ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವರು ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಕೆಲವೇ ಗಂಟೆಗಳ ನಂತರ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದರು.
“ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಇಲ್ಲಿ ಬಂದು ಬಾಂಬ್ ಹಾಕುತ್ತಾರೆ. ಕೆಫೆಯಲ್ಲಿ ಬಾಂಬ್ ಇಟ್ಟಿದ್ದೂ ಕೂಡ ಅಲ್ಲಿಂದ ಬಂದವರು” ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿತ್ತು. ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರು ಶೋಭಾ ಕರಂದ್ಲಾಜೆ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
To my Tamil brothers & sisters,
I wish to clarify that my words were meant to shine light, not cast shadows. Yet I see that my remarks brought pain to some – and for that, I apologize. My remarks were solely directed towards those trained in the Krishnagiri forest,
1/2— Shobha Karandlaje (Modi Ka Parivar) (@ShobhaBJP) March 19, 2024
“ನನ್ನ ತಮಿಳು ಸಹೋದರರು ಮತ್ತು ಸಹೋದರಿಯರೇ, ನಾನು ಈ ಪ್ರಕರಣದ ಬೆಳಕು ಚೆಲ್ಲುವ ಉದ್ದೇಶದಿಂದ ಹೇಳಿಕೆ ನೀಡಿರುವುದೇ ಹೊರತು ಯಾರ ಮೇಲೆಯೂ ಆರೋಪ ಹೊರಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಆದರೂ ನನ್ನ ಹೇಳಿಕೆ ಕೆಲವರಿಗೆ ನೋವು ತಂದಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಶೋಭಾ ಕರಂದ್ಲಾಜೆ ಎಕ್ಸ್ (ಟ್ವೀಟ್) ಮಾಡಿದ್ದಾರೆ.
ಇದನ್ನು ಓದಿದ್ದೀರಾ? ‘ತಮಿಳುನಾಡಿನಿಂದ ಟ್ರೈನಿಂಗ್ ತಗೊಂಡು ಬಂದವರು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂದ ಶೋಭಾ ಕರಂದ್ಲಾಜೆ!
“ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಬಂಧಿಸಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿರುವ ಬಗ್ಗೆ ನನ್ನ ಹೇಳಿಕೆಯಾಗಿತ್ತು. ಇದು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಹೇಳಿಕೆ. ತಮಿಳುನಾಡಿನ ಎಲ್ಲರಿಗೂ ನನ್ನ ಹೃದಯದ ಆಳದಿಂದ, ನಾನು ಕ್ಷಮೆ ಕೇಳುತ್ತೇನೆ. ಇದಲ್ಲದೆ, ನನ್ನ ಹಿಂದಿನ ಹೇಳಿಕೆಯನ್ನು ನಾನು ಹಿಂಪಡೆಯುತ್ತೇನೆ” ಎಂದು ಹೇಳಿದರು.
ಮಾರ್ಚ್ 1 ರಂದು ಮಧ್ಯಾಹ್ನ 1 ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರದ ಆರಂಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕದ ಬಳ್ಳಾರಿಯ ಶಬ್ಬೀರ್ನನ್ನು ಬಂಧಿಸಿದೆ ಎಂದು ವರದಿಯಾಗಿದೆ.
ಬಾಯಿಗೆ ಬಂದಂತೆ ಭಾಷಣ ಮಾಡುವುದು ; ಹೇಳಿಕೆ ನೀಡುವುದು , ಆಮೇಲೆ ಕ್ಷಮೆ ಯಾಚಿಸುವುದು ರಾಜಕಾರಣಿಗಳಿಗೆ ಚಟವಾಗಿಬಿಟ್ಟಿದೆ. ಈ ಚಟವನ್ನು ಬಿಡಲು ರಾಜಕಾರಣಿಗಳು ಪ್ರಯತ್ನಿಸುವುದೂ ಇಲ್ಲ ; ಪ್ರಯತ್ನಿಸಿದರೆ ಸಾಧ್ಯವೂ ಆಗುವುದಿಲ್ಲ ? ಸಾಧ್ಯವಾದರೆ ಅವನೊಬ್ಬ ರಾಜಕಾರಣಿ ಎಂದು ಗುರುತಿಸಿಕೊಳ್ಳುವುದೂ ಇಲ್ಲ !
ಅಲ್ಲಿ ಬಾಸ್ ತಮಿಳು ನಾಡಿನಲ್ಲಿ ರೋಡ್ ಶೋ ಮಾಡ್ತಾರೆ,,ಇವರು ತಮಿಳರ ಮೇಲೆ ಆಪಾದನೆ ಮಾಡುವರು,, ಒಟ್ಟು ಸೌಂಡ್ ಮಾಡುತ್ತಿರಬೇಕು ಎಂಥಾ ಸೌಂಡ್ ಮಾಡಬೇಕೆನ್ನುವ ಕನಿಷ್ಠ ಪ್ರಜ್ಞೆ ಸಹ ಇರೋದಿಲ್ಲ,,,ಇಂಥವರೆಲ್ಲ ಕೇಂದ್ರ ಮಂತ್ರಿ ಹೀಗಿರಬೇಕಾದರೆ ಬಾಸ್ ಹೇಗಿರಬೇಡ ,,,ಇವರಿಂದ ದೇಶಕ್ಕೆ ಮುಕ್ತಿ ಸಿಗಲೇಬೇಕಾದ ತುರ್ತು ಅಗತ್ಯ ಇದೆ