‘ರಫಾ ದುರಂತ’ಕ್ಕೆ ಸಂತಾಪ ವ್ಯಕ್ತಪಡಿಸಿ ನಂತರ ಸ್ಟೇಟಸ್ ಡಿಲೀಟ್ ಮಾಡಿದ ರೋಹಿತ್ ಪತ್ನಿ

Date:

Advertisements

ಪ್ಯಾಲಿಸ್ಟೇನ್‌ನ ದಕ್ಷಿಣ ಗಾಜಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ಸೇನೆ ಕಳೆದ ಭಾನುವಾರ ವಾಯುದಾಳಿ ನಡೆಸಿದ ಪರಿಣಾಮ 45 ಮಂದಿ ಅಮಾಯಕರು ಮೃತಪಟ್ಟಿದ್ದರು. ಈ ಘಟನೆಯ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯ ರಫಾದ ಮೇಲೆ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶಿಸಿತ್ತು. ವಿಶ್ವದ ಹಲವು ರಾಷ್ಟ್ರಗಳು ಇಸ್ರೇಲ್‌ನ ಹೀನ ಕೃತ್ಯವನ್ನು ಖಂಡಿಸಿದ್ದವು.

ಈ ದುರಂತಕ್ಕೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ‘’ಆಲ್‌ ಐಯ್ಸ್‌ ಆನ್‌ ರಫಾ(ಎಲ್ಲರ ಕಣ್ಣು ರಫಾದ ಮೇಲೆ)’ ಅಡಿಬರಹ ನೀಡಿ ಸಂತಾಪ ಸೂಚಿಸಿದ್ದರು. ಬಹುತೇಕರು ತಮ್ಮ ಫೇಸ್‌ಬುಕ್‌, ವಾಟ್ಸಾಪ್‌ ಮುಂತಾದ ಖಾತೆಯಲ್ಲಿ ಸ್ಟೇಟಸ್‌ ಕೂಡ ಹಾಕಿಕೊಂಡಿದ್ದರು.

ಈ ನಡುವೆ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಪತ್ನಿ ರಿತಿಕಾ ಸಜ್ದಾ ಕೂಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ ‘ಆಲ್‌ ಐಯ್ಸ್‌ ಆನ್‌ ರಫಾ’ ಎಂಬ ಭಾವಚಿತ್ರವುಳ್ಳ ಅಡಿಬರಹವನ್ನು ಹಾಕಿಕೊಂಡಿದ್ದರು. ಆದರೆ ಕೆಲವು ಬಲಪಂಥೀಯ ಟ್ರೋಲರ್‌ಗಳು ರಿತಿಕಾ ಸ್ಟೇಟಸ್‌ಗೆ ವಿರೋಧ ವ್ಯಕ್ತಪಡಿಸಿದ ನಂತರ ತಮ್ಮ ಸ್ಟೇಟಸ್‌ಅನ್ನು ಅಳಿಸಿಹಾಕಿದ್ದರು.

Advertisements

ರಿತಿಕಾ ರಫಾ ಸ್ಟೇಟಸ್‌ಅನ್ನು ಅಳಿಸಿಹಾಕಿದ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನೀವು ಈ ರೀತಿ ನಾಟಕವಾಡುವ ಬದಲು ಸ್ಟೇಟಸ್‌ಅನ್ನು ಹಾಕಿಕೊಳ್ಳದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಕುಟುಕಿದರೆ, ಇನ್ನೂ ಹಲವರು ಇಸ್ರೇಲ್‌ನಿಂದ ಹಲವು ದಶಕಗಳ ಕಾಲ ಪ್ಯಾಲಿಸ್ಟೀನ್‌ ಜನತೆ ಅನುಭವಿಸಿರುವ ಸಂಕಷ್ಟ ನಿಮಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ಯಾಲಿಸ್ಟೀನ್‌ಗೆ ಅಧಿಕೃತ ದೇಶದ ಸ್ಥಾನಮಾನ ನೀಡಿದ ಐರ್ಲೆಂಡ್ 

ರಫಾ ಮೇಲೆ ನಡೆದ ದಾಳಿಗೆ ಸಂತಾಪ ವ್ಯಕ್ತಪಡಿಸಿ ಬಾಲಿವುಡ್‌ನ ಸೆಲಬ್ರಿಟಿಗಳಾದ ಕರೀನಾ ಕಪೂರ್, ಅಲಿಯಾ ಭಟ್, ವರುಣ್‌ ಧವನ್‌, ತೃಪ್ತಿ ದಿಮ್ರಿ, ಸಮಂತ ರುತು ಪ್ರಭು, ಸ್ವಾರಾ ಭಾಸ್ಕರ್, ದಿಯಾ ಮಿರ್ಜಾ ಸೇರಿದಂತೆ ಹಲವು ನಟನಟಿಯರು ಬೆಂಬಲ ವ್ಯಕ್ತಪಡಿಸಿದ್ದರು.

ಕಳೆದ ಭಾನುವಾರ (ಮೇ 26)ದಂದು ಪ್ಯಾಲಿಸ್ಟೀನ್‌ನ ರಫಾದ ಮೇಲೆ ಇಸ್ರೇಲ್‌ ಸೇನೆ ವಾಯು ದಾಳಿ ನಡೆಸಿದ ಪರಿಣಾಮ 45 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ನವದೆಹಲಿಯಲ್ಲಿ ಇರಾನ್‌ ರಾಯಭಾರಿ ಕಚೇರಿ ಕೂಡ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ‘’ಆಲ್‌ ಐಯ್ಸ್‌ ಆನ್‌ ರಫಾ(ಎಲ್ಲರ ಕಣ್ಣು ರಫಾದ ಮೇಲೆ)”ಎಂಬ ಅಡಿಬರಹದೊಂದಿಗೆ ಇಸ್ರೇಲ್ ಕೃತ್ಯವನ್ನು ಖಂಡಿಸಿತ್ತು. ಇಸ್ರೇಲ್‌ನ ಮಾರಣಹೋಮದಿಂದ ರಫಾ ಹಾಗೂ ಗಾಜಾದಲ್ಲಿ ಸಾವಿರಾರು ಅಮಾಯಕರು ಮೃತಪಟ್ಟಿರುವುದಲ್ಲದೆ 15 ಲಕ್ಷ ಪ್ಯಾಲಿಸ್ಟೀನ್‌ ನಾಗರಿಕರು ವಸತಿ ಕಳೆದುಕೊಂಡು ನಿರಾಶ್ರಿತ ಶಿಬಿರದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅಡಿಬರಹದೊಂದಿಗೆ ವಿವರಿಸಲಾಗಿತ್ತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮದುವೆಯಾಗಲು ನಿರಾಕರಿಸಿದ ಯುವತಿಗೆ ಗುಂಡಿಕ್ಕಿ ಕೊಲೆ: ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ...

ಶೇ.200 ತೆರಿಗೆ ವಿಧಿಸಿ ಚೀನಾವನ್ನು ನಾಶಪಡಿಸಬಲ್ಲೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಚೀನಾ ಅಪರೂಪದ ಅಯಸ್ಕಾಂತ(earth magnets) ಅನ್ನು ಪೂರೈಸಬೇಕು, ಇಲ್ಲವಾದರೆ ಶೇಕಡ 200ರಷ್ಟು...

ಅಣ್ಣಾಮಲೈ ಕೈಯಿಂದ ಪ್ರಶಸ್ತಿ ಪಡೆಯಲು ವಿದ್ಯಾರ್ಥಿ ನಕಾರ

ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

Download Eedina App Android / iOS

X