ಹಿಂದಿ ಬದಲು ತಮಿಳು ಮಾತಾಡುವಂತೆ ಪತ್ನಿಗೆ ಹೇಳಿದ ತಾಯ್ನುಡಿ ಪ್ರೇಮಿ ಎ.ಆರ್‌ ರೆಹಮಾನ್‌

Date:

Advertisements

ʼವಿಕಟನ್‌ʼ ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ದಂಪತಿ

ಪತ್ನಿಗೆ, ದಯವಿಟ್ಟು ತಮಿಳಿನಲ್ಲೇ ಮಾತನಾಡು ಹಿಂದಿ ಬೇಡ ಎಂದ ರೆಹಮಾನ್‌

ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಹಿಂದಿ ಬದಲು ತಮಿಳಿನಲ್ಲಿ ಮಾತಾಡುವಂತೆ ತಮ್ಮ ಪತ್ನಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

Advertisements

ವಿಕಟನ್ ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮೊಂದಿಗೆ ಸ್ಮರಣ ಫಲಕ ಸ್ವೀಕರಿಸಿ ಕೆಲ ಮಾತುಗಳನ್ನು ಆಡುವಂತೆ ಪತ್ನಿ ಸಾಯಿರಾ ಬಾನು ಅವರನ್ನು ವೇದಿಕೆಗೆ ಕರೆಯುತ್ತಾರೆ ರೆಹಮಾನ್. ಪತಿ ಕೃತಜ್ಞತೆ ಸಲ್ಲಿಸಿ ತಮ್ಮ ಜೊತೆ ಬರುವಂತೆ ಕರೆದಾಗ ಭಾವುಕರಾಗುವ ಸಾಯಿರಾ ವೇದಿಕೆಯೆಡೆಗೆ ನಡೆಯುತ್ತಾರೆ. ಟ್ರೋಫಿಯನ್ನು ತಮಗೆ ಒಪ್ಪಿಸಿದ ಪತಿಯನ್ನು ಆಲಿಂಗಿಸುತ್ತಾರೆ. ಕೆಲ ಮಾತುಗಳನ್ನು ಆಡುವಂತೆ ಪತ್ನಿಗೆ ಹೇಳುವ ರೆಹಮಾನ್, ಆಕೆ ಮೈಕ್‌ನತ್ತ ತೆರಳುತ್ತಿದ್ದಂತೆ ‘ದಯವಿಟ್ಟು ತಮಿಳಿನಲ್ಲೇ ಮಾತನಾಡು, ಹಿಂದೀ ಬೇಡ’ ಎನ್ನುತ್ತಾರೆ.

ಸಾಯಿರಾ ಕೊಂಚ ತಬ್ಬಿಬ್ಬಾಗಿ “ಸ್ಸಾರೀ, ನನಗೆ ತಮಿಳಿನಲ್ಲಿ ಸರಾಗವಾಗಿ ಮಾತಾಡಲು ಬರುವುದಿಲ್ಲ, ದಯಮಾಡಿ ಕ್ಷಮಿಸಿ. ಅವರ ಕೊರಳು ನನ್ನ ಅಚ್ಚುಮೆಚ್ಚು. ಹೀಗಾಗಿ ನಾನು ‘ಸೂಪರ್ ಎಕ್ಸೈಟ್’ ಆಗಿದ್ದೇನೆ. ಅವರ (ರೆಹಮಾನ್) ದನಿಯೊಂದಿಗೆ ಪ್ರೇಮಕ್ಕೆ ಬಿದ್ದೆ ನಾನು. ಇಷ್ಟು ಮಾತ್ರ ಹೇಳಬಲ್ಲೆ” ಎಂದು ಮಾತು ಮುಗಿಸುತ್ತಾರೆ.

ಈ ಸುದ್ದಿ ಓದಿದ್ದೀರಾ? ‘ಅಗ್ನಿಸಾಕ್ಷಿ’ ಧಾರವಾಹಿ ನಟ ಸಂಪತ್ ಜಯರಾಮ್‌ ಆತ್ಮಹತ್ಯೆ

ರೆಹಮಾನ್ ತಮಿಳು ಭಾಷೆಯ ಪ್ರತಿಪಾದಕರು. ಭಿನ್ನ ರಾಜ್ಯಗಳ ಜನ ಪರಸ್ಪರ ಭೇಟಿಯಾದಾಗ ಇಂಗ್ಲಿಷ್ ಬದಲು ಹಿಂದಿಯಲ್ಲಿ ಮಾತಾಡಬೇಕೆಂದು ಗೃಹಮಂತ್ರಿ ಅಮಿತ್ ಶಾ ಕಳೆದ ವರ್ಷ ಅಪ್ಪಣೆ ಕೊಡಿಸಿದ್ದಾಗ ರೆಹಮಾನ್ ಅವರು ಮನೋನ್ಮಣಿಯಂ ಸುಂದರಂ ಪಿಳ್ಳೈ ಬರೆದು ಎಂ.ಎಸ್.ವಿಶ್ವನಾಥನ್ ಸಂಗೀತಕ್ಕೆ ಅಳವಡಿಸಿದ್ದ ತಮಿಳು ನಾಡಗೀತೆಗೆ ಸಂಬಂಧಿಸಿದ ತಮಿಳು ತಾಯಿಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರತಿಕ್ರಿಯಿಸಿದ್ದರು.

ರೆಹಮಾನ್ ಸಾಯಿರಾ 1995ರಲ್ಲಿ ವಿವಾಹವಾಗಿದ್ದರು. ರೆಹಮಾನ್ ತಾಯಿಯವರೇ ಸಾಯಿರಾ ಅವರನ್ನು ಹುಡುಕಿ ಮದುವೆ ಏರ್ಪಾಡು ಮಾಡಿದ್ದರು. ಹೆಚ್ಚು ತೊಂದರೆ ಕೊಡದೆ, ಸ್ಫೂರ್ತಿ ತುಂಬುವ ವಧುವನ್ನು ಹುಡುಕಿಕೊಡುವಂತೆ ತಾಯಿಯನ್ನು ಕೇಳಿದ್ದರಂತೆ ರೆಹಮಾನ್.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X