ಸಂಸದ ಪ್ರತಾಪ್ ಸಿಂಹಗೆ `ಮಂಗಳಾರತಿ’ ಮಾಡಿದ ವರುಣ ಮತದಾರರು

Date:

Advertisements
  • ‘ನಮ್ಮ ಸಂಸದರು ಈವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ’
  • ಮತದಾರರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪ್ರತಾಪ್ ಸಿಂಹ

ವರುಣ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಹೋದ ಕಡೆಗಳಲ್ಲೆಲ್ಲ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಯುವಕರು ಸಚಿವ ಸೋಮಣ್ಣ ಅವರಿಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್ ಸಿಂಹ ಅವರಿಗೆ ಕ್ಷೇತ್ರದ ಜನತೆ ‘ಮಂಗಳಾರತಿ’ ಮಾಡಿದೆ.

ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ವಿ ಸೋಮಣ್ಣ ಅವರನ್ನು ಅಖಾಡಕ್ಕಿಳಿಸಿದೆ. ಪ್ರತಾಪ್ ಸಿಂಹ ಜೊತೆಗೂಡಿದ ನಾಯಕರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ, ಪ್ರಚಾರದ ವೇಳೆ ಬಿಜೆಪಿ ನಾಯಕರು ಸ್ಥಳೀಯರಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ, ಮುಖಭಂಗ ಅನುಭವಿಸುತ್ತಿದ್ದಾರೆ.

ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಪ್ರತಾಪ್ ಸಿಂಹ ಅವರಿಗೆ ಕ್ಷೇತ್ರದ ಗ್ರಾಮವೊಂದರ ಜನರು ‘ಫುಲ್ ಕ್ಲಾಸ್‌’ ತೆಗೆದುಕೊಂಡಿದ್ದಾರೆ. “ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಅಂತೀರಲ್ವಾ..? ಸಿದ್ದರಾಮಯ್ಯ ಹತ್ರ ಕುಳಿತುಕೊಳ್ಳಿ ಆಗ ನಿಮಗೆ ತಿಳಿಯುತ್ತೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisements

ವರುಣ ಜನರ ಪ್ರಶ್ನೆಗೆ ಪ್ರತಾಪ್ ಸಿಂಹ ಕಕ್ಕಾಬಿಕ್ಕಿಯಾಗಿದ್ದಾರೆ. ಎಲ್ಲರಿಗೂ ಸಮಜಾಯಿಷಿ ಕೊಡಲು ಪ್ರತಾಪ್ ಸಿಂಹ ವರುಣ ಜನರ ಮುಂದೆ ಪರದಾಡಿದ್ದಾರೆ.

“ಅಕ್ಕಿ ನಮ್ಮದು ಚೀಲ ಮಾತ್ರ ಸಿದ್ದರಾಮಯ್ಯ ಅವ್ರದ್ದು ಅಂತೀರಾ. ಈಗ ಯಾಕೆ ಅಕ್ಕಿ ಕಡಿಮೆ ಕೊಡ್ತಿದ್ದೀರಾ. ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ” ಎಂದು ತರಾಟೆ ತೆಗೆದುಕೊಂಡಿದ್ದಾರೆ.

“ಮಹದೇವಪ್ಪ ವಿರುದ್ಧ ಮಾತಾಡ್ತೀರಾ. ರಸ್ತೆಗಳ ರಾಜ ಅಂತೀರಾ..ಬರೀ ಸುಳ್ಳು ಹೇಳ್ತೀರಾ ನಿಮ್ಮ ಕೊಡುಗೆ ಏನ್ರಿ?” ಎಂದು ಮತದಾರರು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ವರುಣಾದಲ್ಲಿ ಸೋಮಣ್ಣಗೆ ಬಿಜೆಪಿ ಯುವಕರ ಕ್ಲಾಸ್‌; ಸಂಧಾನಕ್ಕೆ ನಿಂತ ಪ್ರತಾಪ್‌ ಸಿಂಹಗೂ ತರಾಟೆ

ಈ ಮೊದಲೂ ಛೀಮಾರಿ ಹಾಕಿಸಿಕೊಂಡಿದ್ದ ಪ್ರತಾಪ್ ಸಿಂಹ

ಕ್ಷೇತ್ರದೊಳಗೆ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಸಚಿವ ಸೋಮಣ್ಣರನ್ನು ಅಡ್ಡಗಟ್ಟಿದ ಸ್ಥಳೀಯ ಬಿಜೆಪಿ ಯುವಕರ ಗುಂಪೊಂದು ಮೂಲಸೌಕರ್ಯದ ಬೇಡಿಕೆ ಇಟ್ಟು ಮುಜುಗರಕ್ಕೀಡು ಮಾಡಿತ್ತು.

ಯುವಕರ ಮಾತಿನಿಂದ ಸಚಿವರು ಕಸಿವಿಸಿಗೊಂಡ ವೇಳೆ ಮಧ್ಯೆ ಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ ಇವೆಲ್ಲದರ ಬಗ್ಗೆ ಮಾತನಾಡೋಣ ಎಂದು ಹೇಳುವ ವೇಳೆ ಮತ್ತೆ ಅವರನ್ನೂ ಪ್ರಶ್ನಿಸಿದ ಯುವಕರು ನಮ್ಮ ಸಂಸದರು ಎನಿಸಿಕೊಂಡ ನೀವು ನಮಗೆ ಮಾಡಿಕೊಟ್ಟಿರುವ ಸಾಧನೆಗಳೇನು ಅನ್ನೋದನ್ನ ಹೇಳ್ತಿರಾ ಎಂದು ಕೇಳಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X