ಮೈಸೂರು ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ

Date:

Advertisements
  • ಮೂರು ತಲೆಮಾರುಗಳ ಇತಿಹಾಸ ಹೊಂದಿರುವ ಮೈಲಾರಿ ಹೋಟೆಲ್
  • ಸಾಂಪ್ರದಾಯಿಕ ರುಚಿಗೆ ಹೆಸರಾಗಿರುವ ಮೈಸೂರಿನ ದೋಸೆ ಹೋಟೆಲ್

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ, ಪ್ರಿಯಾಂಕಾಗಾಂಧಿ ತಮ್ಮ ಅಣ್ಣ ರಾಹುಲ್ ಗಾಂಧಿ ಸರಳತೆ ಮೆರೆದು ಸುದ್ದಿಯಾದರು.

ಮೈಸೂರಿನ ಪ್ರಸಿದ್ದ ವಿನಾಯಕ ಮೈಲಾರಿ ಹೋಟೆಲ್‌ಗೆ ತೆರಳಿದ ಪ್ರಿಯಾಂಕಾ ಅಲ್ಲಿ ಜನಮನ್ನಣೆಯ ಮಸಾಲೆ ದೋಸೆ ಸವಿದರು.

ದೋಸೆ ರುಚಿ ನೋಡುವ ಮೊದಲು ಹೋಟೆಲ್ ಅಡುಗೆ ಕೋಣೆ ಹೊಕ್ಕ ಇಂದಿರಮ್ಮನ ಮೊಮ್ಮಗಳು ಅಲ್ಲಿ ದೋಸೆ ಕೈ ಹಿಡಿದು ಕಾದ ಹೆಂಚಿನ ಮೇಲೆ ಹಿಟ್ಟು ಸುರಿದು ತಾವೇ ದೋಸೆ ಮಾಡಿದರು.

Advertisements

ಜೊತೆ ತಮ್ಮ ಕೈರುಚಿಯ ದೋಸೆಯನ್ನು ಜೊತೆಯಲ್ಲಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮಹಿಳಾ ಯುವ ಮುಖಂಡೆ ಐಶ್ವರ್ಯ ಮಂಚನಹಳ್ಳಿಯವರಿಗೂ ಹಂಚಿದರು.ಮೈಲಾರಿ ಹೊಟೇಲ್‌

ಪ್ರಿಯಾಂಕಾ ಗಾಂಧಿಯವರ ಈ ನಡೆ ಹೋಟೆಲ್ ನವರನ್ನೂ ಒಳಗೊಂಡಂತೆ ಎಲ್ಲರ ಮನಸೂರೆಗೊಂಡಿತು. ಅವರ ಸರಳತೆಯನ್ನು ಜನ ಕೊಂಡಾಡಿದರು. ತಿಂಡಿ ವೇಳೆ ತಮಗೆ ಜೊತೆಯಾದ ಕೆಲ ಮಕ್ಕಳೊಂದಿಗೂ ಪ್ರಿಯಾಂಕ ಕೆಲಕಾಲ ಸಮಯ ಕಳೆದರು.

ಹೊರಡುವ ಮುನ್ನ ಹೋಟೆಲ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರು, ನಾನಿಲ್ಲಿ ದೋಸೆ ಜೊತೆಗೆ ಇಡ್ಲಿಯನ್ನೂ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು.

ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ಊರಿಗೆ ಹೋದ ಮೇಲೆ ನಾನು ಇದನ್ನು ಟ್ರೈ ಮಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ರೌಡಿಶೀಟರ್‌ ಮಣಿಕಂಠ ಪರ ಮೋದಿ ಪ್ರಚಾರ; ಮೋದಿ-ಅಮಿತ್ ಶಾಗೆ ಹಳೆ ಗುಜರಾತ್ ನೆನಪಾಗಿರಬೇಕು ಎಂದ ಜೆಡಿಎಸ್‌

ಈ ಹಿಂದೆ ರಾಜ್ಯದಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಹಾಗೂ ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡ ಇದೇ ರೀತಿ ಸರಳತೆ ಮೆರೆದಿದ್ದರು.

ರಸ್ತೆ ಬದಿಯ ಗೂಡಂಗಡಿಗಳಲ್ಲಿ ಬಜ್ಜಿ ಚಹಾ ಸೇವನೆ, ಹೊಲಕ್ಕೆ ತೆರಳಿ ಕಬ್ಬು, ಸೌತೇಕಾಯಿ ಕಿತ್ತು ತರುವ, ಜನಸಾಮಾನ್ಯರೊಂದಿಗೆ ಬೆರೆತು ತೋರಿಸಿದ್ದರು.

ಮೈಲಾರಿ ದೋಸೆ :

80 ವರ್ಷ ಹಳೆಯದಾದ ವಿನಾಯಕ ಮೈಲಾರಿ ದೋಸೆ ಹೋಟೆಲ್ ಮೈಸೂರಿನಲ್ಲಿದೆ. ಸಾಂಪ್ರದಾಯಿಕ ಸೌದೇ ಒಲೆ ದೋಸೆಗಳಿಗೆ ಇದು ಇಂದಿಗೂ ಹೆಸರುವಾಸಿ. ವಿದೇಶಗಳಲ್ಲೂ ಇದರ ಸ್ವಾದ ಪಸರಿಸಿರುವುದು ಇಲ್ಲಿನ ಶುಚಿ ರುಚಿಗೆ ಸಿಕ್ಕ ಮನ್ನಣೆ.

bfe5ebf00de2b670976597f37a6d2b77?s=150&d=mp&r=g
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X