- ‘ಮಲ್ಲಿಕಾರ್ಜುನ ಖರ್ಗೆ ಅವರಿಗೆ 50 ವರ್ಷಗಳ ರಾಜಕೀಯ ಅನುಭವವಿದೆ‘
- ‘ಡಾ. ಕೆ ಸುಧಾಕರ್ ರಾಜಕಾರಣದಲ್ಲಿ ನೆನ್ನೆ ಮೊನ್ನೆ ಕಣ್ಣು ಬಿಟ್ಟಿದ್ದಾರೆ‘
ಕಾಂಗ್ರೆಸ್ನಿಂದ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿ ನಂತರ ಸ್ವಾರ್ಥಕ್ಕಾಗಿ ಬಿಜೆಪಿಗೆ ಸೇರಿದ ಡಾ. ಕೆ ಸುಧಾಕರ್ಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಮಾಜಿ ಸಚಿವ ಎಂ ಆರ್ ಸೀತರಾಮ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕ್ಷೇತ್ರದಲ್ಲಿ ದುರಂಕಾರದ ಪರಮಾಧಿಕಾರ ಮಿತಿ ಮೀರಿದ್ದು, ರಾಜ್ಯದ ಉದ್ದಗಲಕ್ಕೂ ಭ್ರಷ್ಟಾಚಾರದ ಪರಮಾವಧಿ ಇದೆ” ಎಂದು ಆರೋಪಿಸಿದ್ದಾರೆ.
“ಕ್ಷೇತ್ರದಲ್ಲಿ ಕೇವಲ ಪ್ರಭಾವಿಗಳಿಗೆ ಮಾತ್ರ ಅನುಕೂಲ ಸಿಕ್ಕಿದೆ. ಕಾಲಚಕ್ರ ಬದಲಾಗುತ್ತಿರುತ್ತದೆ, ಚುನಾವಣೆಯ ನಂತರ ಸುಧಾಕರ್ ಎಲ್ಲಿರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ” ಎಂದಿದ್ದಾರೆ.
“ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ಗೆ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಸರ್ಕಾರದ ಮೇಲಿನ ಆಕ್ರೋಶವನ್ನು ಜನ ಹೊರ ಹಾಕುತ್ತಿದ್ದಾರೆ. ಇಲ್ಲಿನ ಜಾತಿಗಳನ್ನು ಒಡೆದು ಅಳುವ ಕೆಲಸ ಮೀತಿ ಮಿರಿದೆ. ಜನಪ್ರತಿನಿಧಿ ನಯ-ವಿನಯದಿಂದ ನಡೆದುಕೊಂಡಾಗ ಸಮಾಜದಲ್ಲಿ ಗೌರವ ಸಿಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ: ಸಂಸದ ಮನೋಜ್ ತಿವಾರಿ
“ರಾಜಕಾರಣದಲ್ಲಿ ಸುಧಾಕರ್ ನೆನ್ನೆ ಮೊನ್ನೆ ಕಣ್ಣು ಬಿಟ್ಟಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ಅವರ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ. ಬಿಜೆಪಿ ಸೇರಿ ಮೂರು ವರ್ಷಗಳು ಕಳೆದಿದೆ. ರಾಜಕಾರಣದಲ್ಲಿ ದೊಡ್ಡ ರಾಜಕಾರಣಿಯೇನಲ್ಲ. ಸಣ್ಣ ಮಟ್ಟದಲ್ಲೇ ದೊಡ್ಡ ಮಟ್ಟದ ರೀತಿ ಮಾತನಾಡಿದರೆ ಏನು ಕಥೆ? ಜನರು ಜನಪ್ರತಿನಿಧಿಯಾಗಿ ಒಪ್ಪಿಕೊಳ್ಳಲು ಸಾಧ್ಯನ, ಹಿರಿಯರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು” ಎಂದು ಸಲಹೆ ನೀಡಿದ್ದಾರೆ.