ಐಪಿಎಲ್ 18ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಸೋತ ನಂತರ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಅವರು ಮೈದಾನದಲ್ಲಿ ಕಾಣಿಸಿಕೊಂಡು ತಂಡದ ಮಾಲೀಕ ರಿಷಬ್ ಪಂತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲುತ್ತಿದ್ದಂತೆ ಮೈದಾನಕ್ಕೆ ಆಗಮಿಸಿದ್ದ ಸಂಜೀವ್ ಗೊಯೆಂಕಾ ಅವರು ರಿಷಭ್ ಪಂತ್ ಅವರೊಂದಿಗೆ ಚರ್ಚಿಸುತ್ತಿರುವುದು ಕಂಡು ಬಂದಿತ್ತು. ಇದೀಗ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಗೊಯೆಂಕಾ ನಾಯಕನಿಗೆ ತರಾಟೆ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿದೆ.
ಈ ಬಾರಿ ರಿಷಭ್ ಪಂತ್ ಅವರೊಂದಿಗೆ ತುಸು ಗಂಭೀರವಾಗಿ ಚರ್ಚಿಸುವಂತೆ ಕಂಡು ಬಂದಿದ್ದು, ಅಲ್ಲರೆ ಬೆರಳು ತೋರಿಸುವ ಮೂಲಕ ಖಡಕ್ ಸೂಚನೆ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಂದರೆ ತವರು ಮೈದಾನದಲ್ಲಿ ಎಲ್ಎಸ್ಜಿ ತಂಡವು ಎರಡು ಪಂದ್ಯಗಳನ್ನು ಸೋತಿರುವುದನ್ನು ಸಂಜೀವ್ ಗೊಯೆಂಕಾ ಗಂಭೀರವಾಗಿ ಪರಿಗಣಿಸಿರುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಅಂದು ಪುಟ್ಟ ಹುಡುಗ; ಇಂದು ಗುರುವನ್ನೇ ಮೀರಿಸಿದ ಶಿಷ್ಯ
ಸಂಜೀವ್ ಗೊಯೆಂಕಾ ಹಾಗೂ ರಿಷಭ್ ಪಂತ್ ಅವರ ನಡುವಣ ಈ ಬಿಸಿ ಚರ್ಚೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಕೆ ಎಲ್ ರಾಹುಲ್ಗೆ ಆದ ಪರಿಸ್ಥಿತಿಯೇ ಪಂತ್ಗೂ ಬಂದು ಬರಲಿದೆಯೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಮುಂದಿನ ಪಂದ್ಯಗಳ ಫಲಿತಾಂಶಗಳಿಂದಲೇ ಸ್ಪಷ್ಟ ಉತ್ತರವಂತು ಸಿಗಲಿದೆ.
ಐಪಿಎಲ್ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡವು ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬಳಿಕ ಸಂಜೀವ್ ಗೊಯೆಂಕಾ ಎಲ್ಎಸ್ಜಿ ತಂಡದ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಕಾರಣದಿಂದಾಗಿ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದರು. ಇದೀಗ ಅವರ ಸ್ಥಾನದಲ್ಲಿ ರಿಷಭ್ ಪಂತ್ ಇದ್ದಾರೆ.
ಮಗಾ ಹರಾಜಿನಲ್ಲಿ ಲಖನೌ ತಂಡ ರಿಷಭ್ ಪಂತ್ ಅವರನ್ನು ದಾಖಲೆಯ 27 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಅಲ್ಲದೆ, ಅವರನ್ನು ನಾಯಕನನ್ನಾಗಿ ನೇಮಿಸಿದೆ. ಆದಾಗ್ಯೂ ಮೊದಲ ಪಂದ್ಯದಲ್ಲಿ ಪಂತ್ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಮಾಡುವಾಗ ಅವರು ಶೂನ್ಯಕ್ಕೆ ಔಟ್ ಆದರು ಅಲ್ಲದೆ, ವಿಕೆಟ್ ಕೀಪರ್ ಆಗಿ, ಕೊನೆಯ ಓವರ್ನಲ್ಲಿ ಮೋಹಿತ್ ಶರ್ಮ ಅವರನ್ನು ಸ್ಟಂಪ್ ಮಾಡುವ ಅವಕಾಶವನ್ನು ಕಳೆದುಕೊಂಡರು. ಪಂತ್ ಮೋಹಿತ್ ಅವರನ್ನು ಸ್ಟಂಪ್ ಮಾಡಿದ್ದರೆ, ಲಖನೌ ಗೆಲ್ಲುತ್ತಿತ್ತು. ಏಕೆಂದರೆ ಅದು ದೆಹಲಿ ತಂಡದ ಕೊನೆಯ ವಿಕೆಟ್ ಆಗಿತ್ತು. ಈಗ ತಂಡ 2ನೇ ಸೋಲು ಅನುಭವಿಸಿದೆ.