ಮರುಭೂಮಿಯಲ್ಲಿ ಸಿಲುಕಿದವರು ‘ಉಬರ್ ಒಂಟೆ’ ಬುಕ್ ಮಾಡಿ ಪಾರಾದರಂತೆ; ನೆಟ್ಟಿಗರು ಹೇಳಿದ್ದೇನು?

Date:

Advertisements

ದುಬೈ ಮರುಭೂಮಿಯಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರು ‘ಉಬರ್ ಒಂಟೆ’ ಬುಕ್ ಮಾಡಿ ಪಾರಾಗಿದ್ದೇವೆ ಎಂದು ಹೇಳಿಕೊಂಡಿದ್ದು, ಸದ್ಯ ಇದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ದುಬೈನ ವಿಶಾಲವಾದ ಮರುಭೂಮಿಯಲ್ಲಿ ಸಿಲುಕಿರುವ ಇಬ್ಬರು ಮಹಿಳೆಯರನ್ನು ನಾವು ನೋಡಬಹುದು. ಬಳಿಕ ಉಬರ್‌ ಅಪ್ಲಿಕೇಶನ್‌ ಅನ್ನು ತೆರೆದಾಗ ಅವರಿಗೆ ಅನಿರೀಕ್ಷಿತವಾಗಿ ಉಬರ್ ಒಂಟೆ ಆಯ್ಕೆ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಕಾರುಗಳ ಬದಲಿಗೆ ಅವರಿಗೆ ಎಟಿವಿಯಂತಹ ಆಯ್ಕೆಗಳನ್ನು ನೀಡಲಾಗುತ್ತದೆ. ಆದರೆ ಉಬರ್‌ನಲ್ಲಿ ಒಂಟೆಯನ್ನು ನೋಡಿ ಆಶ್ಚರ್ಯವಾಗಿದೆ ಎಂದಿದ್ದಾರೆ. ಇದರ ವಿಡಿಯೋವನ್ನು ಮಾಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisements

ಇದನ್ನು ಓದಿದ್ದೀರಾ? ಬೆಂಗಳೂರು | ಉಬರ್ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಚಾಲಕ

ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಮಹಿಳೆ, “ನಾವು ಮರುಭೂಮಿಯಲ್ಲಿ ಸಿಲುಕಿದ್ದೇವೆ. ಉಬರ್‌ ಪರೀಕ್ಷಿಸಲು ನಿರ್ಧರಿಸಿದ್ದೇವೆ. ಏನಾಗಿದೆ ಊಹಿಸಿ? ಅಲ್ಲಿ ಒಂಟೆ ಇದೆ” ಎಂದು ಹೇಳಿದ್ದಾರೆ.

ಈ ಉಬರ್ ಒಂಟೆಯನ್ನು ಆಯ್ಕೆ ಮಾಡಿದ ಬಳಿಕ ದೀಪಕ್ ಎಂಬ ವ್ಯಕ್ತಿ ಒಂಟೆಯೊಂದಿಗೆ ಬಂದು ಮಹಿಳೆರನ್ನು ಮರುಭೂಮಿಯಿಂದ ಪಾರು ಮಾಡಿದ್ದಾರೆ. ಆದರೆ ಈ ವಿಡಿಯೋ ನಿಜವೇ ಎಂಬುದು ಖಚಿತವಾಗಿಲ್ಲ. “ನೀವು ಅದನ್ನು ನಂಬುತ್ತೀರಾ? ನಾವು ನಿಜವಾಗಿಯೂ ಒಂಟೆಯನ್ನು ಬುಕ್ ಮಾಡಿದೆವು” ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕೆಲವು ನಿಟ್ಟಿಗರು ಇದನ್ನು ನಕಲಿ ಎಂದು ಹೇಳಿದರೆ, ಇನ್ನು ಕೆಲವರು ಆ ರೀತಿ ನಟನೆ ಮಾಡಲಾಗಿದೆ ಎಂದು ಹೇಳಿದ್ದಾರೆ. “ದುಬೈನಲ್ಲಿ ಮಾತ್ರ ಉಬರ್‌ನಲ್ಲಿ ಒಂಟೆ ಬುಕ್ ಮಾಡಬಹುದು. ಅದು ದೊಡ್ಡ ವಿಷಯವೇನಲ್ಲ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಇನ್ನೋರ್ವ ನೆಟ್ಟಿಗರು “ನಿಮ್ಮ ಸುರಕ್ಷತೆಗಾಗಿ ಮೊದಲು ನಂಬರ್ ಪ್ಲೇಟ್ ಪರಿಶೀಲಿಸಿ” ಎಂದು ಗೇಲಿ ಮಾಡಿದ್ದಾರೆ. “ಇನ್ನೋರ್ವರು ನೀವು ಮರುಭೂಮಿಯ ನಡುವೆ ಸಿಲುಕಿರುವಂತೆ ಕಾಣುವುದಿಲ್ಲ. ನೀವು ವಿಡಿಯೋ ಮಾಡಿದ ಪ್ರದೇಶ ಹಿಂಭಾಗದಲ್ಲಿಯೇ ನಾವು ದಾರಿ ಕಾಣಬಹುದು” ಎಂದು ಹೇಳಿದ್ದಾರೆ.

“ಇದು ನಟನೆ ಅಲ್ಲವೇ? ಆದರೆ ಸತ್ಯದಂತೆಯೇ ಇದೆ” ಎಂದು ಮತ್ತೋರ್ವ ನೆಟ್ಟಿಗರು ತಿಳಿಸಿದ್ದಾರೆ. “ನಿಮ್ಮ ಹಿಂಭಾಗದಲ್ಲಿ ದಾರಿಯಿದೆ. ಆದರೆ ನೀವು ಮರುಭೂಮಿಯಲ್ಲಿ ಸಿಲುಕಿದ್ದೀರಿ ಎಂದು ಹೇಳುತ್ತಿದ್ದೀರಿ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

ಗಾಝಾದಲ್ಲಿ ಇಸ್ರೇಲ್ ದಾಳಿ: ಐವರು ಅಲ್‌ಜಝೀರಾ ಪತ್ರಕರ್ತರು ಹತ

ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ...

Download Eedina App Android / iOS

X