ಕ್ರಿಕೆಟಿಗ ಟ್ರಾವಿಸ್ ಹೆಡ್‌ ಬಳಸಿ ಆರ್‌ಸಿಬಿ ಬಗ್ಗೆ ಅವಹೇಳನ; ಊಬರ್‌ ಮೋಟೋ ವಿರುದ್ಧ ಪ್ರಕರಣ ದಾಖಲು

Date:

Advertisements

ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ರಿಕೆಟಿಗ ಟ್ರಾವಿಸ್ ಹೆಡ್‌ ಅವರನ್ನು ಬಳಸಿಕೊಂಡು ಆರ್‌ಸಿಬಿ ವಿರುದ್ಧ ಯೂಟ್ಯೂಬ್ ಜಾಹೀರಾತನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂದು ಸಾರ್ವಜನಿಕ ಸಾರಿಗೆ ಸೇವೆಗಳ ಆಪ್‌ ‘ಊಬರ್ ಮೋಟೋ’ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.

ಎರಡೂ ಕಡೆಯ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನಂತರ, ಮಧ್ಯಂತರ ತಡೆಯಾಜ್ಞೆ ಕೋರಿ ಆರ್‌ಸಿಬಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಕಾಯ್ದಿರಿಸಿದರು.

‘ಬ್ಯಾಡೀಸ್ ಇನ್ ಬೆಂಗಳೂರು – ಟ್ರಾವಿಸ್ ಹೆಡ್” ಎಂಬ ಶೀರ್ಷಿಕೆಯ ಮೂಲಕ ಊಬರ್ ಮೋಟೋದ ಯೂಟ್ಯೂಬ್ ಜಾಹೀರಾತಿನ ವಿರುದ್ಧ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಈ ಮೊಕದ್ದಮೆ ಹೂಡಿದೆ. 0.59 ಸೆಕೆಂಡುಗಳ ಈ ವಿಡಿಯೋ ಪ್ರಸ್ತುತ 13 ಲಕ್ಷ ವೀಕ್ಷಣೆಗಳನ್ನು ಕಂಡಿದೆ.

Advertisements

ಆರ್‌ಸಿಬಿ ಪರ ಹಾಜರಾದ ವಕೀಲೆ ಶ್ವೇತಶ್ರೀ ಮಜುಂದಾರ್, ಜಾಹೀರಾತಿನ ವಿವರಣೆಯ ಬಗ್ಗೆ ಊಬರ್‌ ಮೋಟೋ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದರು, ವಿಡಿಯೊದಲ್ಲಿ ಪಾತ್ರ ಮಾಡಿರುವ ಟ್ರಾವಿಸ್ ಹೆಡ್ ಅವರು ಆರ್‌ಸಿಬಿಯ ಟ್ರೇಡ್‌ಮಾರ್ಕ್ ಅನ್ನು ಅವಹೇಳನ ಮಾಡುತ್ತಾರೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು.

ಈ ಸುದ್ದಿ ಓದಿದ್ದೀರಾ? ಸ್ಟೇಡಿಯಂನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರ ಮೇಲೆ ದಾಳಿ

ವಿಡಿಯೋದಲ್ಲಿ, “ಬೆಂಗಳೂರು vs ಹೈದರಾಬಾದ್” ಎಂಬ ಫಲಕವನ್ನು ನಾಶಗೊಳಿಸುವ ಉದ್ದೇಶದಿಂದ ಹೆಡ್ ಅವರು ಬೆಂಗಳೂರು ಕ್ರಿಕೆಟ್ ಕ್ರೀಡಾಂಗಣದ ಕಡೆಗೆ ಓಡುತ್ತಿರುವುದು ಕಂಡುಬಂದಿದೆ. ಸ್ಪ್ರೇ ಪೇಂಟ್ ತೆಗೆದುಕೊಂಡು “ಬೆಂಗಳೂರು” ಬದಲಿಗೆ “ರಾಯಲಿ ಚಾಲೆಂಜಡ್” ಬೆಂಗಳೂರು ಎಂದು ಬರೆದಿದ್ದಾರೆ, ಇದು ಆರ್‌ಸಿಬಿಯ ಚಿಹ್ನೆಯನ್ನು ಅವಹೇಳನ ಮಾಡುತ್ತದೆ ಎಂದು ಅವರು ಹೇಳಿದರು.

ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ವಾಣಿಜ್ಯ ಪ್ರಾಯೋಜಕರಾಗಿರುವ ಊಬರ್ ಮೋಟೋ, ತನ್ನ ಉತ್ಪನ್ನವನ್ನು (ಬೈಕ್ ಬುಕಿಂಗ್) ಪ್ರಚಾರ ಮಾಡುವಾಗ, ಆರ್‌ಸಿಬಿಯ ಟ್ರೇಡ್‌ಮಾರ್ಕ್ ಅನ್ನು ಬಳಸಿಕೊಂಡು ಕೆಟ್ಟದಾಗಿ ಬಿಂಬಿಸಿದೆ. ಇದನ್ನು ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಜಾಹೀರಾತು ಮಾಡಲು ನಿಮಗೆ ಲಕ್ಷಾಂತರ ಸೃಜನಶೀಲ ಮಾರ್ಗಗಳಿದ್ದವು. ನನ್ನ ಕಕ್ಷೀದಾರರ ಟ್ರೇಡ್‌ಮಾರ್ಕ್ ಬಳಸಿ ನೀವು ಕೆಟ್ಟದಾಗಿ ಮಾಡಬೇಕಿತ್ತೇ? ಎಂದು ಕೋರ್ಟ್‌ಗೆ ಈ ಸಂದರ್ಭದಲ್ಲಿ ಶ್ವೇತಶ್ರೀ ಮಜುಂದಾರ್ ಅವರು ತಿಳಿಸಿದರು.

ಊಬರ್ ಮೋಟೋ ಪರ ಹಾಜರಾದ ವಕೀಲರು, ಈ ಮೊಕದ್ದಮೆಯಲ್ಲಿ ಮೂಲಭೂತ ಸಮಸ್ಯೆ ಇದೆ. ಆರ್‌ಸಿಬಿಯನ್ನು ಯಾವುದೇ ರೀತಿ ನಮ್ಮ ಕಕ್ಷೀದಾರರು ಅವಹೇಳನ ಮಾಡಿಲ್ಲ. ಮೇ 13 ರಂದು ಬೆಂಗಳೂರು ಕ್ರಿಕೆಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದ್ದು, ಇದು ಸಂಚಾರಿ ದಟ್ಟಣೆ ನಗರವಾಗಿರುವುದರಿಂದ ಸಾರ್ವಜನಿಕರು ಊಬರ್ ಮೋಟೋ ಬಳಸಬೇಕು ಎಂಬುದು ಜಾಹೀರಾತಿನ ಸಾಮಾನ್ಯ ಸಂದೇಶವಾಗಿದೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X