1 ಎಸೆತದಲ್ಲಿ 18 ರನ್‌ ಬಿಟ್ಟುಕೊಟ್ಟು ವಿಶ್ವ ದಾಖಲೆ ಬರೆದ ತಮಿಳುನಾಡು ಬೌಲರ್‌!

Date:

Advertisements

ಟಿ20 ಕ್ರಿಕೆಟ್‌ ಯಾವಾಗಲೂ ಬೌಲರ್‌ಗಳಿಗೆ ದುಸ್ವಪ್ನ, ಬ್ಯಾಟರ್‌ಗಳಿಗೆ ಹಬ್ಬ. ಚುಟುಕು ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಲು ಅಂತಿಮ ಎಸೆತದವರೆಗೂ ಕಾಯಬೇಕು ಎಂಬುದು ಬಹಳಷ್ಟು ಬಾರಿ ನಿರೂಪಿತವಾಗಿದೆ. ಇದೀಗ, ತಮಿಳುನಾಡಿನಲ್ಲಿ ನಡೆದ ಟಿ20 ಪಂದ್ಯವೊಂದು ʻದುಬಾರಿ ಕೊನೆಯ ಎಸೆತʼದಲ್ಲಿ ʻವಿಶ್ವ ದಾಖಲೆʼ ಬರೆದಿದೆ. ಬೌಲರ್‌ ಓರ್ವ ಒಂದೇ ಎಸೆತದಲ್ಲಿ ಬರೋಬ್ಬರಿ 18 ರನ್‌ ಬಿಟ್ಟುಕೊಡುವ ಮೂಲಕ ಅಪರೂಪದ ʻಅನಗತ್ಯ ದಾಖಲೆʼ ಬರೆದಿದ್ಧಾನೆ.

ಎದುರಾಳಿ ತಂಡಕ್ಕೆ ವಿಶ್ವ ದಾಖಲೆಯ ರನ್‌ ಬಿಟ್ಟುಕೊಟ್ಟ ಬೌಲರ್‌ ಹೆಸರು ಅಭಿಷೇಕ್‌ ತನ್ವಾರ್.‌ ವೇದಿಕೆಯಾಗಿದ್ದು ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎನ್‌ಪಿಎಲ್‌).

ಟಿಎನ್‌ಪಿಎಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ ಪಂದ್ಯ ಇದೀಗ ಕ್ರಿಕೆಟ್‌ ವಲಯದಲ್ಲಿ ಚರ್ಚೆಯಲ್ಲಿದೆ.

Advertisements

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಚೆಪಾಕ್ ಸೂಪರ್ ಗಿಲ್ಲಿಸ್, 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 191 ರನ್‌ ಗಳಿಸಿತ್ತು. ಸೇಲಂ ಸ್ಪಾರ್ಟನ್ಸ್  ಪರವಾಗಿ ಅಂತಿಮ ಓವರ್‌ ಎಸೆಯಲು ಬಂದ ತಂಡದ ನಾಯಕ ಅಭಿಷೇಕ್‌ ತನ್ವಾರ್, ಮೊದಲ 5 ಎಸೆತಗಳಲ್ಲಿ 8 ರನ್‌ ಬಿಟ್ಟುಕೊಟ್ಟಿದ್ದರು. ಆದರೆ ನಂತರದ ಒಂದು ಎಸೆತದಲ್ಲಿ ಅವರು ಬರೋಬ್ಬರಿ 18 ರನ್‌ ಬಿಟ್ಟುಕೊಡುವ ಮೂಲಕ ಮುಜುಗರ ಅನುಭವಿಸಿದರು.

ಅಂತಿಮ ಎಸೆತದಲ್ಲಿ ಅಭಿಷೇಕ್‌ ಕ್ರಮವಾಗಿ, 1(ನೋಬಾಲ್‌), 7(ನೋಬಾಲ್‌), 3(ನೋಬಾಲ್‌), 1(ವೈಡ್), ಹಾಗೂ ಕೊನೆಯದಾಗಿ ಸಿಕ್ಸರ್‌ ಹೊಡೆಸಿಕೊಳ್ಳುವುದರೊಂದಿಗೆ ಒಟ್ಟು 26 ರನ್‌ ಬಿಟ್ಟುಕೊಟ್ಟು ಓವರ್‌ ಮುಗಿಸಿದರು. ಪಂದ್ಯದಲ್ಲಿ ಒಟ್ಟು 4 ಓವರ್‌ ಎಸೆದ ಅಭಿಷೇಕ್‌ 44 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದರು.

ಈ ಸುದ್ದಿ ಓದಿದ್ದೀರಾ?: ದ್ವಿಪಕ್ಷೀಯ ಸರಣಿಗಳಲ್ಲಷ್ಟೇ ಭಾರತದ ಅಬ್ಬರ; ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿ ಬರ!

52 ರನ್‌ಗಳ ಅಂತರದಿಂದ ಗೆದ್ದ ಚೆಪಾಕ್‌

ಚೆಪಾಕ್ ಸೂಪರ್ ಗಿಲ್ಲಿಸ್ ಒಡ್ಡಿದ್ದ 218 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟುವ ವೇಳೆ ಸೇಲಂ ಸ್ಪಾರ್ಟನ್ಸ್‌, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟದಲ್ಲಿ 169 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 52 ರನ್‌ಗಳ ಅಂತರದಲ್ಲಿ ಚೆಪಾಕ್‌ ತಂಡಕ್ಕೆ ಶರಣಾಯಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X