ಕೆನಡಾದಲ್ಲಿ ಇನ್ನು ಮುಂದೆ ಪ್ರತಿ ಸಿಗರೇಟಿನ ಮೇಲೂ ಹಾನಿ ಎಚ್ಚರಿಕೆ ಸಂದೇಶ

Date:

Advertisements

ಕೆನಡಾ ದೇಶವು 2035 ರ ವೇಳೆಗೆ ರಾಷ್ಟ್ರ ವ್ಯಾಪಿ ತಂಬಾಕು ಸೇವನೆ ಶೇಕಡಾ 5ರಷ್ಟು ತಗ್ಗಿಸಬೇಕು ಎಂಬ ಗುರಿಯ ಹಿನ್ನೆಲೆಯಲ್ಲಿ ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಹಾನಿ ಎಚ್ಚರಿಕೆ ಮುದ್ರಿಸುವ ನಿರ್ಧಾರಕ್ಕೆ ಬಂದಿದೆ. ಈ ಮೂಲಕ ಅರೋಗ್ಯ ಹಾನಿ ಎಚ್ಚರಿಕೆ ಮುದ್ರಿಸಿದ ದೇಶಗಳ ಪೈಕಿ ಕೆನಡಾ ವಿಶ್ವದ ಮೊದಲ ರಾ‍‍‍ಷ್ಟ್ರವಾಗಲಿದೆ.

ಪ್ರತಿ ವರ್ಷ ಮೇ 31ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕೆನಡಾದಲ್ಲಿ ಯುವ ಸಮುದಾಯವೇ ಸಿಗರೇಟಿನ ವ್ಯಸನಕ್ಕೆ ಹೆಚ್ಚು ತುತ್ತಾಗುತ್ತಿದ್ದಾರೆ. ಈ ಕಾರಣದಿಂದ ಸಿಗರೇಟಿನ ಮೇಲೆ ನೇರವಾಗಿ ಆರೋಗ್ಯ ಹಾನಿ ಜಾಗೃತಿ ಮೂಡಿಸುವ ಸಾಲುಗಳನ್ನು ಕೆನಡಾ ದೇಶ ಮೊದಲ ಬಾರಿಗೆ ಮುದ್ರಿಸಿದೆ.

ಹೊಸ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ ಮತ್ತು ಲೇಬಲ್‌ ಮಾಡುವ ನಿಯಮಗಳನ್ನು ಕೆನಡಾ ಸರ್ಕಾರ ಪಾಲಿಸುತ್ತಿದೆ. ಆದಕಾರಣ ಯುವಕರನ್ನು ಮತ್ತು ತಂಬಾಕು ಅಲ್ಲದ ಬಳಕೆದಾರರನ್ನು ನಿಕೋಟಿನ್ ವ್ಯಸನದಿಂದ ದೂರವಿಡಲು ನಿರ್ಧಾರ ಕೈಗೊಂಡಿದೆ. ಯುವಕರಿಗೆ ತಂಬಾಕು ಆಕರ್ಷಣೆ ಆಗದಂತೆ ತಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಕೆನಡಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ

“ತಂಬಾಕು ಸೇವನೆಯಿಂದ ಪ್ರತಿ ವರ್ಷ 48 ಸಾವಿರ ಕೆನಡಿಯನ್ನರು ಮೃತಪಡುತ್ತಿದ್ದಾರೆ. ಇದನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಹಾನಿಕಾರ ಇನ್ನಿತರ ಎಚ್ಚರಿಕೆ ಲೇಬಲ್‌ಗಳು ಮುದ್ರಿಸಲಾಗುವ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ನಿಯಮವು ಧೂಮಪಾನ ಮಾಡುವ ಪ್ರತಿಯೊಬ್ಬರನ್ನು ತಲುಪುತ್ತದೆ. ಇದರಿಂದ ವ್ಯಸನಕ್ಕೆ ಈಡಾಗುವವರನ್ನು ತಡೆಯಲು, ತಂಬಾಕು ಸೇವನೆ ಕಡಿಮೆ ಮಾಡಲು ಸಹಾಯವಾಗುತ್ತದೆ” ಎಂದು ಕೆನಡಿಯನ್ ಕ್ಯಾನ್ಸರ್‌ ಸೊಸೈಟಿಯ ಹಿರಿಯ ನೀತಿ ವಿಶ್ಲೇಷಕರಾದ ರಾಬ್ ಕನ್ನಿಂಗ್ ಹ್ಯಾಮ್ ತಿಳಿಸಿದ್ದಾರೆ.

“ಪ್ರತಿ ದೇಶದಲ್ಲಿ ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿ ಆಯಾ ದೇಶದ ಆರೋಗ್ಯ ಸಚಿವಾಲಯಗಳು ಹೊಂದಿವೆ. ಆದಕಾರಣ ವಿಶ್ವದಲ್ಲಿ ತಂಬಾಕು ಉತ್ಪನ್ನಗಳ ಪ್ಯಾಕೇಟ್‌ಗಳಲ್ಲಿ ಆರೋಗ್ಯ ಸಂದೇಶವನ್ನು ಹೆಚ್ಚಿಸಬೇಕಿದೆ. ಸದ್ಯ ಕೆನಡಾ ದೇಶ ಸಿಗರೇಟ್‌ ಮೇಲೆ ಮುದ್ರಿಸಿರುವ ಎಚ್ಚರಿಕೆ ಸಂದೇಶಗಳು ತಂಬಾಕು ಸೇವನೆ ತಡೆ ಹೆಚ್ಚುವರಿ ಕ್ರಮಗಳಿಗೆ ಪೂರಕವಾಗಿದೆ” ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ವಿವಿಧ ಆರೋಗ್ಯ ಇಲಾಖೆಗಳಲ್ಲೂ ವ್ಯಸನ ತಡೆ ಕ್ರಮ ಪರಿಣಾಮಕಾರಿ ಜಾರಿಗೆ ಸೂಚಿಸಲಾಗಿದೆ. ಅಂತೆಯೇ ಶಾಲಾ-ಕಾಲೇಜು, ಆಸ್ಪತ್ರೆಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಸೇರಿದಂತೆ ಹಲವು ಕ್ರಮ ಜಾರಿಯಲ್ಲಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ | ಮಧುಮೇಹಿಗಳ ಪೈಕಿ ಪ್ರತಿ 10ರಲ್ಲಿ 4 ಮಂದಿಗೆ ಕಾಯಿಲೆಯ ಅರಿವೇ ಇಲ್ಲ: ವರದಿ

ವಿಶ್ವದಲ್ಲಿ ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತವು ಎರಡನೇ...

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ದಾವಣಗೆರೆ | ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸ್ವಾರ್ಥ, ಉಳ್ಳವರ ಪರ ನೀತಿ; ಆಶಾ ಹೋರಾಟದಲ್ಲಿ ಎಸ್ ಯುಸಿಐ ನ ಡಾ. ಸುನಿಲ್ ಕುಮಾರ್

"ಆಶಾ ಕಾರ್ಯಕರ್ತೆಯರು ಎತ್ತಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದೆ, ಸರ್ಕಾರ ಕೂಡಲೇ ಈ ಬೇಡಿಕೆಗಳನ್ನು...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

Download Eedina App Android / iOS

X