ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಸಂಕಟಗಳ ಹಿಡಿಗನ್ನಡಿ

Date:

Advertisements

‘ಒಂದು’ ಕೇಂದ್ರವನ್ನು ನಿರಾಕರಿಸಿ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡಿಸಿಕೊಳ್ಳುವ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಪರಂಪರೆ ಸಂಕಟಗಳ ಸರಮಾಲೆಯನ್ನೇ ನಮ್ಮ ಮುಂದಿಡುತ್ತದೆ. ಒಂದು ಮೂಳೆ ಪ್ರಸಂಗದಿಂದ ಆರಂಭವಾಗುವ ನಾಟಕ ನೋಡುಗರನ್ನು ಹಾಸ್ಯ ಭರಿತ ಸಂಕಟಗಳಿಂದ ತೊಯ್ಯುಸುತ್ತದೆ. ದಲಿತರಿಗೆ ಹಳ್ಳಿಗಳು ಶೋಷಣೆಯ ಕೂಪಗಳು ಎಂಬುವುದರಿಂದ ಆರಂಭವಾಗಿ ನಗರಗಳಲ್ಲಿಯೂ ಅದೇ ಸರ್ಕಲ್ ನಲ್ಲಿ ಬದುಕಬೇಕಾದ ಆಧುನಿಕ ದಲಿತ ಸಂಕಟಗಳನ್ನು ಅನಾವರಣ ಮಾಡುವ ಮಾಡುವ ಬಾಬ್ ಮಾರ್ಲಿ ಕನ್ನಡ ನಾಟಕ ರಂಗ ಭೂಮಿಗೆ ಅಪೂರ್ವವಾದ ಕೊಡುಗೆ.

ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಅಲಕ್ಷಿತ ಪರಂಪರೆಗಳ ಸಂಕಟಗಳನ್ನು ರಂಗಭೂಮಿಯ ಮೇಲೆ ತಂದು ಆಂದೋಲನವನ್ನೇ ರೂಪಿಸಿದ್ದ ಸಿಜಿಕೆಯ ಪರಂಪರೆಯ ಕೊಂಡಿ,ಮತ್ತಷ್ಟು ಆಧುನಿಕ ಪರಿಭಾಷೆಯಲ್ಲಿ ತಳಮೂಲ ಪರಂಪರೆಗಳ ತಿಳುವಳಿಕೆಗಳ ನೆನಪುಗಳನ್ನು ರಂಗದ ಮೇಲೆ ಯಶಸ್ವಿಯಾಗಿ ತರುತ್ತಿರುವ ಕೆ. ಪಿ.ಲಕ್ಷ್ಮಣ್ ಮತ್ತು ವಿ.ಎಲ್.ನರಸಿಂಹಮೂರ್ತಿ ಕನ್ನಡ ರಂಗಭೂಮಿಯ ಭರವಸೆಯ ನಾಟಕಕಾರರು ಮತ್ತು ನಿರ್ದೇಶಕರು.

WhatsApp Image 2024 09 01 at 10.40.04 AM 4

ಮಾಂಸಾಹಾರ ಮತ್ತು ಮಾಂಸ ತಿನ್ನುವವರ ಆಚರಣೆಗಳೇ ಶೋಷಣೆಗೆ ಮೂಲ ಕಾರಣ ಎಂದು ಭೀಗುವ ಪ್ರಭೂತಿಗಳಿಗೆ ಅವೇ ತಳಮೂಲ ನೆಲಮೂಲ ಸಂಸ್ಕೃತಿಯ ಐಡೆಂಟಿಟಿ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸುವ ನಾಟಕ. ಮಿಣುಕು ಹುಳು,ಉತ್ತರಾಣಿ, ತುಂಬೆ, ಎಕ್ಕೆ ಇವುಗಳ ನೆನಪುಗಳ ಮೂಲಕ ಜೀವಂತ ಸಂಸ್ಕೃತಿ ಅನಾವರಣ ಈ ನಾಟಕದ ಹೆಗ್ಗುರುತು.
ತಾಯಿ ಮಗಳನ್ನು ಇಬ್ಬರನ್ನು ಕೂಡವ ಹೊರ ಸಂಸ್ಕೃತಿಯೊಂದರ ಸಮುದಾಯಕ್ಕೆ ಬೀಜಗಳನ್ನು ಕಿತ್ತು ಕೈಗೆ ಕೊಟ್ಟ ಪರಂಪರೆಯೊಂದರ ದಾಖಲೆ ಈ ನಾಟಕದ ಯಶಸ್ವಿಯಲ್ಲೊಂದು.

Advertisements
WhatsApp Image 2024 09 01 at 10.40.04 AM 5

ಮಾರಮ್ಮನ ಪುರಾಣ ಪ್ರಸಂಗವನ್ನು ಅತ್ಯಂತ ಆರ್ದ್ರವಾಗಿ ನಿರೂಪಿಸಿದ, ಕ್ರೌರ್ಯಕ್ಕೆ ತುತ್ತಾದ ಪರಂಪರೆಯ ವಾರಸುದಾರರನ್ನೇ ಅದೇ ಕ್ರೌರ್ಯದಲ್ಲಿ ಮಿಂದೇಳುವಂತೆ ಮಾಡುವ ಬ್ರಾಹ್ಮಣ್ಯ ಪರಂಪರೆಯ ಚೋಧ್ಯವನ್ನು ಈ ನಾಟಕ ಅತ್ಯಂತ ಧಾರಣವಾಗಿ ಮುಂದಿಡುತ್ತದೆ. ಝಮೈಕಾ ದೇಶದ ಸಂಗೀತಗಾರ ಬಾಬ್ ಮಾರ್ಲಿಯ ಜೀವನ ವೃತ್ತಾಂತವನ್ನು ಹೋಲುವ ಕನ್ನಡ ದಲಿತ ಪರಂಪರೆ ನೆನಪುಗಳ ಮೂಲಕ ನೋಡುವ ಈ ನಾಟಕ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ.

ಈ ನಾಟಕವನ್ನು ತುಮಕೂರು ಜನಕ್ಕೆ ತಲುಪಿಸಿ ದ ಡ್ಯಾಗೇರಳ್ಳಿ ಮತ್ತು ತಂಡಕ್ಕೆ ನಮಸ್ಕಾರ

– ಡಾ. ನಾಗಭೂಷಣ ಬಗ್ಗನಡು
ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ
.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಕೇಶಿಪ್ ರಸ್ತೆಗೆ ಟೋಲ್ ನಿರ್ಮಾಣ ವಿರೋಧಿಸಿ ರೈತಸಂಘದಿಂದ ಪ್ರತಿಭಟನೆ

ಬಹುತೇಕ ರೈತ ವರ್ಗವೇ ಬಳಸುವ ಸಿ.ಎಸ್.ಪುರ ಕೇಶಿಪ್ ರಸ್ತೆಗೆ ದಿಢೀರ್...

ಗುಬ್ಬಿ | ನವಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ : ಪೂರ್ವಭಾವಿ ಸಭೆಯಲ್ಲಿ ಚಿಂತನೆ

ಗುಬ್ಬಿ ತಾಲ್ಲೂಕು ಮಟ್ಟದ 6 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ...

ಗುಬ್ಬಿ | ನೂತನ ಧ್ವಜಕಟ್ಟೆ ನಿರ್ಮಿಸಿದ ತಹಶೀಲ್ದಾರ್ ಗೆ ನಾಗರಿಕರ ಸನ್ಮಾನ

ಸ್ವಾಂತಂತ್ರ್ಯ ದಿನಾಚರಣೆ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಧ್ವಜಕಟ್ಟೆ...

ಕೊರಟಗೆರೆ | 79 ನೇ ಭಾರತ ಸ್ವಾತಂತ್ರೋತ್ಸವ : ಸಾಧಕರಿಗೆ ಗೌರವ ಸಮರ್ಪಣೆ

ಸ್ವತಂತ್ರ ಭಾರತದಲ್ಲಿ ಇಂದು ನಾವು ಬದುಕಿದ್ದೇವೆ ಎಂದರೆ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್...

Download Eedina App Android / iOS

X