ಜಿಜ್ಞಾಸೆ | ರಿಷಬ್ ಪಂತ್‌ಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ, ಸರ್ಕಾರಗಳ ಆದ್ಯತೆಗಳೇನು?

Date:

Advertisements
ಕ್ರಿಕೆಟಿಗ ರಿಷಬ್ ಪಂತ್ ಅಪಘಾತಕ್ಕೀಡಾಗಿ, ಅಷ್ಟೇ ವೇಗವಾಗಿ ಚೇತರಿಸಿಕೊಂಡು, ಮತ್ತೆ ಆಟವಾಡುತ್ತಿದ್ದಾರೆ. ಈತನಿಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ? ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರವೂ ಸುಸಜ್ಜಿತ ಆಸ್ಪತ್ರೆಯನ್ನು ತಾಲೂಕ್ ಮಟ್ಟದಲ್ಲೇಕೆ ನಾವು ಕಟ್ಟಲಾಗಿಲ್ಲ? ಉತ್ತಮ ಶಾಲೆ, ಅತ್ಯಾಧುನಿಕ ಆಸ್ಪತ್ರೆಗಳಿಲ್ಲದ ಜನ ಅವುಗಳಿಗಾಗಿ ಬೇಡಿಕೆಯಿಡದೆ ಮಂದಿರ ಮಸೀದಿ ಚರ್ಚ್ ಕಟ್ಟಲು ಮುಂದಾಗುತ್ತಾರೆ ಏಕೆ?

ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಭಾರತ ಜಯಗಳಿಸಿತು. ಅತ್ಯಂತ ಕಡಿಮೆ ರನ್ನುಗಳನ್ನು ಹೊಡೆದರೂ ಭಾರತ ಗೆಲುವು ಸಾಧಿಸಿತು. ಪಂದ್ಯದಲ್ಲಿ ರಿಷಬ್ ಪಂಥ್ ಅದ್ಭುತವಾಗಿ ಕೀಪಿಂಗ್ ಮಾಡಿದರು. ಅದೃಷ್ಟ ಅವರ ಪರವಾಗಿದ್ದ ಕಾರಣ ಬ್ಯಾಟಿಂಗಿನಲ್ಲೂ ಅವರು ಮಿಂಚಿದರು.

ಪಂದ್ಯದ ನಂತರ ರವಿಶಾಸ್ತ್ರಿ ರಿಷಬ್ ಅವರಿಗೆ ಪದಕ ನೀಡಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಮಾರಣಾಂತಿಕ ಅಪಘಾತದ ನಂತರ ರಿಷಬ್ ಕ್ರೀಡಾ ಬದುಕು ಮುಗಿದೇ ಹೋಯಿತು ಎನ್ನುವಷ್ಟು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಸತತ ಶ್ರಮ, ದೃಢತೆಯಿಂದ ಅಚ್ಚರಿಯ ಚೇತರಿಕೆ ಕಂಡರು. ಕ್ರೀಡಾಂಗಣಕ್ಕೆ ಮರಳಿ, ಭಾರತ ತಂಡಕ್ಕೂ ಆಯ್ಕೆಯಾದರು. ಇಂದೊಂದು ಅದ್ಭುತ ಸಾಧನೆ ಎರಡು ಮಾತಿಲ್ಲ.

ಆದರೆ ಈ ಘಟನೆಯ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳೋಣ. ರಸ್ತೆಯ ವಿಭಜಕಕ್ಕೆ ಪಂಥ್ ಕಾರು ಡಿಕ್ಕಿ ಹೊಡೆದಾಗ ಬೆಂಝ್ ಕಾರಿನಲ್ಲಿದ್ದರು. ಕಾರು ವಿಭಜಕಕ್ಕೆ ಗುದ್ದಿದ ರಭಸಕ್ಕೆ ರಿಷಬ್ ಬದುಕುಳಿದಿದ್ದೇ ಹೆಚ್ಚು. ಬಹುಶಃ ದುಬಾರಿ ಬೆಂಝ್ ಕಾರು ಅವರ ಜೀವ ಉಳಿಸಿತ್ತು ಎಂದರೆ ತಪ್ಪಾಗಲಾರದು. ಭಾರತದ ಜನಸಾಮಾನ್ಯರು ಓಡಿಸುವ ಕಾರು ಅದಾಗಿದ್ದಾರೆ ಪ್ರಾಣ ತಕ್ಷಣ ಹಾರಿ ಹೋಗಿರುತಿತ್ತು.

Advertisements

ಭಾರತದಲ್ಲಿ ಅಪಘಾತವಾದವರಿಗೆ rehabilitation – ಪುನಸ್ಚೈತನ್ಯ ಕಾರ್ಯಕ್ರಮ ಅನ್ನೋದು ಒಂದು ಮರೀಚಿಕೆ. ಅಪಘಾತವಾದವರು ಆಘಾತಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಭಾರತದಲ್ಲಿ ಡಿಸಬಿಲಿಟಿ ಬಗ್ಗೆ ಇರುವ stigma ಬಗ್ಗೆ ಅರಿಯಬೇಕಾದರೆ ಪ್ರೀತಿ ಶ್ರೀನಿವಾಸನ್ ಅವರು ನೀಡಿರುವ – Desigmatising Disability ಎಂಬ ಟೆಡ್ ಟಾಕ್ ಒಮ್ಮೆ ಕೇಳಿ.

ಸರಿಯಾದ ಚಿಕಿತ್ಸೆ ಇಲ್ಲದೆ ಸಾಯುವವರ ಸಂಖ್ಯೆ ಒಂದುಕಡೆಯಾದರೆ, ಬದುಕುಳಿದವರು ವ್ಯಾಕುಲತೆಗೆ ಒಳಗಾಗಿ ಇದ್ದರೂ ಸತ್ತಂತೆ ಜೀವಿಸುವವರ ಸಂಖ್ಯೆ ಇನ್ನೊಂದೆಡೆ. ಇಂದಿಗೂ ಭಾರತದ ಹಳ್ಳಿಗಳಲ್ಲಿ, ಪುಟ್ಟ ಪಟ್ಟಣದಲ್ಲಿ ಅಪಘಾತಕ್ಕೆ ಸಾಮಾನ್ಯ ಜನರು ತುತ್ತಾದರೆ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ. ಆಂಬುಲೆನ್ಸ್ ಸಿಗಲ್ಲ. ಸಿಕ್ಕರೂ ಮಹಾನಗರಗಳಿಗೆ ಬರುವ ಹೊತ್ತಿಗೆ ಗೋಲ್ಡನ್ hour ಕಳೆದು ಹೋಗಿರುತ್ತದೆ! ರಿಷಬ್ ಅದೃಷ್ಟ ಚೆನ್ನಾಗಿತ್ತು ಪ್ರಥಮ ಚಿಕಿತ್ಸೆಯ ನಂತರ ಡೆಹ್ರಾಡೂನಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾದರು. ಬಿಸಿಸಿಐ ಪ್ರತಿಕ್ಷಣ ಅವರನ್ನು ಮಾನಿಟರ್ ಮಾಡಿತು!

ಇದನ್ನು ಓದಿದ್ದೀರಾ?: ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

ಇನ್ನು ರಿಷಬ್ ಅವರ ರಿಹಬಿಲಿಟೇಷನ್ ಹೇಗಿತ್ತು ಅಂತೀರಾ. ಜಗತ್ತಿನ ಶ್ರೇಷ್ಠ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಅವರ ಚೇತರಿಕೆಯ ಹಾದಿ ಸುಗಮವಾಯಿತು. ಬಿಸಿಸಿಐ ನಾಸಾದಿಂದ (anti-gravity) ಗುರುತ್ವಾಕರ್ಷಣೆ ಇಲ್ಲದ ಟ್ರೆಡ್ ಮಿಲ್ ಅನ್ನು ತರಿಸಿಕೊಟ್ಟಿತು. ಅಂತರಿಕ್ಷಯಾನಿಗಳು ವ್ಯಾಯಾಮಕ್ಕೆಂದು ಬಳಸುವ ಯಂತ್ರವದು. ಬಿಸಿಸಿಐ ಯಂತ್ರವೊಂದಕ್ಕೆ 8 ಕೋಟಿ ಖರ್ಚು ಮಾಡಿತು. ಹಗಲು ಇರುಳೆನ್ನದೆ ತಂಡವೊಂದು ರಿಷಬ್ ಪುನಶ್ಚೇತನ ಕಾರ್ಯಕ್ರಮದಲ್ಲಿ ಶ್ರಮಿಸಿತು. ಅವರೆಲ್ಲರ ಶ್ರಮದಿಂದ, ಸರಿಯಾದ ಸಮಯಕ್ಕೆ ಸಿಕ್ಕ ಸಲಹೆ, ದೊರೆತ ಸೌಲಭ್ಯಗಳಿಂದ ರಿಷಬ್ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಿಜವಾಗಿಯೂ ಆತನ ಸಾಧನೆ ಅಪೂರ್ವ. ಅದರಾಚೆಗೆ ಅಪಘಾತಕ್ಕೆ ಸಿಲುಕುವವರಿಗೆಲ್ಲಾ ಇಂತಹ ಅತ್ಯಾಧುನಿಕ ಸೌಲಭ್ಯ ಬಿಡಿ, ಕನಿಷ್ಠ ಪ್ರಾಣ ಉಳಿಸಿಕೊಳ್ಳುವ ಅವಕಾಶವನ್ನಾದರು ನಮ್ಮ ದೇಶದ ಆರೋಗ್ಯ ವ್ಯವಸ್ಥೆ ನೀಡುತ್ತದೆಯೇ? ಅಪಘಾತದಲ್ಲಿ ಬದುಕುಳಿದವರ, ಅಂಗವಿಕಲರಾದವರ ಮನಸ್ಥಿತಿ ಹೇಗಿರುತ್ತದೆ? ಭಾರತದಲ್ಲಿರುವ ಪುನಸ್ಚೈತನ್ಯ ಕಾರ್ಯಕ್ರಮಗಳು ಯಾವುವು? ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರವೂ ಸುಸಜ್ಜಿತ ಆಸ್ಪತ್ರೆಯನ್ನು ತಾಲೂಕ್ ಮಟ್ಟದಲ್ಲೇಕೆ ನಾವು ಕಟ್ಟಲಾಗಿಲ್ಲ? ಉತ್ತಮ ಶಾಲೆ, ಅತ್ಯಾಧುನಿಕ ಆಸ್ಪತ್ರೆಗಳಿಲ್ಲದ ಜನ ಅವುಗಳಿಗಾಗಿ ಬೇಡಿಕೆಯಿಡದೆ ಮಂದಿರ ಮಸೀದಿ ಚರ್ಚ್ ಕಟ್ಟಲು ಮುಂದಾಗುತ್ತಾರೆ ಏಕೆ? Do we care about lives at all???

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

1 COMMENT

  1. ಹೌದು ಆ ಮಟ್ಟದ ವೈದ್ಯಕೀಯ ಸೌಲಭ್ಯ ದೇಶದ ಪ್ರತಿಯೊಬ್ಬ ನಾಗರೀಕನಿಗೂ ದೊರಕುವಂತಾಗಬೇಕು ಆಗ ನಿಜವಾಗಿಯೂ ದೇಶ ಉದ್ದಾರವಾಗೋದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X