ಕಾರಿನಲ್ಲಿ ಪತ್ತೆಯಾದ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ನಟ ಲೀ ಸನ್ ಕ್ಯುನ್ ಶವ

Date:

Advertisements

ಖ್ಯಾತ ದಕ್ಷಿಣ ಕೊರಿಯಾದ ನಟ, ಆಸ್ಕರ್ ಪ್ರಶಸ್ತಿ ಚಿತ್ರ ‘ಪ್ಯಾರಸೈಟ್’ನ ಪ್ರಮುಖ ಪಾತ್ರಧಾರಿ ಲೀ ಸನ್ ಕ್ಯುನ್ ಶವ ಅನುಮಾನಸ್ಪದವಾಗಿ ಕಾರಿನಲ್ಲಿ ಪತ್ತೆಯಾಗಿದೆ.

ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ಮೃತದೇಹ ಪತ್ತೆಯಾಗಿದ್ದು, ಕೆಲವು ದಿನಗಳ ಹಿಂದೆ ಡ್ರಗ್ ಬಳಕೆ ಆರೋಪದಡಿ ಲೀ ಸನ್ ಕ್ಯುನ್ ವಿರುದ್ಧ ತನಿಖೆ ಕೈಗೊಳ್ಳಲಾಗಿತ್ತು.

ಉತ್ತರ ಸಿಯೋಲ್‌ನ ರಸ್ತೆಯೊಂದರಲ್ಲಿನ ಪಾರ್ಕಿಂಗ್‌ನಲ್ಲಿ ಲೀ ಸನ್ ಕ್ಯುನ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.  ಪೊಲೀಸರು ಹಾಗೂ ತುರ್ತು ಘಟಕದ ಅಧಿಕಾರಿಗಳು ನಂತರದಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿದರು.

Advertisements

ಕೆಲ ದಿನಗಳ ಹಿಂದೆ 48 ವರ್ಷದ ನಟ ಲೀ ಸನ್ ಕ್ಯುನ್ ನಾಪತ್ತೆಯಾಗಿರುವುದಾಗಿ ಪೊಲೀಸರು ದೂರು ಸ್ವೀಕರಿಸಿ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು. ಆತ್ಮಹತ್ಯೆ ಅಥವಾ ಇತರೆ ಯಾವುದೇ ಕಾರಣದ ಬಗ್ಗೆ ತಿಳಿಸಲು ಪೊಲೀಸರು ನಿರಾಕರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪೇಗೌಡ ವಿಮಾನನಿಲ್ದಾಣ ಸೀಮೆ- ರೈತರ ಕೊರಳ ಬಿಗಿದಿರುವ ಭೂಮಾಫಿಯಾ, ಕುಣಿಕೆ ಕಳಚಲಿ ಕಾಂಗ್ರೆಸ್ ಸರ್ಕಾರ

ನಟ ಬುಧವಾರ ಮನೆಯಿಂದ ತೆರಳುವ ಮುನ್ನ ಆತ್ಮಹತ್ಯೆ ರೀತಿಯ ಪತ್ರ ಬರೆದಿರುವುದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಲೀ ಸನ್ ಕ್ಯುನ್ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೀ 2020 ರಲ್ಲಿ ಅತ್ಯುತ್ತಮ ಚಿತ್ರ ಮತ್ತು ಇತರ ಮೂರು ವಿಭಾಗಗಳಿಗಾಗಿ ಆಸ್ಕರ್ ಪ್ರಶಸ್ತಿ ಪಡೆದ “ಪ್ಯಾರಾಸೈಟ್” ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. “ಪ್ಯಾರಾಸೈಟ್” ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ದಕ್ಷಿಣ ಕೊರಿಯಾದ ಚಲನಚಿತ್ರವಾಗಿತ್ತು.

“ಪ್ಯಾರಾಸೈಟ್” ಗಿಂತ ಮುಂಚೆಯೇ, ಲೀ ಹಲವು ವರ್ಷಗಳಿಂದ ದಕ್ಷಿಣ ಕೊರಿಯಾದಲ್ಲಿ ಜನಪ್ರಿಯ ನಟರಾಗಿದ್ದರು. “ಕಾಫಿ ಪ್ರಿನ್ಸ್ (2007)” ಎಂಬ ಹಿಟ್ ಟಿವಿ ನಾಟಕ ಸರಣಿಯಲ್ಲಿನ ಪಾತ್ರದಿಂದ ಜನಪ್ರಿಯರಾಗಿದ್ದರು. “ಬಿಹೈಂಡ್ ದಿ ವೈಟ್ ಟವರ್” “ಪಾಸ್ಟಾ (2010)” “ಮೈ ಮಿಸ್ಟರ್” ಅವರು ನಟಿಸಿದ ಪ್ರಮುಖ ಸಿನಿಮಾಗಳು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X