ಚುನಾವಣೆ 2023 | ಹಾಸನ ಜಿಲ್ಲೆಯಲ್ಲಿ 73 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Date:

Advertisements
  • ಉಮೇದುದಾರಿಕೆ ಹಿಂಪಡೆದ 13 ಅಭ್ಯರ್ಥಿಗಳು
  • ಕಣದಲ್ಲಿ 69 ಪುರುಷರು, 4 ಮಹಿಳಾ ಅಭ್ಯರ್ಥಿಗಳು

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಏ. 24 ಕೊನೆಯದಿನವಾದ ಕಾರಣ ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಿಂದ 13 ಅಭ್ಯರ್ಥಿಗಳು ತಮ್ಮ ಉಮೇದುದಾರಿಕೆ ಹಿಂಪಡೆದಿದ್ದಾರೆ.

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಕಣದಲ್ಲಿ ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಿಂದ ಒಟ್ಟು 73 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅದರಲ್ಲಿ 69 ಮಂದಿ ಪುರುಷರು, ನಾಲ್ಕು ಮಹಿಳಾ ಅಭ್ಯರ್ಥಿಗಳು ಚುನಾವಣ ಕಣದಲ್ಲಿ ಸ್ಪರ್ಧಿಸಲಿದ್ದಾರೆ.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು, ಏಳು ಅಭ್ಯರ್ಥಿಗಳು ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬೇಲೂರಿನಿಂದ 12 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯಲಿದ್ದಾರೆ. ಹೊಳೆನರಸೀಪುರ ಕ್ಷೇತ್ರದಲ್ಲಿ 8, ಅರಕಲಗೂಡು ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಹಾಗೂ ಹಾಸನದಿಂದ 9 ಅಭ್ಯರ್ಥಿಗಳು ಸೇರಿದಂತೆ ಒಟ್ಟು 73 ಅಭ್ಯಥಿಗಳು ಚುನಾವಣಾ ಕಣದಲ್ಲಿರಲಿದ್ದಾರೆ.

Advertisements

ಕ್ಷೇತ್ರವಾರು ಅಭ್ಯರ್ಥಿಗಳ ವಿವರ

  • ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂ ಜೆ ಗೌಡ, ಜೆಡಿಎಸ್ ಎಚ್ ಪಿ ಸ್ವರೂಪ್, ಕಾಂಗ್ರೆಸ್ ಬಿ ಕೆ ರಂಗಸ್ವಾಮಿ, ಎಎಪಿಯಿಂದ ಎ ಟಿ ಯೋಗೀಶ್, ಬಹುಜನ ಸಮಾಜ ಪಾರ್ಟಿಯ ಎಚ್ ಬಿ ಮಲ್ಲಯ್ಯ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ರಮೇಶ್ ವಿ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಬಿ ಎಂ ಸ್ವರೂಪ್, ಪಕ್ಷೇತರ ಅಭ್ಯರ್ಥಿಗಳಾಗಿ ಆರ್ ಜಿ ಸತೀಶ್, ಎಚ್ ವಿ ಸ್ವಾಮಿ ಸೇರಿ ಒಟ್ಟು ಒಂಭತ್ತು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
  • ಶ್ರವಣಬೆಳಗೊಳ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸಿ ಎನ್ ಬಾಲಕೃಷ್ಣ, ಕಾಂಗ್ರೆಸ್ ಎಂ ಎ ಗೋಪಾಲಸ್ವಾಮಿ, ಬಿಜೆಪಿ ಅರ್ಭ್ಯಥಿಯಾಗಿ ಸಿ ಆರ್ ಚಿದಾನಂದ, ಎಎಪಿಯಿಂದ ಬಿ ಎಸ್ ಮಂಜೇಗೌಡ, ಬಿಎಸ್‌ಪಿ ಆರ್ ರಾಜು, ಉತ್ತಮ
    ಪ್ರಜಾಕೀಯ ಪಕ್ಷದ ಟಿ ಕೆ ಕಿರಣ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜೆ ಕೆ ಪವಿತ್ರ, ಪೂರ್ವಾಂಚಲ್ ಮಹಾ ಪಂಚಾಯತ್ ಪಕ್ಷದ ಎಚ್ ಡಿ ರೇವಣ್ಣ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಶಿವಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಪಿ ಎನ್ ನಟರಾಜ, ಎಚ್ ಎಂ ರವಿ, ಎಂ ಸುಬ್ರಹ್ಮಣ್ಯ ಸೇರಿ ಒಟ್ಟು 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದಿದ್ದಾರೆ.
  • ಬೇಲೂರು: ಕ್ಷೇತ್ರದಲ್ಲಿ ಬಿಜೆಪಿಯಿಂದ ಎಚ್ ಕೆ ಸುರೇಶ್, ಕಾಂಗ್ರೆಸ್ ಬಿ.ಶಿವರಾಮ್, ಜೆಡಿಎಸ್ ಕೆ ಎಸ್ ಲಿಂಗೆಶ್, ಆಮ್ ಆದ್ಮಿ ಪಕ್ಷದ ಎಚ್ ಪಿ ಪರ್ವತೇಗೌಡ, ಬಹುಜನ ಸಮಾಜ ಪಾರ್ಟಿಯ ಡಿ ಎಸ್ ಗಂಗಧಾರ್, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಸಿ ಎನ್ ಆದೇಶ್, ಆರ್ ಪಿ ಐ ಕರ್ನಾಟಕ ಪಕ್ಷದ ಡಿ ಡಿ ಲೊಕೇಶ್ ಹಾಗು ಪಕ್ಷೇತರ ಅಭ್ಯರ್ಥಿಗಳಾಗಿ ದಿನೇಶ್, ಎನ್ ಎಂ ಪರಮೇಶ್, ಎಚ್ ಸಿ ಪ್ರದೀಪ್, ಮಲ್ಲಿಕಾರ್ಜುನ, ಮಹೇಶ್ ಸೇರಿ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  • ಅರಸೀಕೆರೆ: ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ ವಿ ಟಿ ಬಸವರಾಜು, ಕಾಂಗ್ರೆಸ್‌ನಿಂದ ಕೆ ಎಂ ಶಿವಲಿಂಗೇಗೌಡ, ಜೆಡಿಎಸ್ ಎನ್ ಆರ್ ಸಂತೋಷ್, ಉತ್ತಮ ಪ್ರಜಾಕೀಯ ಪಕ್ಷದ ಎಸ್ ಕೆ ನವೀನ್, ಕರ್ನಾಟಕ ರಾಷ್ಟ್ರೀಯ ಸಮಿತಿ ಬಿ ಎಂ ಉಮೆಶ್, ಲೋಕಶಕ್ತಿ ಪಕ್ಷದ ಹೊಳೆಯಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಡಿ ಕಿಶೋರ್ ಕುಮಾರ್ ಸೇರಿ ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  • ಹೊಳೆನರಸೀಪುರ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶ್ರೇಯಸ್ ಎಂ ಪಟೇಲ್, ಜೆಡಿಎಸ್ ಎಚ್‌ ಡಿ ರೇವಣ್ಣ, ಬಿಜೆಪಿ ಜಿ ದೇವರಾಜೇಗೌಡ, ಆಮ್ ಆದ್ಮಿ ಪಕ್ಷದ ಗೀತಾ, ಬಹುಜನ ಸಮಾಜ ಪಾರ್ಟಿಯ ಎಚ್ ಎಸ್ ತಾರೇಶ್, ಕರ್ನಾಟಕ ರಾಷ್ಟ್ರೀಯ ಪಕ್ಷದ ಬಿ ಕೆ ನಾಗರಾಜ, ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಎಚ್ ಡಿ ರೇವಣ್ಣ ಹಾಗೂ ಪಕ್ಷೇತರ ಅಭ್ಯರ್ಥಿ ಡಿ ಆರ್ ರಂಗಸ್ವಾಮಿ ಸೇರಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.
  • ಅರಕಲಗೂಡು: ಬಿಜೆಪಿಯಿಂದ ಎಚ್ ಯೋಗಾರಮೇಶ್, ಕಾಂಗ್ರೆಸ್ ಪಕ್ಷದ ಎಚ್ ಪಿ ಶ್ರೀಧರ್‌ಗೌಡ, ಜೆಡಿಎಸ್ ಎ ಮಂಜು, ಆಮ್ ಆದ್ಮಿ ಪಕ್ಷದ ಜಿ ಟಿ ಜವರೇಗೌಡ, ಬಿಎಸ್‌ಪಿಯ ಎ ಪಿ ಹರೀಶ್, ಕೆಆರ್‌ಎಸ್‌ನ ಕೇಶವಮೂರ್ತಿ ಎಚ್ ಟಿ, ಭಾರತೀಯ ಡಾ. ಬಿ ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಮಂಜುನಾಥ, ಉತ್ತಮ ಪ್ರಜಾಕೀಯ ಪಕ್ಷದ ಜಿ ಆರ್ ಶಿವರಾಜ್, ಪಕ್ಷೇತರ ಅಭ್ಯರ್ಥಿಗಳಾಗಿ ಎಂ ಟಿ ಕೃಷ್ಣೇಗೌಡ, ಪುಟ್ಟರಾಜ, ಬಿ ಆರ್ ಪುನೀತ್, ವಿಜಯ ಭಾರತಿ, ಎಂ ಸಿ ವಿಶ್ವನಾಥ, ಎಂ ಆರ್ ಶಿವಣ್ಣ, ಶ್ರೀನಿವಾಸ್ ಸೇರಿ ಒಟ್ಟು 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
  • ಸಕಲೇಶಪುರ: ಬಿಜೆಪಿಯಿಂದ ಸಿಮೆಂಟ್ ಮಂಜು (ಎಸ್ ಮಂಜುನಾಥ) ಕಾಂಗ್ರೆಸ್‌ನಿಂದ ಮುರಳಿ ಮೋಹನ್, ಜೆಡಿಎಸ್ ಎಚ್ ಕೆ ಕುಮಾರಸ್ವಾಮಿ, ಆಮ್ ಆದ್ಮಿ ಪಕ್ಷದ ಕೆ ಎಸ್ ಪವನ್ ಕುಮಾರ್, ಬಿಎಸ್‌ಪಿಯಿಂದ ಡಿ ಶಿವಮ್ಮ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಬಿ ವಿ ಪ್ರದೀಪ್, ಕರುನಾಡ ಪಾರ್ಟಿಯ ಎಚ್ ಎಸ್ ಕುಮಾರಸ್ವಾಮಿ, ಉತ್ತಮ ಪ್ರಜಾಕೀಯ ಪಕ್ಷದ ಪ್ರತಾಪ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಜಿ ಸಿ ರವಿ, ಎಂ ಆರ್ ವೇಣು ಸೇರಿ ಒಟ್ಟು 10 ಮಂದಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ನಾಮಪತ್ರ ಹಿಂಪಡೆಯದಂತೆ ಕೃಷ್ಣೇಗೌಡ ಬೆಂಬಲಿಗರ ಒತ್ತಾಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X