ಭಾರತ್ ಜೋಡೋ ನ್ಯಾಯ ಯಾತ್ರೆಯು ಸದ್ಯ ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿದ್ದು, ಯಾತ್ರೆಯು ಗುವಾಹಟಿ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ. ಈ ನಡುವೆ ಅಸ್ಸಾಂ ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದಾಗಿ ವರದಿಯಾಗಿದ್ದು, ಕೆಲವು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿರುವುದಾಗಿ ಕಾಂಗ್ರೆಸ್ ಐಟಿ ಸೆಲ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದೆ.
ಲಾಠಿ ಚಾರ್ಜ್ನಿಂದ ಆಕ್ರೋಶಗೊಂಡ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿದ್ದ ಮಂದಿ, ಪೊಲೀಸರು ನಿರ್ಮಿಸಿದ್ದ ಮರದ ಬ್ಯಾರಿಕೇಡ್ ಅನ್ನೇ ಎತ್ತಿ ಎಸೆದಿರುವುದಾಗಿ ವರದಿಯಾಗಿದೆ.
#WATCH | A clash broke out between Police and Congress workers in Assam’s Guwahati, during Congress’ Bharat Jodo Nyay Yatra.
More details awaited. pic.twitter.com/WxitGxup3m
— ANI (@ANI) January 23, 2024
ಈ ಬೆಳವಣಿಗೆಯ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಇಂದು ಅಸ್ಸಾಂನಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ನಡೆಯುತ್ತಲಿದೆ. ಬಜರಂಗದಳ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ರ್ಯಾಲಿ ಇದೇ ಮಾರ್ಗವಾಗಿ ನಡೆದಿತ್ತು. ಆದರೆ ನಮ್ಮ ಮೆರವಣಿಗೆಯನ್ನು ಅಸ್ಸಾಂ ಬಿಜೆಪಿ ಸರ್ಕಾರ ತಡೆದು ನಿಲ್ಲಿಸಿದೆ. ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ಗಳನ್ನು ತೆಗೆದಿದ್ದಾರೆ. ನಾವು ಬ್ಯಾರಿಕೇಡ್ಗಳನ್ನು ತೆಗೆದಿರಬಹುದು. ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ದುರ್ಬಲರು ಎಂದು ನೀವು ಭಾವಿಸಬೇಡಿ. ಕಾಂಗ್ರೆಸ್ ಕಾರ್ಯಕರ್ತರು ಸಿಂಹದಂತೆ ಘರ್ಜಿಸುವವರು(ಬಬ್ಬರ್ ಶೇರ್)” ಎಂದು ಹೇಳಿದರು.
हिंदुस्तान का सबसे भ्रष्ट मुख्यमंत्री बौखला गया है।
आज असम के गुवाहाटी में प्रवेश कर रही ‘भारत जोड़ो न्याय यात्रा’ को पहले रोका गया और फिर कांग्रेस कार्यकर्ताओं को लाठियों से पीटा गया।
घायल कार्यकर्ताओं के मुताबिक, पुलिस के साथ BJP के गुंडे भी थे, जिन्होंने उनपर डंडे चलाए।
याद… pic.twitter.com/XQn5fwcqhw
— Congress (@INCIndia) January 23, 2024
“ನಾವು ಕಾನೂನನ್ನು ಅನುಸರಿಸುವವರು. ಆದ್ದರಿಂದ ನಾವು ಅನುಮತಿ ಪಡೆದ ಮಾರ್ಗದ ಮೂಲಕ ಪ್ರಯಾಣವನ್ನು ನಡೆಸುತ್ತೇವೆ. ಇಲ್ಲಿ ನಿಂತಿರುವ ಪೊಲೀಸ್ ಅಧಿಕಾರಿಗಳಿಗೆ ನಾನು ಹೇಳಲು ಬಯಸುವುದು ಏನೆಂದರೆ, ನೀವು ನಿಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತು. ನಿಮಗೆ ಮೇಲಿನಿಂದ ಬಂದ ಆದೇಶದಂತೆ ನೀವು ಕೆಲಸ ಮಾಡಿದ್ದೀರಿ ಎಂದೂ ಕೂಡ ನಮಗೆ ತಿಳಿದಿದೆ. ಆದರೆ ನಿಮಗೆ ಒಂದು ವಿಷಯ ನೆನಪಿರಲಿ, ಅಸ್ಸಾಂನ ಜನರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಆಗ್ರಹ. ಏಕೆಂದರೆ ಅಸ್ಸಾಂನಲ್ಲಿರುವ ಮುಖ್ಯಮಂತ್ರಿ 24 ಗಂಟೆಯೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಅವರು” ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಂತೆ ಕೆಲವು ಪೊಲೀಸರು ಕಿರು ನಗೆ ಬೀರಿದರು.
अहंकार ध्वस्त हुआ
असम के मुख्यमंत्री और दिल्ली में बैठे उनके मालिक का अहंकार कांग्रेस के बब्बर शेरों ने ध्वस्त कर दिया।
“कोई भी शक्ति इस यात्रा को नहीं रोक सकती” 🦁 pic.twitter.com/u3cDSPWpkA
— Congress (@INCIndia) January 23, 2024
ಇದನ್ನು ಗಮನಿಸಿದ ರಾಹುಲ್ ಗಾಂಧಿ, “ನಾನು ಹೇಳುತ್ತಿರುವ ಸತ್ಯ ಇಲ್ಲಿರುವ ಪೊಲೀಸ್ನವರಿಗೂ ತಿಳಿದಿದೆ. ದಯವಿಟ್ಟು ನೀವು ತಪ್ಪಿಯೂ ಕೂಡ ನನ್ನ ಮಾತಿಗೆ ಚಪ್ಪಾಳೆ ತಟ್ಟಬೇಡಿ. ಆದರೆ, ನಿಮ್ಮ ಮನಸ್ಸಿನಲ್ಲಿರುವ ವಿಚಾರ ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದು ಪೊಲೀಸರನ್ನುದ್ದೇಶಿಸಿ ಹೇಳಿದರು.
राहुल गांधी जी की भारत जोड़ो न्याय यात्रा को एक बार फिर से बैरिकेडिंग लगाकर रोकने की साजिश हुई है,
लेकिन हम ये अब होने नही देंगे.. जितनी लाठियां चलानी है चलाओ.. ये जंग अब जारी रहेगी.. 🇮🇳✊🏼💯 #BharatJodoNayaYatra @bharatjodo pic.twitter.com/Ijo26CVS3q
— Mohd Iltaj (मोहम्मद इलताज) 🇮🇳 (@MohdIltaj) January 23, 2024
ನಿನ್ನೆ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಅಸ್ಸಾಂ ಪೊಲೀಸರು, ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡದಂತೆ ತಡೆದಿದ್ದರು.