ಐಪಿಎಲ್ 2023 |ರೋಹಿತ್‌ ಶರ್ಮಾ ಸ್ಪೋಟಕ ಆಟದಿಂದ ಮುಂಬೈಗೆ ಮೊದಲ ಗೆಲುವು

Date:

Advertisements

ನಾಯಕ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್ ಅವರ ಸ್ಫೋಟಕ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ 16ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 173 ರನ್‌ಗಳ ಗುರಿಯನ್ನು 20ನೇ ಓವರ್‌ನ ರೋಚಕ ಆಟದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಕಳೆದ ಹಲವು ಪಂದ್ಯಗಳಲ್ಲಿ ಫಾರ್ಮ್‌ ಕಳೆದುಕೊಂಡಿದ್ದ ನಾಯಕ ರೋಹಿತ್‌ ಶರ್ಮಾ ಇಂದು ಭರ್ಜರಿ ಬ್ಯಾಟಿಂಗ್‌ ಆಡಿವಾಡಿದರು. 45 ಚೆಂಡುಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಯೊಂದಿಗೆ 65 ರನ್‌ ಬಾರಿಸಿದರು. ತಿಲಕ್‌ ವರ್ಮಾ ಕೂಡ 29 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 41 ಸ್ಫೋಟಿಸಿ ಗೆಲುವಿನಲ್ಲಿ ನೆರವಾದರು.

Advertisements

ಈಗಾಗಲೇ ಮೂರು ಸೋಲುಗಳನ್ನು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟೂರ್ನಿಯ ನಾಲ್ಕನೇ ಸೋಲಾಗಿದೆ.

ಅಕ್ಸರ್ – ವಾರ್ನರ್‌ ಜೊತೆಯಾಟ

ಟಾಸ್‌ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಲ್‌ರೌಂಡರ್‌ ಅಕ್ಸರ್ ಪಟೇಲ್‌ ಅವರ ಸಿಕ್ಸರ್‌, ಬೌಂಡರಿಗಳ ಭರ್ಜರಿಯಾಟ ಹಾಗೂ ನಾಯಕ ಡೇವಿಡ್‌ ವಾರ್ನರ್‌ ಸಮಯೋಚಿತ ಆಟದಿಂದ 172 ರನ್‌ಗಳ ಗೌರವಾನ್ವಿತ ಮೊತ್ತ ದಾಖಲಿಸಿತು.

ಡೆಲ್ಲಿ ನಾಲ್ಕನೇ ಓವರ್‌ನಲ್ಲಿಯೇ ಪೃಥ್ವಿ ಶಾ (15) ಅವರ ವಿಕೆಟ್ ಕಳೆದುಕೊಂಡಿತು. ಮನೀಶ್‌ ಪಾಂಡೆಯೊಂದಿಗೆ ಆಟವಾಡಿದ ನಾಯಕ ವಾರ್ನರ್ ಎರಡನೇ ವಿಕೆಟ್ ಜೊತೆಯಾಟಕ್ಕೆ 43 ರನ್‌ ಕಲೆಯಾಕಿದರು. ತಂಡದ ಮೊತ್ತ 81 ರನ್‌ ಆಗಿದ್ದಾಗ ಚಾವ್ಲಾ ಬೌಲಿಂಗ್‌ನಲ್ಲಿ ಪಾಂಡೆ ಔಟಾದರು.

ಇವರ ನಂತರ ಬಂದ ಯಶ್‌ ಧುಲ್‌,ರೋವಮನ್‌ ಪೋವಲ್, ಲಲಿತ್‌ ಯಾದವ್‌ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್‌ ಕಡೆ ಮುಖ ಮಾಡಿದರು. 7ನೇ ಕ್ರಮಾಂಕದ ಆಟಗಾರ ಆಲ್‌ರೌಂಡರ್‌ ಅಕ್ಸರ್‌ ಪಟೇಲ್‌ ಆಗಮಿಸಿದ ನಂತರ ತಂಡದ ಮೊತ್ತ ಬಿರುಸು ಪಡೆಯಿತು. ಇವರಿಬ್ಬರು 6ನೇ ವಿಕೆಟ್‌ ಜೊತೆಯಾಟದಲ್ಲಿ 34 ಎಸೆತಗಳಲ್ಲಿ 67 ರನ್‌ ಬಾರಿಸಿದರು.

ಅಕ್ಸರ್‌ ಪಟೇಲ್ 25 ಚೆಂಡುಗಳಲ್ಲಿ 5 ಸಿಕ್ಸರ್,4 ಬೌಂಡರಿಯೊಂದಿಗೆ 54 ಸಿಡಿಸಿದರೆ,ನಾಯಕ ಡೇವಿಡ್‌ ವಾರ್ನರ್ 47 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 51 ಪೇರಿಸಿದರು. ಅಂತಿಮವಾಗಿ ಡೆಲ್ಲಿ ತಂಡ 19.4 ಓವರ್‌ಗಳಲ್ಲಿ 172 ರನ್‌ಗೆ ಆಲೌಟ್‌ ಆಯಿತು.

ಮುಂಬೈ ಪರ ಜೇಸನ್ ಬೆಹ್ರೆನ್‌ಡಾರ್ಫ್ 23/3 ಹಾಗೂ ಪಿಯೂಶ್ ಚಾವ್ಲಾ 22/3 ಹಾಗೂ ರೈಲೀ ಮೆರೆಡಿತ್  34/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‌ ಎನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X