ಮೈಸೂರು | ‘ಟ್ರಿಣ್-ಟ್ರಿಣ್’ಗೆ ಹೊಸ ಮಜಲು; ರಸ್ತೆಗಳಿಯಲಿವೆ ಎಲೆಕ್ಟ್ರಿಕ್ ಬೈಸಿಕಲ್

Date:

Advertisements

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಬೈಸಿಕಲ್ ವ್ಯವಸ್ಥೆಯಾದ ‘ಟ್ರಿಣ್-ಟ್ರಿಣ್’ ಯೋಜನೆ ಮತ್ತೊಂದು ಹಂತ ಮೇಲೇರಲಿದೆ. ಈಗಿರುವ ಬೈಸಿಕಲ್‌ಗಳ ಜೊತೆಗೆ ಎಲೆಕ್ಟ್ರಿಕಲ್ ಬೈಸಿಕಲ್‌ಗಳನ್ನೂ ಒದಗಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಮುಂದಾಗಿದೆ. ಶೀಘ್ರದಲ್ಲೇ ಬ್ಯಾಟರಿ ಚಾಲಿತ ಪೆಡಲ್ ಸಹಾಯಕ ಬೈಸಿಕಲ್‌ಗಳ ಪ್ರಯೋಗ ನಗರದಲ್ಲಿ ಆರಂಭವಾಗಲಿದೆ.

2017ರ ಜೂನ್ 4ರಂದು ಟ್ರಿಣ್-ಟ್ರಿಣ್ ಯೋಚನೆಗೆ ಚಾಲನೆ ನೀಡಲಾಗಿತ್ತು. ನಗರದಲ್ಲಿ 430 ಬೈಸಿಕಲ್‌ಗಳಿದ್ದು, ಇದೂವರೆಗೂ 17,000 ಮಂದಿ ಯೋಜನೆಯ ಚಂದಾದಾರರಾಗಿ ಬೈಸಿಕಲ್‌ಗಳನ್ನು ಬಳಸುತ್ತಿದ್ದಾರೆ. ಪ್ರಸ್ತುತ, 52 ಬೈಸಿಕಲ್ ನಿಲ್ದಾಣಗಳಿವೆ.

“ಬ್ಯಾಟರಿ ಚಾಲಿತ ಪೆಡಲ್ ಸಹಾಯಕ ಬೈಸಿಕಲ್‌ಗಳ ಪ್ರಯೋಗವನ್ನು ಮುಂದಿನ ವಾರ ಪ್ರಾರಂಭಿಸಲಾಗುವುದು. ನಾವು ಸುಮಾರು 500 ಬ್ಯಾಟರಿ ಚಾಲಿತ ಬೈಸಿಕಲ್‌ಗಳನ್ನು ಮೊದಲ ಹಂತದಲ್ಲಿಯೇ ರಸ್ತೆಗಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಯಶಸ್ವಿಯನ್ನು ಗಮನದಲ್ಲಿಟ್ಟುಕೊಂಡು 1,000ಕ್ಕೆ ಏರಿಸಲಾಗುತ್ತದೆ” ಎಂದು ಡಿಯುಎಲ್‌ಟಿ ಆಯುಕ್ತೆ ವಿ ಮಂಜುಳಾ ತಿಳಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ?:ಮೈಸೂರು | ತಮ್ಮ ಮೊದಲ ಮತವನ್ನೇ ಮಾರಿಕೊಂಡ ಯುವಜನರು!

“ಆದರೆ, ಮುಂದಿನ ವಾರವೇ ಹೊಸ ಬೈಸಿಕಲ್‌ಗಳು ಸಾರ್ವಜನಿಕರ ಬಳಕೆಗೆ ದೊರೆಯುವುದಿಲ್ಲ. ನಗರದ ಜನರಿಗೆ ಅವುಗಳನ್ನು ಒದಗಿಸುವುದಕ್ಕೂ ಮೊದಲು, ಒಂದು ತಿಂಗಳ ಕಾಲ ಅಧಿಕಾರಿಗಳು ತಮ್ಮದೇ ಆದ ಪರಿಶೀಲನೆ ನಡೆಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X