ರಾಯಚೂರು | ‘ವಿಜ್ಞಾನಿ-ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮ

Date:

Advertisements

ವಿಜ್ಞಾನವೆಂಬುದು ಜನರ ಜೀವನ ಮಟ್ಟ ಸುಧಾರಣೆ ಮಾಡಲು ಒಂದು ಸಾಧನವಾಗಿದೆ. ವಿಜ್ಞಾನ ಬಾಹ್ಯಾಕಾಶದಂತೆ ವಿಸ್ತಾರವಾದದ್ದು, ಅಧ್ಯಯನ ಮಾಡಿದಂತೆಲ್ಲ ಹೊಸದೊಂದು ಗೋಚರವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು, ಪ್ರೇಕ್ಷಕರಾಗಿ ನೋಡದೇ ವಿಜ್ಞಾನಿಗಳಾಗಿ ಸಾಧನೆಗೆ ಮುನ್ನಡೆಬೇಕು ಎಂದು ಚಂದ್ರಯಾನ-3ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಜ್ಞಾನಿ ಡಾ. ಬಿ.ಎಚ್.ಎಂ. ದಾರುಕೇಶ್ ಹೇಳಿದ್ದಾರೆ.

ರಾಯಚೂರಿನಲ್ಲಿ ಜಿಲ್ಲಾಡಳಿತ ಆಯೋಜಸಿದ್ದ ‘ವಿಜ್ಞಾನಿ-ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ವಿಜ್ಞಾನ ವಿಸ್ತಾರವಾಗಿದ್ದು, ತಿಳಿಕೊಳ್ಳಲು ಸಾಕಷ್ಟಿದೆ. ಹೊಸ ಹೊಸ ವಿಷಯ ಅಧ್ಯಯನ ಮಾಡಿದಂತೆ ಮತ್ತೊಂದು ವಿಷಯ ಅದ್ಯಯನ ಮಾಡುವುದಕ್ಕೆ ಹೊಸ ವಿಷಯ ಹುಡುಕಿಕೊಡುತ್ತಿದೆ, ಹೊಸ ಅವಿಷ್ಕಾರ ಮಾಡಲು ದಾಪುಗಾಲು ಇಡಲು ಸಾಧ್ಯವಾಗುತ್ತಿದೆ” ಎಂದರು.

“ವಿಜ್ಞಾನ ಜನರ ಜೀವನದ ಸುಧಾರಣೆ ಮಾಡಲು ಒಂದು ಪ್ರಯೋಗ ಶಾಲೆ. ಅದರಲ್ಲಿ ಪ್ರತಿಯೊಂದು ವಿಷಯದಲ್ಲೂ ಹೊಸದನ್ನು ಅಧ್ಯಯನ ಮಾಡುತ್ತಲೆ ಇದ್ದೇವೆ. ಚಂದ್ರಯಾನ-3 ಉಡಾವಣೆಯಿಂದ ಸಾಕಷ್ಟು ಅಧ್ಯಯನಗಳು ನಡೆದಿವೆ. ಚಂದ್ರನಲ್ಲಿ ನೀರು, ಮಣ್ಣು, ಗಾಳಿ ಮತ್ತು ಜೀವಿಸಬೇಕಾದ ವಾತಾವರಣದ ಕುರಿತು ಅಧ್ಯಯನ ನಡೆಯುತ್ತಿದೆ. ಎಲ್ಲ ದೇಶಗಳು ಚಂದ್ರನ ಉತ್ತರ ದೃವದಲ್ಲಿ ಅಧ್ಯಯನ ನಡೆಸಿವೆ. ಆದರೆ, ದಕ್ಷಿಣ ದೃವದಲ್ಲಿ ಯಾವ ದೇಶವು ಕಾಲಿಟ್ಟಿರಲಿಲ್ಲ. ಭಾರತ ಏಕೈಕ ದೇಶವಾಗಿ ಮುಂದಡಿ ಇಟ್ಟಿದೆ. ವಿಜ್ಞಾನದಿಂದ ಜಗತ್ತಿನ ಅಧ್ಯಯನ ಜೊತೆಗೆ ಅಲ್ಲಿರುವ ವಾತಾವರಣ ಮತ್ತು ಚಂದ್ರನಲ್ಲಿ ಯಾವ ವಸ್ತುಗಳು ಲಭ್ಯವಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ” ಎಂದರು.

Advertisements

ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ ಮಾತನಾಡಿ, “ದೇಶದಲ್ಲಿ ವಿಜ್ಞಾನದ ಅವಶ್ಯಕತೆ ಹೆಚ್ಚಿದೆ. ಪ್ರತಿ ವರ್ಷ ಹೊಸ ಹೊಸ ಅದ್ಯಯನಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ವಿಜ್ಞಾನಿಗಳಿಂದ ಸಂವಾದ ನಡೆಸಿ, ಮಾಹಿತಿ ಪಡೆಯುವುದರ ಜೊತೆಗೆ ಜ್ಞಾನ ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಆರ್ ಇಂದಿರಾ, ಡಯಟ್ ಪ್ರಾಚಾರ್ಯ ಮಲ್ಲಿಕಾರ್ಜುನ, ಭಾರತ ಜ್ಞಾನನ ಸಮಿತಿಯ ಸೈಯದ್ ಹಫೀಜುಲ್ಲಾ, ವಿಜ್ಞಾನ ಉಪ ಕೇಂದ್ರದ ಅಧಿಕಾರಿ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು.

ವರದಿ : ಹಫೀಜುಲ್ಲ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

Download Eedina App Android / iOS

X