗೌಡ ವಿಡಿಯೋ ವೈರಲ್

Date:

Advertisements

ಆರ್‌ಎಸ್‌ಎಸ್‌ನಷ್ಟು ಭ್ರಷ್ಟರು ಯಾರೂ ಇಲ್ಲ. ಸುಮ್ಮನೆ ದೇಶಪ್ರೇಮ ಅಂತ ಹೇಳ್ತಾರೆ. ಅವರು ಅಷ್ಟೇ ಭ್ರಷ್ಟರು ಕೂಡ. ಅಂತ ಅಡ್ವಾಣಿಯನ್ನೇ ಹೊಡೆದು, ಕೆಳಗೆ ಹಾಕಿದ್ರು ಎಂದು ಬಿಜೆಪಿ ಶಾಸಕ ಸುರೇಶ್‌ ಗೌಡ ಹೇಳಿದ್ದ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್‌ ಕುರಿತು ಚರ್ಚೆ ಆಗುವಂತೆ ಮಾಡಿದೆ.

ಈ ಹಿಂದೆ, ಗೌಪ್ಯ ಸಭೆಯೊಂದರಲ್ಲಿ ಸುರೇಶ್‌ ಗೌಡ ಮಾತನಾಡಿದ್ದರು. ಅವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದನ್ನು ಸಭೆಯಲ್ಲಿದ್ದವರೇ ವಿಡಿಯೋ ಮಾಡಿ, ಹರಿಬಿಟ್ಟಿದ್ದರು. ಆ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ವಿಡಿಯೋದಲ್ಲಿ, “ಯಡಿಯೂರಪ್ಪಗೆ ಹೈಕಮಾಂಡ್‌ ಹೊಡೆದಿದ್ದು ಯಾಕೆ? ಬಲಿಷ್ಟ ಆದ ತಕ್ಷಣ ಹೈಕಮಾಂಡ್‌ಗೆ ಗೌರವ ಕೊಡಲಿಲ್ಲ ಅಂದ್ರೆ ಯಾರು ಅಂತನೂ ನೋಡದೆ ಹೊಡೆದು ಕಳೆಗೆ ಹಾಕ್ತಾರೆ. ಅಂತ ಅಡ್ವಾಣಿಗೆ ಹೊಡೆದರು ಆರ್‌ಎಸ್‌ಎಸ್‌ನವರು. ಇದು ಕಾಮನ್ ಫೆನಾಮಿನ, ಸಂಘಟನೆಯಲ್ಲಿ ಯಾವಾಗ ಒಬ್ಬ ನಾನು ಅಂತ ಮುಂದೆ ಹೋಗ್ತಾನೆ, ಅವನನ್ನು ಹೊಡೆದು ಕೆಳಗೆ ಹಾಕ್ತಾರೆ. ನಾನು ಅಂತ ಅನ್ನೋಕೆ ಯಾವಾಗಲೂ ಬಿಡಲ್ಲ” ಎಂದು ಸುರೇಶ್‌ ಗೌಡ ಹೇಳಿದ್ದಾರೆ.

Advertisements

“ಆರ್‌ಎಸ್‌ಎಸ್‌ನಷ್ಟು ಕರಪ್ಟು (ಭ್ರಷ್ಟರು) ಯಾರೂ ಇಲ್ಲ. ಸುಮ್ನೆ ಹೇಳ್ತಾರೆ ದೇಶಪ್ರೇಮ ಅಂತ. ಅವರು ಅಷ್ಟೇ ಭ್ರಷ್ಟರು. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ನವರು ನಂಬರ್‌ಗಳನ್ನೇ ತೆಗಿರೀ. ಬೇಕಿದ್ರೆ ಯಡಿಯೂರಪ್ಪನೇ ಹೆಸರುಗಳ ಪಟ್ಟಿ ಕೊಡ್ತಾರೆ. ಜಮೀನ್ ಯಾರಿಗೆ ಎಷ್ಟ್‌ ಕೊಟ್ಟೆ, ಹೊಸದಿಗಂತಕ್ಕೆ ಎಷ್ಟ್‌ ಕೊಟ್ಟೆ ಅಂತ ಯಡಿಯೂರಪ್ಪ ಹೇಳ್ತಾರೆ. ಹೊಸದಿಗಂತಕ್ಕೆ ಯಡಿಯೂರಪ್ಪ 5 ಕೋಟಿ ರೂ. ಕೊಟ್ಟಿದ್ದಾರೆ” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, “ಬಿಜೆಪಿ ಶಾಸಕ ಸುರೇಶ ಗೌಡರು ಆರ್ ಎಸ್ ಎಸ್ ನ ಗುಪ್ತಸೂಚಿಗಳ ಬಗ್ಗೆ ಬಾಯ್ತಪ್ಪಿ ಆಡಿದ ಮಾತುಗಳಲ್ಲ, ಬಾಯ್ತೆರೆದು ಮಾತಾಡಿದ್ದಾರೆ. ಸಂಘ ಪರಿವಾರದ ಕರ್ಮಕಾಂಡದ ಯಶೋಗಾಥೆಯ ಬಗ್ಗೆ ಬಿಜೆಪಿ ಶಾಸಕ ಸುರೇಶ ಗೌಡ ಒಂದೊಂದು ಆಣಿಮುತ್ತುಗಳನ್ನು ಉದುರಿಸಿದ್ದಾರೆ. ಶೂದ್ರರು,ಹಿಂದುಳಿದವರು,ಶೋಷಿತ ಸಮುದಾಯದ ಬಿಜೆಪಿ ಪಕ್ಷದ್ದೇ ರಾಜಕೀಯ ನಾಯಕರನ್ನು ಬುಡಮೇಲು ಮಾಡಿದ ಕುತಂತ್ರಗಾರಿಕೆಯ ಪರಂಪರೆಯನ್ನು ಹಾಡಿ ಹೊಗಳಿದ್ದಾರೆ. ಇಡೀ ಜಗತ್ತಿನಲ್ಲೇ ಶ್ರೀಮಂತ ಸಂಘವಾಗಲು  ಆರ್ ಎಸ್ ಎಸ್ ತಾನು ಮಾಡುವ ಭ್ರಷ್ಟಾಚಾರಗಳಿಗೆ ಎಲ್ಲೇ ಇಲ್ಲ. ಬಿಜೆಪಿ ಪಕ್ಷದ ನಾಯಕರೇ ಸಂಘ ಪರಿವಾರದ ಅಸಲಿ ಮುಖವಾಡಗಳನ್ನು ಬಿಚ್ಚಿಡಬೇಕು. ಸತ್ಯ ಕಹಿ ಆಗಿರುತ್ತೆ, ಸ್ವಲ್ಪ ಅರಗಿಸಿಕೊಳ್ಳಬೇಕು” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X