ಕಲಬುರಗಿ | ಕಾರ್ಮಿಕ ಮಹಿಳೆಯರ ಕೊಲೆ ತನಿಖೆ ಸಿಐಡಿಗೆ ವಹಿಸಿ; ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

Date:

Advertisements

ಕಲಬುರಗಿ ಜಿಲ್ಲೆಯಲ್ಲಿ ನಡೆದ ಕಟ್ಟಡ ಕಾರ್ಮಿಕ ಮಹಿಳೆಯರ ಜೋಡಿ ಕೋಲೆ ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿ ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ತಲಾ 5 ಲಕ್ಷ ರೂ. ತಕ್ಷಣ ಪರಿಹಾರ ಬಿಡುಗಡೆಗೆ ಒತ್ತಾಯಸಿ ಕೇಂದ್ರ ರಾಮಿರ್ ಸಂಧಾನಗಳಿ ಸಮನ್ವಯ ಸಮಿತಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ಮನವಿ ಪತ್ರದಲ್ಲಿ, ಏಪ್ರಿಲ್ 07ರಂದು ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ ಬಳಿ ಜಮೀನಿನಲ್ಲಿ ಕಟ್ಟಡ ಕಾರ್ಮಿಕರಾದ ಶರಣಮ್ಮ ಮತ್ತು ಚಂದಮ್ಮ ಇವರನ್ನು ಭೀಕರವಾಗಿ ಕೋಲೆ ಮಾಡಲಾಗಿದೆ. ಕಡು ಬಡವರಾದ ಇವರು ಪ್ರತೀ ನಿತ್ಯ ದುಡಿಮೆಗಾಗಿ ಗಂಜ್ ಪ್ರದೇಶದ ನಾಕ ಬಂದಿ (ನಿರ್ಮಾಣ ವಲಯದ ಕೆಲಸಕ್ಕೆ ನಿಲ್ಲುವ ಜಾಗ) ಸ್ಥಳಗಳಲ್ಲಿ ಕಾರ್ಮಿಕರು ನಿರ್ಮಾಣವಲಯದ ದುಡುಮೆಗಾಗಿ ಸರಳವಾಗಿ ದೊರೆಯುತ್ತಾರೆ.

ಗುತ್ತಿಗೆದಾರರು ಅಥವಾ ಮಾಲೀಕರು ಈ ಸ್ಥಳದಿಂದ ದಿನಗೂಲಿ ಲೆಕ್ಕದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಾರೆ. ಅದರಂತೆ ಕಾರ್ಮಿಕ ಮಹಿಳೆಯರನ್ನು ಕೆಲಸಕ್ಕೆ ಕರೆದುಕೊಂಡು ಹೊದ ದುಷ್ಕರ್ಮಿಗಳು ಕಲಬುರಗಿ ಹೊರವಲಯದಲ್ಲಿ ಈ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ಚಿನ್ನ-ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

Advertisements

ಕೃತ್ಯನಡೆದು ಮೂರು ದಿನಗಳು ಕಳೆದರೂ ಆರೋಪಿಗಳೂ ಪತ್ತೆಯಾಗಿಲ್ಲ. ಈ ಕೃತ್ಯ ಅತ್ಯಂತ ಹೀನಾಯವಾಗಿದ್ದು, ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಒಂದು ಹೊತ್ತಿನ ಉಟಕ್ಕಾಗಿ ಕಷ್ಟ ಪಡುವ ಕಾರ್ಮಿಕರ ಜೀವಗಳಿಗೆ ಬೇಲೆ ಇಲ್ಲದಹಾಗಾಗಿದೆ. ಇಂತಹ ಸಂದರ್ಭದಲ್ಲಿ ಕಲಬುರಗಿಯಲ್ಲಿ ಕಾರ್ಮಿಕ ಇಲಾಖೆ ಪ್ರಾದೇಶಿಕ ಆಯುಕ್ತರ ಕಚೇರಿ ಇದ್ದರೂ ಸಹ, ಉಪ ಕಾರ್ಮಿಕ ಆಯುಕ್ತರು/ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ.

ಸೌಜನ್ಯಕ್ಕಾದರೂ ಮೃತ ಕುಟುಂಬಗಳಿಗೆ ಬೇಟಿ ನೀಡಿ ಸಾಂತ್ವನ ಹೇಳಿಲ್ಲ. ನೈಜ ಕಾರ್ಮಿಕರು ಆಗಿರುವದರಿಂದ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿರುವದರಿಂದ ಕಾರ್ಮಿಕ ಇಲಾಖೆ ನಿಯಮಗಳನ್ವಯ ವಿಶೇಷ ಪ್ರಕರಣವೆಂದು ಪ್ರತೀ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ.

ಕೂಡಲೇ ಪರಿಹಾರ ವಿತರಿಸಲು ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಕಲಬುರಗಿಯಲ್ಲಿ ಇರುವ ಒಟ್ಟು 4 ನಾಕಾ ಬಂದಿ ಸ್ಥಳಗಳಲ್ಲಿ ಸುರಕ್ಷತೆ ಕ್ರಮಗಳು ಅಳವಡಿಸಲು ಕಾರ್ಮಿಕ ಇಲಾಖೆಗೆ ಸೂಚನೆ ನೀಡಬೇಕು ಹಾಗೂ ಸದರಿ ಕೊಲೆ ಪ್ರಕರಣವೂ ಅತ್ಯಂತ ಹೀನಾಯ ಮತ್ತು ದುಷ್ಕತ್ಯವಾಗಿದ್ದು, ಕೊಲೆ ಆರೋಪಿಗಳಿಗೆ ಅತ್ಯಂತ ಕಠೀಣ ಶಿಕ್ಷೆ ಆಗಬೇಕು ಮತ್ತು ಸಮಗ್ರ ತನಿಖೆ ಅವಶ್ಯಕತೆ ಇರುವುದರಿಂದ ಸದರಿ ಕಟ್ಟಡ ಕಾರ್ಮಿಕ ಮಹಿಳೆಯರ ಜೋಡಿ ಕೊಲೆ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಶಂಕರ್ ಕಟ್ಟಿ ಸಂಗಾವಿ, ಹಣಮಂತರಾಯ ಬಿ ಪೂಜಾರಿ, ಶಿವಲಿಂಗ ಹಾವನೂರ, ಮಲ್ಲಿಕಾರ್ಜುನ ಎಸ್. ಮಾಳಗೆ, ಸಂಜೂಕುಮಾರ್ ಗುತ್ತೇದಾರ, ನಾಗಪ್ಪ ರಾಯಚೂರಕರ್, ಪಾಸ್ವಾನ್ ಚಿಂಚನ್ಸೂರ್, ಶಿವಶರಣಪ್ಪ, ದಶರಥ ಹೇಮಸಿಂಗ, ಸಿದ್ದು ಇನ್ನಿತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ

ದೇಶದ ಸ್ವಾತಂತ್ರ್ಯಕ್ಕೆ ಸಾಹಿತಿ, ಬರಹಗಾರರ ಕೊಡುಗೆ ಅನನ್ಯವಾಗಿದೆ. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು,...

ಮೈಸೂರು | ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ; ಮೀಲಾದ್ ಘೋಷಣಾ ಜಾಥಾ

ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ 'ಸುನ್ನಿ ಯುವಜನ...

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

Download Eedina App Android / iOS

X