ವೇಗಿ ಬೌಲರ್ ಭುವನೇಶ್ವರ್ ಕುಮಾರ್ ಅವರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ (ಎಸ್ಆರ್ಎಚ್) ತಂಡವನ್ನು ತೊರೆದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಸೇರಿಕೊಂಡಿದ್ದಾರೆ. 11 ವರ್ಷಗಳ ಕಾಲ ಎಸ್ಆರ್ಎಚ್ ತಂಡದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಅವರು ತಂಡ ತೊರೆದ ಬಳಿಕ ಎಸ್ಆರ್ಎಚ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
2011ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಆಡಿದ್ದ ಭುವನೇಶ್ವರ್ ಈವರೆಗೆ ಬರೋಬ್ಬರಿ 176 ಪಂದ್ಯಗಳಲ್ಲಿ ಬೌಲ್ ಮಾಡಿದ್ದಾರೆ. 181 ವಿಕೆಟ್ಗಳನ್ನು ಪಡೆದಿದ್ದಾರೆ. 2024ರ ಐಪಿಎಲ್ನಲ್ಲಿ ಎಸ್ಆರ್ಎಚ್ ತಂಡದಲ್ಲಿ ಆಡಿದ್ದ ಅವರು 16 ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದಿದ್ದರು.
ಆರ್ಸಿಬಿ ಸೇರಿದ ಬಳಿಕ ಭಾವನಾತ್ಮಕ ಪತ್ರ ಬರೆದಿದ್ದು, “SRH ಜೊತೆಗಿನ 11 ವರ್ಷಗಳ ನಂಬಲಾಗದ ಪಯಣದ ನಂತರ, ನಾನು ಈ ತಂಡಕ್ಕೆ ವಿದಾಯ ಹೇಳುತ್ತಿದ್ದೇನೆ. ಹಲವಾರು ಮರೆಯಲಾಗದ ಮತ್ತು ಅನುಸರಿಸಬೇಕಾದ ನೆನಪುಗಳನ್ನು ನನ್ನಲ್ಲಿವೆ. ಅದ್ಭುತ ವಿಜಯಗಳು, ಟ್ರೋಫಿ ಗೆಲುವು, ಎರಡು ಬಾರಿ ನೇರಳೆ ಕ್ಯಾಪ್ ಪಡೆದದ್ದು, ಇನ್ನೂ ಹಲವಾರು ನೆನಪುಗಳಿವೆ. ಎಲ್ಲಕ್ಕಿಂತ ಮಿಗಿಲಾದ ವಿಷಯವೆಂದರೆ ಅಭಿಮಾನಿಗಳ ಪ್ರೀತಿ. ನಾನು ಇಂದು ನನ್ನೊಂದಿಗೆ ಈ ಪ್ರೀತಿ ಮತ್ತು ಬೆಂಬಲವನ್ನು ಹೊತ್ತೊಯ್ಯುತ್ತಿದ್ದೇನೆ. ನಿಮ್ಮ ಬೆಂಬಲ ನಿರಂತರ ಮತ್ತು ಶಾಶ್ವತವಾಗಿರಲಿ” ಎಂದು ಹೇಳಿದ್ದಾರೆ.
After 11 incredible years with SRH, I say goodbye to this team.
— Bhuvneshwar Kumar (@BhuviOfficial) November 28, 2024
I have so many unforgettable and cherishable memories.
One thing unmissable is the love of the fans which has been splendid! Your support has been constant.
I will carry this love and support with me forever 🧡 pic.twitter.com/SywIykloHp
ಇತ್ತೀಚೆಗೆ ನಡೆದ ಐಪಿಎಲ್ ಬಿಡ್ನಲ್ಲಿ ಭುವನೇಶ್ವರ್ ಕುಮಾರ್ ಅವರ ಹರಾಜು ಪ್ರಕ್ರಿಯೆ 2 ಕೋಟಿ ರೂ.ಗಳೊಂದಿಗೆ ಆರಂಭವಾಯಿತು. ಎಲ್ಎಸ್ಜಿ ಮತ್ತು ಮುಂಬೈ ಪ್ರಾಂಚೈಸಿಗಳು ಬಿಡ್ಡಿಂಗ್ಗಾಗಿ ಹಣಾಹಣಿ ನಡೆಸಿದವು. ಬಿಡ್ಅನ್ನು ಎಲ್ಎಸ್ಜಿ 10 ಕೋಟಿ ರೂ.ಗೆ ಹೆಚ್ಚಿಸಿತು. ಬಳಿಕ, ಮುಂಬೈ ಪ್ರಾಂಚೈಸಿ ಹಿಂದೆ ಸರಿಯಿತು. ಬಳಿಕ, ಆರ್ಸಿಬಿ 10.75 ಕೋಟಿ ರೂ.ಗಳ ಬಿಡ್ ಮಾಡಿ, ಭುವನೇಶ್ವರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.