ಚಿತ್ರ ಪ್ರಸಂಗ | ನಾಗ್ಪುರದಲ್ಲಿ ಬಿಜೆಪಿ ಅಭ್ಯರ್ಥಿ ಮೋದಿಯೋ? ಗಡ್ಕರಿಯೋ?

Date:

Advertisements

2024ರ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇನ್ನೆರಡು ದಿನಗಳಲ್ಲಿ (ಏಪ್ರಿಲ್ 19) ನಡೆಯಲಿದೆ. ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಲ್ಲಿಯೂ ಅಂದು ಮತದಾನ ನಡೆಯಲಿದೆ. ಪ್ರಚಾರಕ್ಕೆ ಬುಧವಾರ (ಏ.17) ತೆರೆಬೀಳಲಿದೆ. ಹೀಗಾಗಿ, ಕ್ಷೇತ್ರದಲ್ಲಿ ಎಲ್ಲ ಪಕ್ಷಗಳ ಪ್ರಚಾರದ ಅಬ್ಬರ ತಾರಕ್ಕೇರಿದೆ.

‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನೆಯ (ಉದ್ದವ್ ಬಣ) ವಿಕಾಶ್‌ ಠಾಕ್ರೆ ಕಣದಲ್ಲಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪರ್ಧಿಸಿದ್ದಾರೆ. ನಾಗ್ಪುರ ಕ್ಷೇತ್ರದಲ್ಲಿ ಗಡ್ಕರಿ 3ನೇ ಬಾರಿಗೆ ಕಣಕ್ಕಿಳಿದಿದ್ದಾರೆ.

ನಾಗ್ಪುರದ ನಾನಾ ಪ್ರದೇಶಗಳಲ್ಲಿ ಬಿಜೆಪಿ ಪ್ರಚಾರ ಪೋಸ್ಟರ್‌ಗಳನ್ನು ರಾರಾಜಿಸುತ್ತಿವೆ. ಕುತೂಹಲಕಾರಿ ವಿಷಯವೆಂದರೆ, ಆ ಎಲ್ಲ ಪೋಸ್ಟರ್, ಫ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಮೋದಿ ಫೋಟೋಗಳೇ ತುಂಬಿವೆ. ಇಲ್ಲಿಯೂ ಗಡ್ಕಿಯವರ ಚಿತ್ರ ಕಾಣಿಸುತ್ತಲೇ ಇಲ್ಲ.

Advertisements

modi nagpur2

2014 ಮತ್ತು 2019ರಲ್ಲಿ ನಗ್ಪುರದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಗಡ್ಕರಿ, ಈಗ ಮತ್ತೆ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಆದರೂ, ಅವರ ತಮ್ಮ ಹೆಸರಿನಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬುದನ್ನು ಈ ಚಿತ್ರಗಳು ಹೇಳುತ್ತಿವೆ. ಇಡೀ ಕ್ಷೇತ್ರದಲ್ಲಿ ಗಡ್ಕರಿ ಅವರ ಚಿತ್ರಗಳು ಕಾಣದಾಗಿವೆ. ಎಲ್ಲೆಡೆ ಮೋದಿ ಚಿತ್ರ ಬೃಹದಾಕಾರದಲ್ಲಿ ರಾರಾಜಿಸುತ್ತಿವೆ.

modi nagpur6

ನಗ್ಪುರದಲ್ಲಿ ಹಾಕಲಾಗಿರುವ ಬಿಜೆಪಿಯ ಎಲ್ಲ ಪೋಸ್ಟರ್‌ಗಳಲ್ಲಿ’ಮೋದಿ ಗ್ಯಾರಂಟಿ’ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಂತಹ ಪೋಸ್ಟರ್‌ಗಳು ನಗರದ ಕಟೋಲ್ ನಾಗ್‌ಪುರ ರಸ್ತೆ, ಅಗ್ರಸೇನ್ ಚೌಕ್, ವಾರ್ಧಾ ರಸ್ತೆ ಹಾಗೂ ನಗರದ ಇತರ ಜನನಿಬಿಡ ಸ್ಥಳಗಳಲ್ಲಿ ಹೇರಳವಾಗಿ ಕಾಣಿಸುತ್ತಿವೆ.

modi nagpur1

ಗಡ್ಕರಿ ಅವರು ಭಾರೀ ಜನಪ್ರಿಯ ವ್ಯಕ್ತಿಯಾಗಿದ್ದರೂ ಕೂಡ ಅವರ ಚಿತ್ರಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಅವರ ಹೆಸರಿನಲ್ಲಿ ನಾಗ್ಪುರದಲ್ಲಿ ಪ್ರಚಾರವೂ ನಡೆಯುತ್ತಿರುವಂತೆ ಕಾಣಣುತ್ತಿಲ್ಲ. ಹೀಗಾಗಿ, ಕ್ಷೇತ್ರದ ಜನರಲ್ಲಿ ತಮ್ಮ ಕ್ಷೇತ್ರದಲ್ಲಿನ ಅಭ್ಯರ್ಥಿ ಯಾರು ಎಂಬ ಗೊಂದಲು ಸೃಷ್ಟಿಯಾಗಿದೆ.

modi nagpur3

“ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಿದ್ದಾರೆ? ನರೇಂದ್ರ ಮೋದಿಯೋ ಅಥವಾ ನಿತಿನ್ ಗಡ್ಕರಿಯೋ? ಎಂಬುದು ನಮಗೆ ಖಚಿತವಾಗಿ ತಿಳಿಯುತ್ತಿಲ್ಲ. ಗಡ್ಕರಿ ಅವರು 10 ವ‍ರ್ಷದಿಂದ ಸಂಸದರಾಗಿದ್ದರೂ, ಅವರು ಎಲ್ಲಿಯೂ ಕಾಣುತ್ತಿಲ್ಲ” ಎಂದು ಕ್ಷೇತ್ರದ ಮತದಾರರು ಹೇಳುತ್ತಿದ್ದಾರೆ.

modi nagpur5

ಚಿತ್ರ ಕೃಪೆ: ದಿ ವೈರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X