‘ಆರ್‌ಸಿಬಿ’ಗೆ ಮತ್ತೆ ಕೊಹ್ಲಿ ಕ್ಯಾಪ್ಟನ್‌?; ಆರ್‌ಸಿಬಿ ಟ್ವೀಟ್ ಹೇಳುತ್ತಿರುವ ಗುಟ್ಟೇನು?

Date:

Advertisements

2025ರಲ್ಲಿ ನಡೆಯಲಿರುವ ಎಪಿಎಲ್‌ಗೆ ಕೆಲವೇ ದಿನಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಎಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಪ್ರಾಂಚೈಸಿಗಳು ತನ್ನ ಆಟಗಾರರನ್ನು ಉಳಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿವೆ. ಹಲವು ಆಟಗಾರರ ಸಂಭಾವನೆಯನ್ನು ಹೆಚ್ಚಿಸಲು ಪ್ರಾಂಚೈಸಿಗಳು ಮುಂದಾಗಿವೆ. ಎಲ್‌ಎಸ್‌ಜಿ ತಂಡದ ನಾಯಕರಾಗಿದ್ದ ಕೆ.ಎಲ್‌ ರಾಹುಲ್ ಇದೀಗ ತಂಡ ತೊರೆದಿದ್ದಾರೆ. ಅವರು ಆರ್‌ಸಿಬಿ ಸೇರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಇದೇ ವೇಳೆ, ಮುಂದಿನ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅವರೇ ಆರ್‌ಸಿಬಿಗೆ ಮತ್ತೆ ಕ್ಯಾಪ್ಟನ್‌ ಆಗಲಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಚರ್ಚೆ ಹೆಚ್ಚಾಗಿದೆ.

ಪ್ರಾಂಚೈಸಿಗಳು ಮತ್ತು ತಂಡಗಳ ಸಾಮಾಜಿಕ ಜಾಲತಾಣ ಖಾತೆಗಳು ಈಗ ಹೆಚ್ಚು ಸಕ್ರಿಯವಾಗಿವೆ. ಹಲವಾರು ಮಾಹಿತಿಗಳನ್ನು ಬಿಚ್ಚಿಡುತ್ತಿವೆ. ಕೆಲವೊಂದು ಕುತೂಹಲ ಮೂಡಿಸುವ ವಿಷಯಗಳನ್ನು ‘ಸರ್ಪ್ರೈಸಿಂಗ್ ಎಲಿಮೆಂಟ್’ ರೀತಿಯಲ್ಲಿ ನೀಡುತ್ತಿವೆ. ಆರ್‌ಬಿಸಿ ತಂಡದ ಫ್ರಾಂಚೈಸಿ ಕೂಡ ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಜ್ಜಾಗಿದೆ. ಅವರನ್ನು ನಾಯಕನ್ನನಾಗಿಯೂ ನೇಮಿಸುವ ಸಾಧ್ಯತೆಯ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಬುಧವಾರ ಆರ್‌ಸಿಬಿ ಟ್ವೀಟ್‌ ಮಾಡಿದ್ದು, ಅದರಲ್ಲಿ ಅಕ್ಷರಗಳ ಚಾಟ್‌ ಹಾಕಿದೆ. ಅದರಲ್ಲಿರುವ ಆಟಗಾರರ ಹೆಸರುಗಳನ್ನು ಮಾರ್ಕ್‌ ಮಾಡುವಂತೆ ಅಭಿಮಾನಿಗಳಿಗೆ ಟಾಸ್ಕ್‌ ನೀಡಿದೆ. ಆ ಒಗಟಿನ ಚಾಟ್‌ನಲ್ಲಿ ಕೊಹ್ಲಿ, ಮೊಹಮ್ಮದ್ ಸಿರಾಜ್, ರಜತ್ ಪಾಟಿದಾರ್, ಫಾಫ್ ಡು ಪ್ಲೆಸಿಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಯಶ್ ದಯಾಲ್ ಮತ್ತು ವಿಲ್ ಜಾಕ್ಸ್ ಅವರ ಹೆಸರುಗಳಿವೆ.

Advertisements

ಇದಕ್ಕೂ ಮುನ್ನ ಆರ್‌ಸಿಬಿ ವಿರಾಟ್ ಕೊಹ್ಲಿ ಅವರ ಚಿತ್ರಗಳ ಕೊಲಾಜ್‌ ಜೊತೆಗೆ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿತ್ತು. “ದೀಪಾವಳಿ, ಕಿಂಗ್ ಕೊಹ್ಲಿಯಿಂದ ಮರೆಯಲಾಗದ ಉಡುಗೊರೆ! ಹಬ್ಬದ ಕಾಲವು ನಮ್ಮ ವಿಶೇಷ ವ್ಯಕ್ತಿಯಿಂದ ಹೆಚ್ಚು ವಿಶೇಷಗೊಂಡಿದೆ! ಈ ವರ್ಷ ಅಂಗಡಿಯಲ್ಲಿ ಏನಿದೆ?” ಎಂದು ಪೋಸ್ಟ್‌ ಮಾಡಿತ್ತು.

ಈ ವಿಶೇಷ ಏನು ಎಂಬ ವಿಚಾರದಲ್ಲಿ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಿ ಪುನರಾಗಮಿಸುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://twitter.com/RCBTweets/status/1851481657846493423

“ಐಪಿಎಲ್ 2025ರ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ. ಇದು ದೊಡ್ಡ ದೀಪಾವಳಿ” ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

Download Eedina App Android / iOS

X